ಬ್ರೇಕಿಂಗ್ ನ್ಯೂಸ್
05-04-23 10:18 pm Bangalore Correspondent ಕ್ರೈಂ
ಬೆಂಗಳೂರು, ಎ.5 : ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು ಆಕೆಯನ್ನು ಪ್ರಿಯಕರನೇ ಕೊಲೆಗೈದು ಸುಟ್ಟು ಹಾಕಿದ ಬಗ್ಗೆ ಸಂಶಯ ವ್ಯಕ್ತವಾಗಿದೆ. ಮಂಜು (32) ಕೊಲೆಯಾದ ಮಹಿಳೆ.
ಬೆಂಗಳೂರು ಹೊರವಲಯದ ಹೆಬ್ಬಗೋಡಿ ವ್ಯಾಪ್ತಿಯ ಸಿಂಗೇನ ಅಗ್ರಹಾರದಲ್ಲಿ ಘಟನೆ ನಡೆದಿದೆ. ದೇಹವನ್ನು ಕತ್ತರಿಸಿ ನಿರ್ಜನ ಪ್ರದೇಶ ಸುಟ್ಟು ಹಾಕಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಲ್ಲಲ್ಲಿ ಚದುರಿ ಬಿದ್ದ ದೇಹದ ಭಾಗಗಳನ್ನು ಪತ್ತೆ ಮಾಡಲಾಗಿದೆ.
ಮಂಜುವನ್ನು ಕೊಲೆಗೈದಿರುವ ಬಗ್ಗೆ ಸಂಬಂಧಿಕರು ಆರೋಪಿಸಿದ್ದಾರೆ. ಈ ಕುರಿತು ಹೆಬ್ಬಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಜು ಜತೆ 10 ವರ್ಷಗಳಿಂದ ನಾರಾಯಣ್ ಎಂಬಾತ ಅನೈತಿಕ ಸಂಬಂಧದಲ್ಲಿದ್ದು ಆತನೇ ಕೊಲೆಗೈದ ಆರೋಪ ಕೇಳಿಬಂದಿದೆ. ನಾರಾಯಣ್ ಸಂಪಿಗೆನಗರದಲ್ಲಿ ಕಿರಾಣಿ ಅಂಗಡಿ ನಡೆಸ್ತಿದ್ದರೆ, ಮಂಜು ಅಪಾರ್ಟ್ಮೆಂಟ್ ಗಳಲ್ಲಿ ಮನೆಕೆಲಸ ಮಾಡುತ್ತಿದ್ದಳು. ಕೆಲವು ದಿನಗಳ ಹಿಂದೆ ಮಂಜು ಜೊತೆ ನಾರಾಯಣ್ ಜಗಳವಾಡಿದ್ದು ನೀನು ಕೆಲಸಕ್ಕೆ ಹೋಗಬಾರದೆಂದು ತಾಕೀತು ಮಾಡಿದ್ದ ಎನ್ನಲಾಗಿದೆ. ಆದರೆ ನಾರಾಯಣ್ ಮಾತನ್ನು ಲೆಕ್ಕಿಸದೆ ಮಂಜು ಕೆಲಸಕ್ಕೆ ಹೋಗಿದ್ದಳು.
ಮಾ.29ರಿಂದ ಮಹಿಳೆ ಕಾಣೆಯಾಗಿದ್ದು ಹೆಬ್ಬಗೋಡಿ ಠಾಣೆಗೆ ತಂಗಿ ಲಕ್ಷ್ಮಿ ನಾಪತ್ತೆ ದೂರು ನೀಡಿದ್ದಳು. ಈ ನಡುವೆ, ನಿರ್ಜನ ಪ್ರದೇಶದಲ್ಲಿ ಸುಟ್ಟು ಹೋಗಿದ್ದ ಸ್ಥಿತಿಯಲ್ಲಿ ಶವ ಸಿಕ್ಕಿತ್ತು. ಸಂಶಯದಲ್ಲಿ ಮಂಜು ತಂಗಿ ಲಕ್ಷ್ಮಿಯನ್ನು ಕರೆದು ಪೊಲೀಸರು ತೋರಿಸಿದ್ದು ಚಪ್ಪಲಿ, ಕೈ ಬಳೆ ಕಂಡು ದೇಹದ ಗುರುತು ಹಿಡಿದಿದ್ದಾಳೆ. ಇದೀಗ ಸಂಪಿಗೆನಗರ ನಿವಾಸಿ ನಾರಾಯಣ್ ಮೇಲೆ ಕೊಲೆ ಆರೋಪ ದಾಖಲಾಗಿದೆ. ಇದೇ ವೇಳೆ, ಆರೋಪಿ ನಾರಾಯಣ್ ನಾಪತ್ತೆಯಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
Bangalore married woman murdered by boyfriend over work issue. The deceased has been knows as Manju. Manju and Narayan had illecit affair from past 10 years. Manju was burnt and cut into pieces aftee manju began to to work which Narayan didn't like.
26-04-24 03:04 pm
HK News Desk
Income tax raid, BJP leader, Bangalore: ಬಿಜೆಪ...
25-04-24 11:07 pm
Cm Siddaramaiah Neha house visit: ಹುಬ್ಬಳ್ಳಿ ;...
25-04-24 10:57 pm
Shivaraj Tangadagi, Janardhana Reddy: ಶಿವರಾಜ...
25-04-24 09:57 pm
CID team, Neha house Hubballi: ಹುಬ್ಬಳ್ಳಿ ನೇಹಾ...
25-04-24 02:19 pm
26-04-24 02:58 pm
HK News Desk
Road Accident In Telangana: ಹಾಳಾಗಿ ನಿಂತಿದ್ದ ಲ...
25-04-24 03:49 pm
Groom electrocuted in Rajasthan: ರೆಸಾರ್ಟ್ ನಲ್...
24-04-24 05:01 pm
Pm Modi, Muslims: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ...
22-04-24 10:37 pm
ಮದುವೆ ಮುಗಿಸಿ ವಾಪಾಸ್ ಆಗುವ ವೇಳೆ ಭೀಕರ ಅಪಘಾತ ; ಓ...
21-04-24 03:23 pm
26-04-24 03:48 pm
Udupi Correspondent
Mangalore voting live: ದಕ್ಷಿಣ ಕನ್ನಡ ಕ್ಷೇತ್ರ ;...
26-04-24 02:18 pm
Nari Shakti, Polling booth in Mangalore: ಮೋದಿ...
26-04-24 01:47 pm
Bantwal bride vote, Mangalore: ಹಸಮಣೆ ಏರೋದಕ್ಕೂ...
26-04-24 01:03 pm
Congress Booth Photo, Puttur: ಮೊಬೈಲ್ ನಿರ್ಬಂಧ...
26-04-24 12:11 pm
26-04-24 03:59 pm
Mangalore Correspondent
Mangalore Fraud, crime, Krishnaprasad Shetty:...
25-04-24 10:18 pm
Bangalore crime, Dacoity gang, 40 lakhs, robb...
25-04-24 03:33 pm
Gang raped in Bengaluru: ಬೆಂಗಳೂರಿನಲ್ಲಿ ಯುವತಿ...
25-04-24 12:19 pm
Glide touist bus, Mangalore, crime: ಬೆಂಗಳೂರು...
24-04-24 10:48 pm