ಕೋಟೆಕಾರು ಹೆದ್ದಾರಿ ಬದಿ ನಿಲ್ಲಿಸಿದ್ದ ಪಿಕಪ್ ಕಳವು ; ಅಂತಾರಾಜ್ಯ ವಾಹನ ಚೋರ ಉಳ್ಳಾಲ ಪೊಲೀಸರ ಬಲೆಗೆ 

08-04-23 07:37 pm       Mangaluru correspondent   ಕ್ರೈಂ

. 66ರ ಕೋಟೆಕಾರಿನಲ್ಲಿ ಹೆದ್ದಾರಿ ಬದಿ ನಿಲ್ಲಿಸಿದ್ದ ಪಿಕಪ್ ವಾಹನ ಕಳವುಗೈದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಕಳವಾಗಿದ್ದ ಪಿಕಪ್ ವಾಹನವನ್ನ ವಶಪಡಿಸಿಕೊಳ್ಳಲಾಗಿದೆ. 

ಉಳ್ಳಾಲ, ಎ.8: ರಾ.ಹೆ. 66ರ ಕೋಟೆಕಾರಿನಲ್ಲಿ ಹೆದ್ದಾರಿ ಬದಿ ನಿಲ್ಲಿಸಿದ್ದ ಪಿಕಪ್ ವಾಹನ ಕಳವುಗೈದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಕಳವಾಗಿದ್ದ ಪಿಕಪ್ ವಾಹನವನ್ನ ವಶಪಡಿಸಿಕೊಳ್ಳಲಾಗಿದೆ. 

ಕೇರಳ ರಾಜ್ಯದ ಮೇಲ್ಪರಂಬ ಮಾಂಗಾಡ್ ನಿವಾಸಿ ಅಹಮ್ಮದ್ ರಮ್ಸಾನ್ ಯಾನೆ ರಮ್ಸಾನ್ (26) ಬಂಧಿತ ಆರೋಪಿ. ಜನವರಿ 3 ರಂದು ಕೋಟೆಕಾರು ಸೌತ್ ಇಂಡಿಯಾ ಮರದ ಡಿಪೋ ಬಳಿ ನಿಲ್ಲಿಸಲಾಗಿದ್ದ ಪಿಕಪ್ ಕಳವು ನಡೆದಿತ್ತು. ಈ ಕುರಿತು ವಾಹನ ಮಾಲೀಕ ಮಹಮ್ಮದ್ ಶರೀಫ್ ಎಂಬವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಉಳ್ಳಾಲ ಪೊಲೀಸರು ಅಂತರಾಜ್ಯ ವಾಹನ ಕಳ್ಳರ ಜಾಡು ಹಿಡಿದಾಗ, ಆರೋಪಿ ರಮ್ಸಾನ್ ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ ಪಿಕಪ್ ವಾಹನ ಕಳವು ಬೆಳಕಿಗೆ ಬಂದಿದೆ.

ಆರೋಪಿ ವಿರುದ್ಧ ಉಳ್ಳಾಲ, ಬೆಳ್ತಂಗಡಿ, ಮಡಿಕೇರಿ, ಕೇರಳದ ಹೊಸದುರ್ಗ, ಕಾಸರಗೋಡು, ಕುಂಬಳೆ, ಬೇಡಗಂ, ಬೇಕಲ ಪೊಲೀಸ್ ಠಾಣೆಗಳಲ್ಲಿ ವಾಹನ ಕಳವು ಪ್ರಕರಣಗಳು ಇವೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಸಂದೀಪ್ ಜಿ.ಎಸ್, ಪಿಎಸ್ಐಗಳಾದ ಮಂಜೇಶ್ವರ ಚಂದಾವರ, ಕೃಷ್ಣ ಕೆ.ಹೆಚ್, ಸಂತೋಷ್,ಎಎಸ್ ಐಗಳಾದ ಶೇಖರ ಗಟ್ಟಿ, ರಿಜು, ಹೆಚ್.ಸಿಗಳಾದ ಪ್ರವೀಣ್ ಶೆಟ್ಟಿ, ಪಿಸಿಗಳಾದ ಅಶೋಕ್,ವಾಸುದೇವ ಚೌಹಾಣ್ ಭಾಗಿಯಾಗಿದ್ದರು.

Pickup van robbery at Kotekar in Mangalore, inter state accused arrested by Ullal police