ಬ್ರೇಕಿಂಗ್ ನ್ಯೂಸ್
05-05-23 07:59 pm Mangalore Correspondent ಕ್ರೈಂ
ಉಳ್ಳಾಲ, ಮೇ 5 : ಕೇರಳ- ಕರ್ನಾಟಕದ ಗಡಿ ಪ್ರದೇಶ ತಲಪಾಡಿಯ ತಚ್ಛಣಿ ಎಂಬಲ್ಲಿ ಗುಡ್ಡ ಪ್ರದೇಶದ ಜುಗಾರಿ ಅಡ್ಡೆಗೆ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯ ನಾಯಕ್ ನೇತೃತ್ವದಲ್ಲಿ ಪೊಲೀಸರು ನಿನ್ನೆ ರಾತ್ರಿ ದಾಳಿ ನಡೆಸಿದ್ದು ಜೂಜು ನಿರತ 8 ಮಂದಿಯನ್ನು ಬಂಧಿಸಿ ನಗದು, ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು ಇಬ್ಬರು ಪರಾರಿಯಾಗಿದ್ದಾರೆ.
ಬಂಧಿತರನ್ನ ಮಂಜೇಶ್ವರ ಕುಂಜತ್ತೂರು ನಿವಾಸಿ ಅಶ್ವಥ್ ಯಾನೆ ನಿಚ್ಚು(35), ಸುಂಕದಕಟ್ಟೆ ನಿವಾಸಿ ಇಕ್ಬಾಲ್ (34), ಬೀರಿ ನಿವಾಸಿ ಅಬ್ಬಾಸ್ (50), ಮಾಡೂರು ನಿವಾಸಿ ನವೀನ್ (38), ಮಾರಿಪಳ್ಳ ನಿವಾಸಿ ಶಂಶುದ್ದೀನ್ (37), ಅಡ್ಯಾರ್ ನಿವಾಸಿ ಇಸ್ಮಾಯಿಲ್ (65), ಬಜಾಲ್ ನಿವಾಸಿ ಹರೀಶ್(42) ಎಂದು ಗುರುತಿಸಲಾಗಿದೆ. ಬಂಧಿತರಿಂದ ಎಂಟು ಬೈಕ್ , ಒಂದು ರಿಕ್ಷಾ ಸಹಿತ 14,500 ನಗದು ಹಣವನ್ನು ಪೊಲೀಸರು ವಶಪಡಿಸಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ತಲಪಾಡಿ ತಚ್ಛಾಣಿಯ ವಿಲೇಜ್ ಬಾರ್ ಎದುರಿನ ಗುಡ್ಡ ಪ್ರದೇಶದಲ್ಲಿ ಸ್ಥಳೀಯ ಪ್ರಭಾವಿ ಗ್ರಾಮ ಪಂಚಾಯತ್ ಸದಸ್ಯನೇ ಜುಗಾರಿ ಅಡ್ಡೆ ನಡೆಸುತ್ತಿದ್ದಾನೆ ಎನ್ನುವ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಖಚಿತ ಮಾಹಿತಿ ಪಡೆದ ಎಸಿಪಿ ಧನ್ಯ ನಾಯಕ್ ನೇತೃತ್ವದ ತಂಡ ಗುರುವಾರ ರಾತ್ರಿ ದಾಳಿ ನಡೆಸಿದೆ.
ತಲಪಾಡಿಯ ಗುಡ್ಡ ಪ್ರದೇಶಗಳು ಕೇರಳಕ್ಕೆ ತಾಗಿಕೊಂಡಿರುವ ಗಡಿ ಪ್ರದೇಶವಾಗಿದ್ದು ಇದರ ಲಾಭವೆತ್ತುತ್ತಿರುವ ಗ್ರಾಮದ ಸದಸ್ಯ ಒಮ್ಮೆ ಕೇರಳ ಪ್ರದೇಶ, ಮತ್ತೊಮ್ಮೆ ಕರ್ನಾಟಕ ಪ್ರದೇಶದ ಗುಡ್ಡದಲ್ಲಿ ಜೂಜು ನಡೆಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಹಣ ಗಳಿಸುತ್ತಿದ್ದನಂತೆ. ತಲಪಾಡಿ ಗಡಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಧಂದೆಯಲ್ಲಿ ಈತ ತೊಡಗಿಕೊಂಡಿದ್ದ. ಮಂಗಳೂರಿಗೆ ನೂತನ ಕಮಿಷನರ್ ಬಂದ ಮೇಲೆ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಸ್ವಲ್ಪ ಬ್ರೇಕ್ ಬಿದ್ದುದರಿಂದ ಇದೀಗ ಈ ಗ್ರಾಮ ಪಂಚಾಯತ್ ಸದಸ್ಯ ಗುಡ್ಡ ಪ್ರದೇಶಗಳಲ್ಲಿ ವೈಭವದ ಜುಗಾರಿ ಅಡ್ಡೆ ಮಾಡಿ ಯುವಕರನ್ನ ಹಾದಿ ತಪ್ಪಿಸುವ ಕಾರ್ಯದಲ್ಲಿ ತೊಡಗಿಸಿದ್ದು ಪೊಲೀಸರ ದಾಳಿ ವೇಳೆ ತಪ್ಪಿಸಿಕೊಂಡಿದ್ದಾನೆ.
Ullal South Acp Dhanya Nayak raids gambling centre, eight arrested at Talapady, cash, car seized. It is said that the Gambling centre was lead by Gram Panchyath member. It is said that during the raid he has fleed from the spot and the police are on search for the absconding accused.
08-06-23 12:43 pm
Bangalore Correspondent
ಸಕಲೇಶಪುರ ; ಕ್ಯಾಂಪ್ನಲ್ಲಿ ಮಧ್ಯಾಹ್ನದ ಊಟ ಸೇವಿಸಿ...
07-06-23 06:54 pm
ವಯಸ್ಸು, ಅನಾರೋಗ್ಯ, ವಿರೋಧಿ ಅಲೆ ; 25ರಲ್ಲಿ 13 ಬಿಜ...
07-06-23 03:17 pm
13 ಸಂಸದರ ವಿರುದ್ಧ ಅಪಪ್ರಚಾರ, ಟಿಕೆಟ್ ಇಲ್ಲವೆಂದು ಸ...
06-06-23 10:38 pm
ಲೋಕಸಭೆ ಚುನಾವಣೆಗೆ ಬಿಜೆಪಿ- ಜೆಡಿಎಸ್ ಮೈತ್ರಿ ಸುಳಿವ...
06-06-23 10:28 pm
07-06-23 10:58 pm
HK News Desk
ಟಿಪ್ಪು, ಔರಂಗಜೇಬ್ ವೈಭವೀಕರಿಸಿ ಪೋಸ್ಟ್ ; ಕೊಲ್ಲಾಪು...
07-06-23 10:32 pm
ಯುಪಿಯಲ್ಲಿ ಅತೀಕ್ ಅಹ್ಮದ್ ಬೆನ್ನಲ್ಲೇ ಮತ್ತೊಬ್ಬ ಗ...
07-06-23 08:51 pm
ಮೋದಿ ಮ್ಯಾಜಿಕ್, ಹಿಂದುತ್ವದಿಂದ ಚುನಾವಣೆ ಗೆಲ್ಲಕ್ಕಾ...
06-06-23 09:37 pm
ತ್ರಿವಳಿ ರೈಲು ದುರಂತ ; 40 ಜನರ ಸಾವಿಗೆ ವಿದ್ಯುತ್ ಶ...
06-06-23 08:18 pm
08-06-23 10:48 am
Mangalore Correspondent
ಮಂಗಳೂರು-ಅಹಮದಾಬಾದ್ ನಡುವೆ ವಿಶೇಷ ರೈಲು ; ಜೂನ್ 9ರ...
07-06-23 11:09 pm
ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಭೀತಿ ; ಕರಾವಳಿಯಲ್ಲ...
07-06-23 09:34 pm
ಹೃದಯ ತಜ್ಞರು ಮನೆ ಬಾಗಿಲಿಗೆ ; ದೇಶದಲ್ಲೇ ಮೊದಲ ಬಾರಿ...
07-06-23 09:13 pm
ಪಿಲಿಕುಳ ಜೈವಿಕ ಉದ್ಯಾನದಲ್ಲಿ ಹುಲಿ ಸಾವು ; ಎರಡು ಹು...
07-06-23 02:04 pm
06-06-23 10:43 am
Mangalore Correspondent
Illegal Cow Transport: ಕುತ್ತಾರಿನಲ್ಲಿ ಉಸಿರುಗಟ್...
05-06-23 01:02 pm
ಪರವಾನಿಗೆ ಇಲ್ಲದೆ ಮನೆ ನಿರ್ಮಾಣ ; ಪ್ರಶ್ನಿಸಿದಕ್ಕೆ...
04-06-23 02:14 pm
ತರೀಕೆರೆ ಕಾಂಗ್ರೆಸ್ ಶಾಸಕರ ಅಭಿನಂದನ ಕಾರ್ಯಕ್ರಮದಲ್ಲ...
04-06-23 12:47 pm
ಹಿಂದು ಹೆಸರಲ್ಲಿ ಪ್ರೇಮಿಸಿ ಯುವತಿಯರ ಬ್ಲಾಕ್ಮೇಲ್ ;...
03-06-23 08:51 pm