ಬಾಲಕಿಗೆ ಕಿರುಕುಳ ಹಿನ್ನೆಲೆ ; ಪೆರ್ಲದಲ್ಲಿ ಯುವಕನ ಇರಿದು ಕೊಲೆ

26-06-23 10:39 pm       HK News Desk   ಕ್ರೈಂ

ಬಾಲಕಿಯೊಬ್ಬಳಿಗೆ ಕಿರುಕುಳ ನೀಡುತ್ತಿದ್ದಾನೆಂದು ಯುವಕನನ್ನು ಇರಿದು ಹತ್ಯೆಗೈದ ಘಟನೆ ಪೆರ್ಲ ಸಮೀಪದ ಕಜಂಪಾಡಿ ಎಂಬಲ್ಲಿ ನಡೆದಿದೆ.

ಕಾಸರಗೋಡು, ಜೂನ್ 26: ಬಾಲಕಿಯೊಬ್ಬಳಿಗೆ ಕಿರುಕುಳ ನೀಡುತ್ತಿದ್ದಾನೆಂದು ಯುವಕನನ್ನು ಇರಿದು ಹತ್ಯೆಗೈದ ಘಟನೆ ಪೆರ್ಲ ಸಮೀಪದ ಕಜಂಪಾಡಿ ಎಂಬಲ್ಲಿ ನಡೆದಿದೆ.

ಹತ್ಯೆಗೀಡಾದ ಯುವಕನನ್ನು ಮಧೂರು ನಿವಾಸಿ ಸಂದೀಪ್(26) ಎಂದು ಗುರುತಿಸಲಾಗಿದೆ. ಕಜಂಪಾಡಿ ನಿವಾಸಿ ಪವನ್ ರಾಜ್ ಎಂಬಾತ ಚೂರಿ ಇರಿದು ಹತ್ಯೆ ಮಾಡಿದ್ದಾನೆ ಎನ್ನಲಾಗುತ್ತಿದ್ದು, ಬದಿಯಡ್ಕ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಚೂರಿ ಇರಿತದಿಂದ ತೀವ್ರ ಗಾಯಗೊಂಡ ಸಂದೀಪ್ ನನ್ನು ಕೂಡಲೇ ಕಾಸರಗೋಡಿನ ಪರಿಯಾರಂ ಮೆಡಿಕಲ್ ಕಾಲೇಜಿಗೆ ಕರೆದೊಯ್ಯಲಾಗಿದ್ದು, ಅಷ್ಟರಲ್ಲಿ ಮೃತಪಟ್ಟಿದ್ದಾನೆ.

ಬಾಲಕಿಗೆ ಕಿರುಕುಳ ನೀಡುತ್ತಿದ್ದ ಬಗ್ಗೆ ಪವನ್ ರಾಜ್ ಈ ಹಿಂದೆಯೂ ಎಚ್ಚರಿಕೆ ನೀಡಿದ್ದು ಕೊಲ್ಲುವುದಾಗಿ ಸಂದೀಪ್ ಗೆ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ. ಭಾನುವಾರ ಮತ್ತೆ ಬಾಲಕಿ ಹಿಂದೆ ಬಿದ್ದಿರುವುದನ್ನು ನೋಡಿ ಹಲ್ಲೆ ನಡೆಸಿದ್ದಾನೆಂದು ತಿಳಿದುಬಂದಿದೆ.

A young man was brutally hacked to death in Kajampady, Perla by another man accused of harassing a girl, on Sunday afternoon. The victim, Sandeep (26) from Aranthodu, Madhur, succumbed to his injuries.