ಬ್ರೇಕಿಂಗ್ ನ್ಯೂಸ್
18-08-23 10:19 am Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 17: ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾದರೂ, ಆಕೆಯ ಸೆಕ್ಸ್ ದಾಹ ತೀರಿಸಲು ಗಂಡನ ಸ್ನೇಹಿತನೇ ಮುಂದಾಗಿದ್ದ. ಈ ವೇಳೆ, ಸಂಬಂಧಿಕಳೂ ಆಗಿರುವ ಅಪ್ರಾಪ್ತ ಬುದ್ಧಿಮಾಂದ್ಯ ಹುಡುಗಿಯೊಬ್ಬಳು ನೋಡಬಾರದ ಭಂಗಿಯಲ್ಲಿ ನೋಡಿದಳೆಂದು ಆಕೆಯನ್ನೂ ಆಸ್ಪತ್ರೆ ಕೊಠಡಿಯಲ್ಲೇ ಅತ್ಯಾಚಾರಗೈದ ಘಟನೆ ನಡೆದಿದ್ದು ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು ಮಹಿಳೆ ಮತ್ತು ಆಕೆಯ ದಾಹ ತೀರಿಸಿದ ಬಿಹಾರ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಕುಲಶೇಖರದ ಮನ್ಸೂರ್ ಅಹ್ಮದ್ ಬಾಬಾ ಶೇಖ್ ಮತ್ತು ಆತನ ಪರಿಚಯದ ಸ್ನೇಹಿತ ಬಿಹಾರ ಮೂಲದ ಮುಂಬೈಯಲ್ಲಿ ವಾಸವಿರುವ ಅಬ್ದುಲ್ ಹಲೀಂ ಆಗಸ್ಟ್ 10ರಂದು ಬೈಕಿನಲ್ಲಿ ಕಾಸರಗೋಡಿಗೆ ಹೋಗಿ ಹಿಂತಿರುಗುತ್ತಿದ್ದಾಗ ಮಂಜೇಶ್ವರದ ಹೊಸಂಗಡಿ ಬಳಿ ಅಪಘಾತಕ್ಕೀಡಾಗಿದ್ದರು. ಗಾಯಗೊಂಡ ಇಬ್ಬರನ್ನೂ ಮಂಗಳೂರಿನ ಇಂಡಿಯಾನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಇಬ್ಬರು ಕೂಡ ಒಂದೇ ಕೊಠಡಿಯಲ್ಲಿ ರೂಮ್ ಪಡೆದಿದ್ದು ನಡುವೆ ಸ್ಕ್ರೀನ್ ಹಾಕಿ ಉಳಿದುಕೊಂಡಿದ್ದರು. ಈ ವೇಳೆ, ಮನ್ಸೂರ್ ಅಹ್ಮದ್ ಅವರ ಅಕ್ಕ ತನ್ನ ಇಬ್ಬರು ಹೆಣ್ಮಕ್ಕಳೊಂದಿಗೆ ಬಂದಿದ್ದರು. ಆನಂತರ, ಭಿನ್ನ ಸಾಮರ್ಥ್ಯದ ಅಪ್ರಾಪ್ತ ಮಗಳನ್ನು ಆಸ್ಪತ್ರೆಯಲ್ಲಿ ತಮ್ಮನ ಹೆಂಡತಿ ಶಮೀನಾ ಬಾನು ಜೊತೆ ಬಿಟ್ಟು ಮಂಜೇಶ್ವರ ಪೊಲೀಸ್ ಠಾಣೆಗೆ ಅಪಘಾತದ ಬಗ್ಗೆ ವಿಚಾರಿಸಲು ತೆರಳಿದ್ದರು.
ಈ ವೇಳೆ, ಶಮೀನಾ ಬಾನು ಮತ್ತು ಆಕೆಯ ಗಂಡನ ಸ್ನೇಹಿತ ಅಬ್ದುಲ್ ಸಲೀಂ ಸೆಕ್ಸ್ ನಲ್ಲಿ ತೊಡಗಿಸಿದ್ದರು. ಇದನ್ನು ಅಪ್ರಾಪ್ತ ಹುಡುಗಿ ನೋಡಿ ಮುಜುಗರ ಪಟ್ಟಿದ್ದಳು. ಅದನ್ನು ಗಮನಿಸಿದ ಶಮೀನಾ ಬಾನು ಆಕೆಯನ್ನು ಕರೆದು ಬೆಡ್ ನಲ್ಲಿ ಕೂರಿಸಿದ್ದು ಸ್ನೇಹಿತ ಅಬ್ದುಲ್ ಸಲೀಂ ಎದೆಯ ಭಾಗವನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆದರೆ ಹುಡುಗಿ ವಿರೋಧಿಸಿ ಹೊರಗೆ ಹೋಗಲೆತ್ನಿಸಿದ್ದು ಶಮೀನಾ ಬಾನು ಅವಳನ್ನು ಹಿಡಿದಿಟ್ಟು ಸ್ನೇಹಿತ ಅಬ್ದುಲ್ ಸಲೀಂನಲ್ಲಿ ಬಲಾತ್ಕಾರವಾಗಿ ಅತ್ಯಾಚಾರ ಮಾಡಿಸಿದ್ದಾಳೆ.
ಈ ಬಗ್ಗೆ ವಿಚಾರ ತಿಳಿದ ಅಪ್ರಾಪ್ತ ಹುಡುಗಿಯ ತಾಯಿ ಮಹಿಳಾ ಠಾಣೆಗೆ ದೂರು ನೀಡಿದ್ದು ಆರೋಪಿತ ತಮ್ಮನ ಹೆಂಡತಿ ಶಮೀನಾ ಬಾನು (22) ವನ್ನು ಪೊಲೀಸರು ಆಗಸ್ಟ್ 16ರಂದು ಬಂಧಿಸಿದ್ದು ಜೈಲಿಗೆ ತಳ್ಳಿದ್ದಾರೆ. ಇದೇ ವೇಳೆ, ಆರೋಪಿ ಅಬ್ದುಲ್ ಸಲೀಂ(37) ತಪ್ಪಿಸಿಕೊಳ್ಳಲು ಯತ್ನಿಸಿದ್ದು ಗೋವಾ ಮೂಲಕ ಮುಂಬೈಗೆ ತೆರಳುತ್ತಿದ್ದಾನೆಂಬ ಮಾಹಿತಿ ಪಡೆದ ಮಂಗಳೂರು ಪೊಲೀಸರು ಮಡಗಾಂವ್ ಪೊಲೀಸರ ಮೂಲಕ ಆಗಸ್ಟ್ 17ರಂದು ದಸ್ತಗಿರಿ ಮಾಡಿಸಿದ್ದಾರೆ.
Mangalore Masturbation with friends wife in Indiana Hospital in Managlore, rapes mentally Challanged girl for seeing. The arrested has been identifed as Abdul Salim. He was arrested within a day with the help of Goa Police by Commissioner Kuldeep Kumar Jain.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am