ಬ್ರೇಕಿಂಗ್ ನ್ಯೂಸ್
22-08-23 05:45 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 22: ಕಾವೂರು ಠಾಣೆ ವ್ಯಾಪ್ತಿಯ ಶಾಂತಿನಗರದಲ್ಲಿ ವ್ಯಕ್ತಿಯೊಬ್ಬನ ಮೇಲೆ ತಲವಾರು ದಾಳಿ ನಡೆಸಲು ಗುಂಪೊಂದು ಯತ್ನಿಸಿದ್ದು, ಘಟನೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಪಂಜಿಮೊಗರು ಉರುಂದಾಡಿ ಗುಡ್ಡೆಯ ನಿವಾಸಿ ಚರಣ್ ರಾಜ್ (23), ಹೊಸಬೆಟ್ಟು ಕುಳಾಯಿ ನಿವಾಸಿ ಸುಮಂತ್ ಬರ್ಮನ್ (24), ಕೋಡಿಕಲ್ ನಿವಾಸಿ ಅವಿನಾಶ್ (24) ಬಂಧಿತರು. ಇವರು ಆಗಸ್ಟ್ 20ರಂದು ರಾತ್ರಿ ಶಾಂತಿನಗರದ ಎಂವಿ ಶೆಟ್ಟಿ ಕಾಲೇಜು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಹೇಬ್ ಎಂಬಾತನ ಮೇಲೆ ತಲವಾರು ಬೀಸಲು ಯತ್ನಿಸಿದ್ದರು. ಸುಹೇಬ್ ಒಂದು ವರ್ಷದ ಹಿಂದೆ ಕುಳೂರಿನ ನಾಗಬನಕ್ಕೆ ಹಾನಿ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದ.
ಸುಹೇಬ್ ಬೇರೊಂದು ತಂಡದಲ್ಲಿ ಗುರುತಿಸಿಕೊಂಡಿದ್ದು, ಈತ ಒಬ್ಬಂಟಿ ಸಿಕ್ಕರೆ ಹೊಡೆಯಬೇಕೆಂದು ಚರಣ್ ಮತ್ತಿತರರು ಹೊಂಚು ಹಾಕಿದ್ದರು. ಮೊನ್ನೆ ರಾತ್ರಿ ಸಿಕ್ಕಿದಾಗ ಹೊಡೆಯಲು ಯತ್ನಿಸಿದ್ದು ಸುಹೇಬ್ ಪರಾರಿಯಾಗಿದ್ದಾನೆ. ಎರಡೂ ತಂಡ ಗಾಂಜಾ ಪಾರ್ಟಿಗಳಾಗಿದ್ದು, ಗಾಂಜಾ ನಶೆಯಲ್ಲೇ ಕೃತ್ಯ ಎಸಗಿದ್ದಾರೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅನ್ಯಕೋಮಿನ ವ್ಯಕ್ತಿಯೆಂದು ಹಲ್ಲೆಗೆ ಯತ್ನ ನಡೆದಿದ್ದಲ್ಲ. ಗಾಂಜಾ ನಶೆ ಮತ್ತು ವೈಯಕ್ತಿಕ ದ್ವೇಷದಲ್ಲಿ ಕೃತ್ಯ ಎಸಗಿದ್ದಾರೆ.
ಆರೋಪಿ ಚರಣ್ ರಾಜ್ ವಿರುದ್ಧ ಈ ಹಿಂದೆ ಉರ್ವಾ, ಪಣಂಬೂರು, ಕಾವೂರು ಠಾಣೆಯಲ್ಲಿ ಐದು ಪ್ರಕರಣ ದಾಖಲಾಗಿರುತ್ತದೆ. ಸುಮನ್ ನಾಲ್ಕು ಪ್ರಕರಣ, ಅವಿನಾಶ್ ವಿರುದ್ಧ ಐದು ಪ್ರಕರಣ ದಾಖಲಾಗಿದೆ. ತಲವಾರು ಸಹಿತ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Three arrested for attacking man using swords in Ganja effect at Kavoor in Mangalore. The arrested accused are identified as Charan Raj alias Charan (23), a resident of Urundadigudde, Mangaluru, Sumant Burman (24) from Hosabettu, Suratkal and Avinash (24), a resident of Kodikal Sunkadakatte Kalbavai Road.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
18-06-25 01:29 pm
HK News Desk
ಇಸ್ರೇಲ್ ದಾಳಿಗೆ ಕಂಗೆಟ್ಟ ಟೆಹ್ರಾನ್ ; ಯುದ್ಧ ನಿಲ್ಲ...
17-06-25 11:02 pm
ಇರಾನ್ ಸಂಘರ್ಷ ; ಇನ್ನೇನೋ ದೊಡ್ಡದು ನಡೆಯಲಿದೆ ಎಂದ ಟ...
17-06-25 10:47 pm
ಬಾಂಬ್ ಬೆದರಿಕೆ ; ಜರ್ಮನಿಯಿಂದ ಹೈದ್ರಾಬಾದ್ ಬರುತ್ತಿ...
16-06-25 05:29 pm
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
18-06-25 10:24 am
Mangalore Correspondent
Mangalore DC Mullai Muhilan Transferred, Dars...
17-06-25 09:57 pm
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
Mangalore Accident, Nanthoor, Doctor Amal: ಅತ...
17-06-25 12:43 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm