ಬ್ರೇಕಿಂಗ್ ನ್ಯೂಸ್
25-11-23 09:56 pm Mangalore Correspondent ಕ್ರೈಂ
ಮಂಗಳೂರು, ನ.25: ಸ್ಕಾರ್ಪಿಯೋ ಕಾರು ಚಾಲಕನೊಬ್ಬ ಮಧ್ಯರಾತ್ರಿ ಬೈಕಿಗೆ ಡಿಕ್ಕಿಯಾಗಿ ಸವಾರ ನೆಲಕ್ಕುರುಳಿದರೂ ಸ್ಥಳದಿಂದ ಪರಾರಿಯಾದ ಘಟನೆ ನಗರದ ಯೆಯ್ಯಾಡಿಯಲ್ಲಿ ನಡೆದಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡು ರಸ್ತೆಗೆ ಬಿದ್ದ ಬೈಕ್ ಸವಾರನನ್ನು ಇತರೇ ಕಾರು ಚಾಲಕರು ಕಂಡರೂ ಕಾಣದೆ ನಿರ್ಲಕ್ಷ್ಯ ತೋರಿದ್ದಾರೆ.
ನ.21ರಂದು ನಡುರಾತ್ರಿ 12.15ರ ಸುಮಾರಿಗೆ ಘಟನೆ ನಡೆದಿದ್ದು ಸವಾರ ಬೊಂದೇಲ್ ನಿವಾಸಿ ಆಲಿಸ್ಟರ್ ತೌರೊ (24) ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಫಂಕ್ಷನ್ ಮುಗಿಸಿ ನಡುರಾತ್ರಿಯಲ್ಲಿ ಬೈಕಿನಲ್ಲಿ ಮನೆಯತ್ತ ಹೊರಟಿದ್ದರೆ, ಯೆಯ್ಯಾಡಿ ಬಳಿ ಸ್ಕಾರ್ಪಿಯೊ ಚಾಲಕ ನೇರವಾಗಿ ತಿರುವು ಪಡೆದಿದ್ದ. ಇದನ್ನು ಗಮನಿಸದೆ ಬೈಕ್ ನೇರವಾಗಿ ಡಿಕ್ಕಿಯಾಗಿದ್ದು ರಸ್ತೆಗೆ ಎಸೆಯಲ್ಪಟ್ಟ ಸವಾರ ಆಲಿಸ್ಟರ್ ತೌರೊ ಮತ್ತು ಹಿಂಬದಿ ಸವಾರ ಲಾಯ್ಡ್ ಗಾಯಗೊಂಡಿದ್ದಾರೆ.
ರಸ್ತೆಗೆ ಬಿದ್ದು ಇಬ್ಬರು ಯುವಕರು ನರಳುತ್ತಿದ್ದರೂ, ಅದರ ಬೆನ್ನಲ್ಲೇ ಇನ್ನೊಬ್ಬ ಸ್ವಿಫ್ಟ್ ಕಾರು ಅದೇ ದಾರಿಯಲ್ಲಿ ಬಂದಿದ್ದು ಅದರ ಚಾಲಕ ನೋಡಿಯೂ ಕರುಣೆ ತೋರದೆ ಸ್ಥಳದಿಂದ ತೆರಳಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಸ್ಥಳೀಯರು ಬಂದಿದ್ದು ಗಾಯಗೊಂಡಿದ್ದ ಯುವಕರನ್ನು ಎತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಲಿಸ್ಟರ್ ತೌರೊ ಸ್ಥಿತಿ ಗಂಭೀರವಾಗಿದ್ದು ಮುಖ, ತಲೆಗೆ ಏಟಾಗಿದೆ. ಕೈ ಮುರಿದಿದ್ದು ಶಸ್ತ್ರಚಿಕಿತ್ಸೆ ನಡೆಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಗ್ಗೆ ಕದ್ರಿ ಸಂಚಾರಿ ಠಾಣೆಯಲ್ಲಿ ಹಿಟ್ ಅಂಡ್ ರನ್ ಕೇಸು ದಾಖಲಾಗಿದ್ದು ಕಾರನ್ನು ವಶಕ್ಕೆ ಪಡೆಯಲಾಗಿದೆ.
ಡೆಕೊರೇಶನ್ ಕೆಲಸ ಮಾಡುತ್ತಿದ್ದ ಆಲಿಸ್ಟರ್ ತೌರೊ ಬಡ ಕುಟುಂಬದ ಯುವಕನಾಗಿದ್ದು ಆಸ್ಪತ್ರೆ ಖರ್ಚು ಭರಿಸಲು ದಾನಿಗಳ ಸಹಾಯ ಯಾಚಿಸಿದ್ದಾರೆ. ಈತನ ಸೋದರ ಆಸ್ಪತ್ರೆಯಲ್ಲಿದ್ದು ನೋಡಿಕೊಳ್ಳುತ್ತಿದ್ದಾರೆ. ಸಹೃದಯರು ಇವರ ಗೂಗಲ್ ಪೇ ಅಥವಾ ಬ್ಯಾಂಕ್ ಖಾತೆಗೆ ನೆರವು ನೀಡುವಂತೆ ಕೇಳಿಕೊಂಡಿದ್ದಾರೆ. Google Pay: Astel Touro - 7795924633
Mangalore Yeyyadi accident, 24 year old youth Astel Touro admitted in hospital in serious condition. Video of the accident has gone viral on social media.
16-06-25 10:44 pm
Bangalore Correspondent
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
16-06-25 05:29 pm
HK News Desk
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
Israel Iran War, Generals Killed: ಮೂರನೇ ಮಹಾಯು...
14-06-25 12:00 pm
Kasaragod Deputy Tahsildar Suspended: ವಿಮಾನ ದ...
13-06-25 11:09 pm
16-06-25 11:06 pm
Mangalore Correspondent
Rain, Pilikula Zoo, Mangalore, Flood: ಪಿಲಿಕುಳ...
16-06-25 08:34 pm
Mangalore Rain, Belthanagdy, Bike: ಸವಣಾಲು ; ಧ...
16-06-25 05:07 pm
Mangalore, Pregnant Wife Suicide, Puthila Par...
16-06-25 12:30 pm
ನೆಲ್ಯಾಡಿ ಬಳಿ ಭೀಕರ ಅಪಘಾತ ; ನಿಲ್ಲಿಸಿದ್ದ ಲಾರಿಗೆ...
16-06-25 12:13 pm
16-06-25 03:05 pm
HK News Desk
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm
Mangalore, Yeyyadi Bar, Murder, Kaushik: ಯೆಯ್...
13-06-25 07:30 pm
Mangalore, Puttur, Dr Adarsh, Sullia, Marriag...
13-06-25 05:37 pm