ಬ್ರೇಕಿಂಗ್ ನ್ಯೂಸ್
26-11-23 06:47 pm Mangaluru Correspondent ಕ್ರೈಂ
ಉಳ್ಳಾಲ, ನ.26: ವನ್ ಗ್ರಾಮ್ ಗೋಲ್ಡ್ ಆಭರಣ ಧರಿಸಿ ನಿತಿನ್ ಶೆಟ್ಟಿ ಹೆಸರಲ್ಲಿ ನಗರದ ಹಲವು ಕಡೆಗಳಲ್ಲಿ ಅಮಾಯಕರಿಗೆ ವಂಚಿಸುತ್ತಿರುವ ಶೋಕಿಲಾಲ ಗೂಡ್ಸ್ ಮುನೀರ ಓಎಲ್ ಎಕ್ಸ್ ನಲ್ಲೂ ಮಹಿಳೆಯ ಹೆಸರಲ್ಲಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯೋರ್ವನ ಫೋಟೊ ಕ್ಯಾಮೆರಾ ಖರೀದಿಸಿ ಹಣ ಕೊಡದೆ ಪರಾರಿಯಾಗಿದ್ದು ಈ ಬಗ್ಗೆ ವಿದ್ಯಾರ್ಥಿ ಕದ್ರಿ ಠಾಣೆಗೆ ದೂರು ನೀಡಿದ್ದರೂ ಪೊಲೀಸರ ಅಸಡ್ಡೆಯಿಂದ ಮುನೀರ ಈಗಲೂ ವಂಚನೆ ಕೃತ್ಯ ಮುಂದುವರಿಸಿದ ವಿಚಾರ ತಿಳಿದುಬಂದಿದೆ.
ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಸೃಜನ್ ಆಳ್ವ ಎಂಬವರು ಓಎಲ್ ಎಕ್ಸ್ ಆಪಲ್ಲಿ ತನ್ನ ಕೆನನ್ ಕ್ಯಾಮೆರಾ ಮಾರಾಟಕ್ಕಿದೆ ಎಂದು ಜಾಹೀರಾತು ಹಾಕಿದ್ದರು.
+91 97392 09819, 088846 99575 ಸಂಖ್ಯೆಗಳಲ್ಲಿ ಮೊಬೈಲ್ ಕರೆ ಮಾಡಿದ ಮಹಿಳೆಯೋರ್ವಳು ತನಗೆ ಕ್ಯಾಮೆರಾ ಬೇಕೆಂದು ಹೇಳಿ ಸೃಜನ್ ಅವರನ್ನ ಅಕ್ಟೋಬರ್ 24 ರಂದು ಕಂಕನಾಡಿಗೆ ಬರುವಂತೆ ಹೇಳಿದ್ದಾಳೆ.
ಮಹಿಳೆಯ ಮಾತು ನಂಬಿ ಕಂಕನಾಡಿಗೆ ಬಂದ ಸೃಜನ್ ಗೆ ಬೈಕಲ್ಲಿ ಬಂದ ಆಭರಣಧಾರಿ ವ್ಯಕ್ತಿ ತಾನು ನಿತಿನ್ ಶೆಟ್ಟಿ ಎಂದು ಪರಿಚಯಿಸಿದ್ದು ಬೈಕ್ ಸಹಸವಾರೆ ಬುರ್ಖಾಧಾರಿ ಮಹಿಳೆ ಸೃಜನ್ ಕೈಯಿಂದ ಕ್ಯಾಮೆರಾ ಇಸ್ಕೊಂಡ ತಕ್ಷಣ ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದ. ಸುಮಾರು 50,000 ರೂಪಾಯಿ ಮಾರುಕಟ್ಟೆ ಮೌಲ್ಯದ ಕ್ಯಾಮರದ ಹಣ ಸಿಗದೆ ಕಂಗಾಲಾದ ಸೃಜನ್ ತಕ್ಷಣ ಕದ್ರಿ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಸೃಜನ್ ದೂರಲ್ಲಿ ನೀಡಿದ ಮೊಬೈಲ್ ನಂಬರ್ ನೋಡಿದ ಕ್ಷಣದಲ್ಲೇ ಪೊಲೀಸರು ಇದು ಗೂಡ್ಸ್ ಮುನೀರನೆಂದು ಹೇಳಿ ಕೈ ತೊಳೆದರೇ ಹೊರತು ಕದೀಮನನ್ನ ಹಿಡಿಯುವ ಗೋಜಿಗೇ ಹೋಗಿಲ್ಲ.
ಪರಿಣಾಮ ಅದೇ ಖದೀಮ ಕಳೆದ ನವೆಂಬರ್ 13 ರಂದು ಕುತ್ತಾರಿನ "ಸುಧಿ ಕಲೆಕ್ಷನ್ಸ್" ಎಂಬ ಮೊಬೈಲ್ ಮಳಿಗೆಯಲ್ಲೂ ಮೊಬೈಲ್ ಖರೀದಿಸಿ ಗೂಗಲ್ ಪೇ ಮಾಡಲು ತನ್ನ ಮೊಬೈಲ್ ಸ್ವಿಚ್ ಆಫ್ ಎಂದು ಬೋಂಗು ಬಿಟ್ಟು ಅಂಗಡಿ ಮಾಲೀಕ ದೀಪಕ್ ಅವರಿಗೆ ವಂಚಿಸಿದ್ದ.ಈ ಬಗ್ಗೆ ಉಳ್ಳಾಲ ಠಾಣೆಯಲ್ಲೂ ಮುನೀರನ ವಿರುದ್ಧ ದೂರು ದಾಖಲಾಗಿದೆ.
ಕಳೆದ ಅಕ್ಟೋಬರ್ ತಿಂಗಳ 7 ರಂದು ಇದೇ ಮುನೀರ ತೊಕ್ಕೊಟ್ಟಿನ ಅಯ್ಯಂಗಾರ್ ಬೇಕರಿ ಮತ್ತು ದಿನಸಿ ಅಂಗಡಿಯೊಂದರಲ್ಲೂ ಸಿಹಿತಿಂಡಿ , ದಿನಸಿ ಸಾಮಾಗ್ರಿಗಳನ್ನ ಖರೀದಿಸಿ ಅಂಗಡಿ ಮಾಲೀಕರಿಗೆ ಸಾವಿರಾರು ರೂಪಾಯಿಗಳನ್ನ ವಂಚಿಸಿ ,ಯಾಮಾರಿಸಿದ್ದ. ಗೂಡ್ಸ್ ಮುನೀರ ದ್ವಿಚಕ್ರ ವಾಹನಗಳ ಶೋರೂಮಿಂದ ಟೆಕ್ಸ್ಟ್ ರೈಡ್ ಗೆಂದು ಕೊಂಡೊಯ್ದ ವಾಹನಗಳನ್ನೇ ಮಾರಾಟ ಮಾಡಿದ್ದಾನಂತೆ. ಈತನ ಐನಾತಿ ಕೃತ್ಯಗಳಿಗೆ ಪತ್ನಿಯೇ ಸಾಥ್ ನೀಡುತ್ತಿದ್ದು ಈ ಬಂಟಿ-ಬಬ್ಲಿ ಜೋಡಿಗಳಿಂದ ಜನರು ಮತ್ತೆ ಮೋಸ ಹೋಗದಂತೆ ಪೊಲೀಸರು ಕಾರ್ಯ ಪೃವೃತ್ತರಾಗಬೇಕಿದೆ.
Infamous fraudulent man Goods Muneer has finally been taken into custody by Mangalore's Ullal police. Following his apprehension, an additional case of photo camera theft was reported to the Kadri police department.
21-07-25 10:38 pm
Bangalore Correspondent
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
21-07-25 11:23 pm
HK News Desk
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ವಾಯುಪಡೆ ತರಬೇತಿ ವಿಮಾ...
21-07-25 09:56 pm
ತನ್ನ ಜೊತೆಗೆ ಲಿವ್ ಇನ್ ರಿಲೇಶನ್ನಲ್ಲಿದ್ದ ಎಎಸ್ಐ ಯು...
20-07-25 04:47 pm
21-07-25 06:42 pm
Mangalore Correspondent
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
21-07-25 11:01 pm
HK News Desk
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm