Mangalore, Boat workers, killed: ತಣ್ಣೀರುಬಾವಿ ಬೀಚ್ ನಲ್ಲಿ ಬೋಟ್ ಕಾರ್ಮಿಕನ ಕೊಲೆ ; ಸಹವರ್ತಿಯಿಂದಲೇ ಕೃತ್ಯ 

10-12-23 04:26 pm       Mangalore Correspondent   ಕ್ರೈಂ

ಕೇರಳ ಮೂಲದ ಇಬ್ಬರು ಬೋಟ್ ಕಾರ್ಮಿಕರು ಪರಸ್ಪರ ಹೊಡೆದಾಡಿಕೊಂಡು ಒಬ್ಬಾತ ಮೃತಪಟ್ಟ ಘಟನೆ ಪಣಂಬೂರು ಠಾಣೆ ವ್ಯಾಪ್ತಿಯ ತಣ್ಣೀರು ಬಾವಿಯಲ್ಲಿ ನಡೆದಿದೆ. 

ಮಂಗಳೂರು, ಡಿ.10: ಕೇರಳ ಮೂಲದ ಇಬ್ಬರು ಬೋಟ್ ಕಾರ್ಮಿಕರು ಪರಸ್ಪರ ಹೊಡೆದಾಡಿಕೊಂಡು ಒಬ್ಬಾತ ಮೃತಪಟ್ಟ ಘಟನೆ ಪಣಂಬೂರು ಠಾಣೆ ವ್ಯಾಪ್ತಿಯ ತಣ್ಣೀರು ಬಾವಿಯಲ್ಲಿ ನಡೆದಿದೆ. 

ಕೊಲ್ಲಂ ಮೂಲದ ಬಿನು (41) ಮತ್ತು ತಳಿಪರಂಬ ನಿವಾಸಿ ಜಾನ್ಸನ್ ಬಿನೋಯ್ (52) ತಣ್ಣೀರುಬಾವಿಯಲ್ಲಿ ಬೋಟ್ ರಿಪೇರಿ ಕೆಲಸದಲ್ಲಿ ತೊಡಗಿದ್ದರು. ಇಬ್ಬರು ಕೂಡ ಅದೇ ಪರಿಸರದಲ್ಲಿ ಪ್ರತ್ಯೇಕವಾಗಿ ವಾಸವಿದ್ದರು. ನಿನ್ನೆ ಸಂಜೆ ಕುಡಿದ ಮತ್ತಿನಲ್ಲಿ ಇಬ್ಬರು ಕೂಡ ಜಗಳಾಡಿದ್ದರು. 

ಆನಂತರ, ರಾತ್ರಿ ವೇಳೆಗೆ ಬಿನೋಯ್ ತನ್ನ ರೂಮಿನಲ್ಲಿ ಮಲಗಿದ್ದಾಗ ಜಾನ್ಸನ್ ಕುಡಿದ ಮತ್ತಿನಲ್ಲಿ ಅಲ್ಲಿಗೆ ಹೋಗಿ ಬಿನೋಯ್ ಮೇಲೆ ಇರಿದಿದ್ದಾನೆ. ಬಿನೋಯ್ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಬಿನೋಯ್ ಸಾವನ್ನಪ್ಪಿದ್ದನ್ನು ತಿಳಿದು ಜಾನ್ಸನ್ ಅಲ್ಲಿಂದ ಪರಾರಿಯಾಗಿದ್ದಾನೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.

A dispute between two boat repair/construction workers took a fatal turn, resulting in the death of one individual. The victim, Binu (41), a resident of Kollam, Kerala, was engaged in boat repair/construction work near Tannir Bhavi Beach. Another worker, Johnson, also known as Binoy (52), a resident of Talliparamba, Kerala, was employed at the same site in a similar capacity. Both individuals resided in separate temporary accommodations at the worksite.