ಬ್ರೇಕಿಂಗ್ ನ್ಯೂಸ್
13-12-23 09:07 pm Mangalore Correspondent ಕ್ರೈಂ
ಉಳ್ಳಾಲ, ಡಿ.13: ರಾತ್ರಿ ನಿಲ್ಲಿಸಿದ್ದ ಸಿಟಿ ಬಸ್ಸಿನ ಎರಡು ಬ್ಯಾಟರಿಗಳನ್ನ ಕಳ್ಳನೋರ್ವ ಗೋಣಿ ಚೀಲವನ್ನ ಮುಖಕ್ಕೆ ಅಡ್ಡಲಾಗಿ ಹಿಡಿದು ಬಂದು ಸಿಸಿ ಕ್ಯಾಮೆರಾಕ್ಕೆ ತುರುಕಿ ಕಳವು ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಪಲ ಬಗಂಬಿಲದಲ್ಲಿ ಬುಧವಾರ ನಸುಕಿನ ಜಾವ ನಡೆದಿದ್ದು, ಕಳ್ಳನ ಕೈಚಳಕ ಬಸ್ಸಿನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಕುಂಪಲ- ಕೊಟ್ಟಾರ ನಡುವೆ ಓಡಾಟ ನಡೆಸುವ ರೂಟ್ ನಂಬರ್ 44 ಮೂಕಾಂಬಿಕಾ ಟ್ರಾವೆಲ್ಸ್ ಸಿಟಿ ಬಸ್ಸನ್ನು ನಿನ್ನೆ ರಾತ್ರಿ ಓಡಾಟ ಮುಗಿಸಿ ಕುಂಪಲದ ಬಗಂಬಿಲ ಎಂಬಲ್ಲಿ ನಿಲ್ಲಿಸಲಾಗಿತ್ತು. ನಸುಕಿನ ವೇಳೆ ಬಸ್ಸಿನೊಳಗೆ ಮುಖಕ್ಕೆ ಗೋಣಿ ಚೀಲವನ್ನು ಅಡ್ಡಲಾಗಿ ಹಿಡಿದು ನುಗ್ಗಿದ ಕಳ್ಳನೋರ್ವ ಗೋಣಿ ಚೀಲವನ್ನ ಸಿಸಿ ಕ್ಯಾಮೆರಾಕ್ಕೆ ತುರುಕಿ ಬಸ್ಸಿನ ಎರಡು ಬ್ಯಾಟರಿ ಹಾಗೂ ಕೇಬಲ್ ಗಳನ್ನು ಕಳವು ಮಾಡಿದ್ದಾನೆ. ಬಸ್ಸು ಹಳೆಯದಾದರೂ ಅದರೊಳಗಿದ್ದ ಸಿಸಿ ಟಿವಿ ಸುಸ್ಥಿತಿಯಲ್ಲಿದ್ದು ಕಳ್ಳನ ಕರಾಮತ್ತಿನ ವೀಡಿಯೋ ಚಿತ್ರಣ ಅದರಲ್ಲಿ ದಾಖಲಾಗಿದೆ.

ಸುಮಾರು 40,000 ರೂಪಾಯಿ ಮೌಲ್ಯದ ಬ್ಯಾಟರಿಗಳನ್ನ ಕಳವು ಮಾಡಲಾಗಿದ್ದು ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂಪಲ ಪ್ರದೇಶದಲ್ಲಿ ಬೆರಳೆಣಿಕೆಯಷ್ಟೇ ಬಸ್ಸುಗಳು ಓಡಾಟ ನಡೆಸುತ್ತಿದ್ದು ಬ್ಯಾಟರಿ ಇಲ್ಲದ ಬಸ್ಸು ಬುಧವಾರ ಓಡಾಟ ನಡೆಸದೆ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.
Mangalore Bus battery stolen, covers Cc camera with sack cloth at Ullal. Video of this goes viral on social media.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
27-07-26 09:48 pm
HK News Staffer
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
27-07-26 11:07 pm
Mangaluru Staffer
ಕಾಪುವಿನಲ್ಲಿ ಎಕ್ಸ್ಪ್ರೆಸ್ ಬಸ್ಗಳ ದರ್ಪ! ಟೈಮಿಂಗ್...
27-07-26 10:21 pm
ಸಚಿವ ಸ್ಥಾನ ಕೊಡಿಸಲು ಮೂರು ಕೋಟಿ ಬೇಡಿಕೆ ; ಕೇರಳದ ಶ...
27-07-26 09:04 pm
ಬೆಂಗಳೂರು ಗ್ಯಾರೇಜ್ ನಲ್ಲಿ ಅಗ್ನಿ ಅವಘಡ ; ಜಾಗ್ವಾರ...
27-07-26 07:35 pm
ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಲೈಂಗಿಕ ಕಿರುಕುಳ ಆರೋ...
27-07-26 01:09 pm