ಬ್ರೇಕಿಂಗ್ ನ್ಯೂಸ್
29-03-24 05:09 pm Bangalore Correspondent ಕ್ರೈಂ
ಬೆಂಗಳೂರು, ಮಾ.29: ಕೋವಿಡ್ ಸಮಯದಲ್ಲಿ ಕೆಲಸ ಕಳಕೊಂಡಿದ್ದ ಐಟಿ ಉದ್ಯೋಗಿ ಯುವತಿಯೊಬ್ಬಳು ಲ್ಯಾಪ್ ಟಾಪ್ ಕಳವುಗೈಯುವುದನ್ನೇ ವೃತ್ತಿಯಾಗಿಸ್ಕೊಂಡು ನಾಲ್ಕು ವರ್ಷಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ದೆಹಲಿಯ ನೋಯ್ಡಾ ಮೂಲದ ಜೆಸ್ಸಿ ಅಗರ್ವಾಲ್ ಎಂಬ ಹೆಸರಿನ ಯುವತಿ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿದ್ದಳು. ಕೋವಿಡ್ ಸಮಯದಲ್ಲಿ ಕಂಪನಿ ಉದ್ಯೋಗಿಗಳನ್ನು ಕಡಿತ ಮಾಡಿದ್ದರಿಂದ ಜೆಸ್ಸಿ ಕೆಲಸ ಕಳಕೊಂಡಿದ್ದಳು. ಬೆಂಗಳೂರಿನ ಪೇಯಿಂಗ್ ಗೆಸ್ಟ್ ನಲ್ಲಿ ಇರುತ್ತಿದ್ದ ಯುವತಿ ಅಲ್ಲಿಂದಲೇ ಚಾರ್ಜಿಂಗ್ ಹಾಕಿಡುತ್ತಿದ್ದ ಲ್ಯಾಪ್ ಟಾಪ್ ಗಳನ್ನು ಕದಿಯುತ್ತಿದ್ದಳು. ಬಳಿಕ ನೋಯ್ಡಾಕ್ಕೆ ಕೊಂಡೊಯ್ದು ಬ್ಲಾಕ್ ಮಾರ್ಕೆಟ್ ನಲ್ಲಿ ಮಾರುತ್ತಿದ್ದಳು.
ಇತ್ತೀಚೆಗೆ ಪಿಜಿಯಲ್ಲಿ ಲ್ಯಾಪ್ ಟಾಪ್ ಕಳವಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆ ನಡೆಸಿದಾಗ ಹಲವಾರು ಲ್ಯಾಪ್ ಟಾಪ್ ಕಳವಾಗಿದೆ ಎಂಬ ಮಾಹಿತಿ ಸಿಕ್ಕಿತ್ತು. ಪೊಲೀಸರು ಅಲ್ಲಿನ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಯುವತಿಯೊಬ್ಬಳು ಅಲ್ಲಿಗೆ ಬಂದು ಹೋಗುತ್ತಿದ್ದುದು ದಾಖಲಾಗಿತ್ತು. ಇದೇ ಯುವತಿ ಬೇರೆ ಕಡೆ ಪಿಜಿಗಳಿಗೂ ಖಾಲಿ ಇರುತ್ತಿದ್ದಾಗ ಎಂಟ್ರಿ ಕೊಡುತ್ತಿದ್ದಳು. ಸ್ನಾನ ಮಾಡುತ್ತಿದ್ದಾಗಲೋ, ಹೊರಗೆಲ್ಲಾದರೂ ಹೋಗುತ್ತಿದ್ದ ವೇಳೆ ಚಾರ್ಜ್ ಹಾಕಿರುತ್ತಿದ್ದ ಲ್ಯಾಪ್ ಟಾಪ್, ಗಾಜೆಟ್ಸ್ ಗಳನ್ನು ಎಗರಿಸುತ್ತಿದ್ದಳು.
ಪೊಲೀಸರು ಮಾರ್ಚ್ 26ರಂದು ಯುವತಿಯನ್ನು ಬಂಧಿಸಿದ್ದು, ಆಕೆಯ ಬಳಿಯಿದ್ದ 10ರಿಂದ 15 ಲಕ್ಷ ಮೌಲ್ಯದ 24 ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದಾರೆ. ಆಕೆ ಇರುತ್ತಿದ್ದ ಏರಿಯಾದಲ್ಲಿ ಹಲವು ಕಡೆಗಳಲ್ಲಿ ಕಳವು ಮಾಡಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
A 26-year-old woman, a B.Tech graduate from Noida, was arrested by HAL police for allegedly stealing 24 laptops valued at ₹10 lakh from paying guest (PG) accommodations and software companies in Bengaluru. After an individual living in the PG complained about the lost valuables, the HAL police tracked down the accused using CCTV camera footage and other evidence. On March 26, they arrested Jassi Agarwal, a resident of Noida, as per reports.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm