Mangalore murder attempt, Stab: ಹಳೆ ದ್ವೇಷ ; ಫರ‌ಂಗಿಪೇಟೆಯಲ್ಲಿ ಮನೆಗೆ ನುಗ್ಗಿ ಯುವಕನಿಗೆ ಚೂರಿ ಇರಿತ, ಆರೋಪಿ ಪರಾರಿ 

08-04-24 07:30 pm       Mangalore Correspondent   ಕ್ರೈಂ

ಮನೆಗೆ ‌ನುಗ್ಗಿದ ವ್ಯಕ್ತಿಯೊಬ್ಬ ಯುವಕನಿಗೆ ಚೂರಿ ಹಾಕಿ ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯ ಫರಂಗಿಪೇಟೆ ಬಳಿಯ ಪುದು ಎಂಬಲ್ಲಿ ನಡೆದಿದೆ.

ಬಂಟ್ವಾಳ, ಎ.8: ಮನೆಗೆ ‌ನುಗ್ಗಿದ ವ್ಯಕ್ತಿಯೊಬ್ಬ ಯುವಕನಿಗೆ ಚೂರಿ ಹಾಕಿ ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯ ಫರಂಗಿಪೇಟೆ ಬಳಿಯ ಪುದು ಎಂಬಲ್ಲಿ ನಡೆದಿದೆ.

ಪುದು ಗ್ರಾಮದ 10ನೇ ಮೈಲಿಕಲ್ಲು ನಿವಾಸಿ ಮಹಮ್ಮದ್ ರಮೀಝ್ (19) ಇರಿತಕ್ಕೀಡಾದ ಯುವಕ.‌ ಗಂಭೀರ ಗಾಯಗೊಂಡಿರುವ ರಮೀಝ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಅಬ್ದುಲ್ ರಹಿಮಾನ್ ಎಂಬಾತ ಚೂರಿ ಇರಿದು ಪರಾರಿಯಾದ ಆರೋಪಿ. ಹಣಕಾಸು ಮತ್ತು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ರಮೀಝ್ ಜೊತೆಗೆ ಮಾತುಕತೆಗೆಂದು ಪೋನ್ ಮಾಡಿ ಮನೆಯಲ್ಲಿರುವುದನ್ನು ಖಚಿತಪಡಿಸಿ ಆರೋಪಿ ಅಲ್ಲಿಗೆ ಬಂದಿದ್ದ. ಮನೆಯೊಳಗೆ ಬರುತ್ತಲೇ ಚೂರಿಯಿಂದ ತಿವಿದು ‌ಪರಾರಿಯಾಗಿದ್ದಾನೆ. ಬಂಟ್ವಾಳ ‌ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

Mangalore 19 year old stabbed at Parangipete, murder attempt, financial matter is the reason for this attempt to murder. 19 year old Victim Mohammed Rameez has been hospitalised.