ಬ್ರೇಕಿಂಗ್ ನ್ಯೂಸ್
24-04-24 05:39 pm HK News Desk ಕ್ರೈಂ
ಉತ್ತರಪ್ರದೇಶ, ಏ.24: ಅಣ್ಣ-ತಂಗಿ ನಡುವಿನ ಸಂಬಂಧ ಯಾವತ್ತಿದ್ರೂ ಬಹಳ ವಿಶೇಷವಾಗಿರುತ್ತೆ. ಆದ್ರೆ ಇಲ್ಲೊಂದು ಘಟನೆ ನಡೆದಿದೆ ನೋಡಿ. ಇದನ್ನು ಓದಿದ್ರೆ ಅಣ್ಣನಾಗಿ ಗಿಫ್ಟ್ ನೀಡೋದೆ ತಪ್ಪಾ ಅನಿಸುತ್ತೆ ನಿಮಗೆ. ಏಕೆಂದರೆ ಉತ್ತರಪ್ರದೇಶದಲ್ಲಿ ಮದುವೆಯಂದು ವಧುವಿಗೆ ತನ್ನ ಸಹೋದರ ಉಡುಗೊರೆ ನೀಡಿದಕ್ಕಾಗಿ ಘರ್ಷಣೆ ಆರಂಭವಾಗಿದೆ. ಕೊನೆಗೆ ಈ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.
ಚಂದ್ರಪ್ರಕಾಶ್ ಮಿಶ್ರಾ ಎಂಬವರು ತನ್ನ ಸಹೋದರಿಯ ಮದುವೆಗೆ ಚಿನ್ನದ ಉಂಗುರ ಮತ್ತು ಟಿವಿಯನ್ನು ಉಡುಗೊರೆಯಾಗಿ ನೀಡಿದ ಕಾರಣಕ್ಕೆ, ಕೋಪಗೊಂಡ ಪತ್ನಿಯ ಮನೆಯವರು ಆತನನ್ನು ಹೊಡೆದು ಕೊಂದಿದ್ದಾರೆ. ಬಾರಾಬಂಕಿ ಜಿಲ್ಲೆಯ ಸಮೀಪದ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.
35 ವರ್ಷದ ಚಂದ್ರ ಪ್ರಕಾಶ್ ಮಿಶ್ರಾ ಅವರು ಏಪ್ರಿಲ್ 26 ರಂದು ತನ್ನ ಸಹೋದರಿಯ ಮದುವೆಗೆ ಚಿನ್ನದ ಉಂಗುರ ಮತ್ತು ಟಿವಿ ಉಡುಗೊರೆಯಾಗಿ ನೀಡಲು ಬಯಸಿದ್ದರು. ಆದ್ರೆ ಇದಕ್ಕೆ ಪತ್ನಿಯ ಒಪ್ಪಿಗೆ ಇರಲಿಲ್ಲವಂತೆ ಚಂದ್ರ ಪ್ರಕಾಶ್ ಮಿಶ್ರಾ ಅವರು ತನ್ನ ಸಹೋದರಿಯ ಮದುವೆಗೆ ಚಿನ್ನದ ಉಂಗುರ ಮತ್ತು ಟಿವಿ ಗಿಫ್ಟ್ ನೀಡುವುದಾಗಿ ಪ್ಲಾನ್ ಮಾಡಿದ್ದರು. ಆದ್ರೆ ಚಂದ್ರಪ್ರಕಾಶ್ ಅವರ ಪತ್ನಿ ಚಾಬಿಗೆ ತನ್ನ ಪತಿಯ ಈ ಪ್ಲಾನ್ನಿಂದ ಅಸಮಾಧಾನಗೊಂಡಿದ್ದರು, ಇದೇ ಕಾರಣಕ್ಕೆ ದಂಪತಿ ನಡುವೆ ತೀವ್ರ ವಾಗ್ವಾದವೂ ನಡೆದಿತ್ತು.
ಕೋಪಗೊಂಡ ಪತ್ನಿ ಚಾಬಿ, ಪತಿಗೆ ಬುದ್ಧಿ ಕಲಿಸಬೇಕೆಂದು, ತನ್ನ ಸಹೋದರರನ್ನು ಮನೆಗೆ ಕರೆಸಿದ್ದಾಳೆ ನಂತರ ಒಂದು ಗಂಟೆಗಳ ಕಾಲ ಕೋಲಿನಿಂದ ಕ್ರೂರವಾಗಿ ಥಳಿಸಿ ಕೊಂದುಹಾಕಿದ್ದಾರೆ ಎಂದು ಆಧಿಕಾರಿಗಳು ಹೇಳಿದ್ದಾರೆ. ಈ ಸಂಗತಿ ತಿಳಿದ ಚಂದ್ರ ಪ್ರಕಾಶ್ ಅವರ ಕುಟುಂಬಸ್ಥರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪೊಲೀಸರ ಪ್ರಕಾರ, ಚಾಬಿ ಮತ್ತು ಆಕೆಯ ಸಹೋದರರು ಸೇರಿದಂತೆ ಐವರನ್ನು ಬಂಧಿಸಲಾಗಿದೆ.
A wedding in Uttar Pradesh ended in murder over a conflict involving a gift to the bride from her brother. Chandra Prakash Mishra was beaten to death by his wife’s family because she was upset with him for gifting a gold ring and television to his sister at her wedding, police said. The incident took place in a village near the Barabanki district.
20-02-26 09:20 pm
HK News Desk
ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕ ಹಿಂದಕ್ಕೆ ; 26 ತ...
19-02-26 09:29 pm
ಪರಮೇಶ್ವರ್ ಅಥವಾ ಡಿಕೆಶಿ ಯಾರಾಗ್ತಾರೆ ಮುಂದಿನ ಮುಖ್ಯ...
19-02-26 03:11 pm
ವಿಧಾನಸೌಧ ಒಳಗಡೆ ಮಾಧ್ಯಮಗಳಿಗೆ ಲಕ್ಷ್ಮಣ ರೇಖೆ ; ಭದ್...
18-02-26 09:02 pm
ಮಹಾರಾಷ್ಟ್ರದಿಂದ ಬೈಕ್ ನಲ್ಲಿ ಬಾಗಲಕೋಟಗೆ ಬರುತ್ತಿದ...
18-02-26 06:03 pm
20-02-26 08:45 pm
HK News Desk
ಗಲ್ಫ್ ದೇಶಗಳತ್ತ ಅಮೆರಿಕದ ಯುದ್ಧ ವಿಮಾನಗಳು ; ಇರಾನ್...
19-02-26 11:04 pm
'ಉಚಿತ' ಕೊಡುಗೆಗಳು ದೇಶದ ಅಭಿವೃದ್ಧಿಗೆ ಅಡ್ಡಿ ; ಆದಾ...
19-02-26 10:10 pm
ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಶೋಚನೀಯ ಸ್ಥಿತಿ ; ಕ...
17-02-26 08:50 pm
ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು ಸಾವಿನ ಬೆನ್ನ...
16-02-26 12:53 pm
20-02-26 06:05 pm
Mangalore Correspondent
Kotekar, Mangalore News: ಕೋಟೆಕಾರು ಪ.ಪಂ ಸದಸ್ಯ...
20-02-26 04:18 pm
ಕುತ್ಲೂರಿನಲ್ಲಿ ನಕ್ಸಲ್ ಕರಪತ್ರ ಹಂಚಿದ್ದ ಪ್ರಕರಣ ;...
19-02-26 10:37 pm
2013ರಲ್ಲಿ ಶಿಲಾನ್ಯಾಸಗೊಂಡಿದ್ದ ಅಬ್ಬಕ್ಕ ಭವನ ನಿರ್ಮ...
19-02-26 09:50 pm
ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹ, ಹೋರಾಟ...
19-02-26 06:08 pm
20-02-26 10:08 pm
Mangaluru Staffer
ಲಕ್ಕುಂಡಿ ನಿಧಿ ಹೆಸ್ರಲ್ಲಿ ಜನರಿಗೆ ಟೋಪಿ ; ಹಂಡಿಯೊಳ...
20-02-26 09:07 pm
ಗಂಡ ಸತ್ತ ಒಂದೇ ವಾರಕ್ಕೆ ಪತ್ನಿಗೆ ಪೊಲೀಸಪ್ಪನ ಕಿರುಕ...
20-02-26 08:54 pm
ಮುಡಾ ಹಗರಣ, ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿ...
20-02-26 08:44 pm
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಮಸೀದಿಯಿಂದ ಕಲ್ಲು –...
20-02-26 03:03 pm