Mangalore crime, stabbed, Pawan: ಫರಂಗಿಪೇಟೆ ; ರೌಡಿಶೀಟರ್ ಮೇಲೆ ರೌಡಿಯಿಂದ ಚೂರಿ ಇರಿತ, ವೈಯಕ್ತಿಕ ದ್ವೇಷದಲ್ಲಿ ಹಲ್ಲೆ 

26-04-24 03:59 pm       Mangalore Correspondent   ಕ್ರೈಂ

ಮಂಗಳೂರು ಹೊರವಲಯದ ಫರಂಗಿಪೇಟೆಯ ಕುಮ್ಡೇಲು ಎಂಬಲ್ಲಿ ಯುವಕನೊಬ್ಬನಿಗೆ ಚೂರಿ ಇರಿತ ಘಟನೆ ನಡೆದಿದೆ. ರೌಡಿ ಶೀಟರ್ ಪವನ್ ಎಂಬಾತ ಚೂರಿ ಇರಿತಕ್ಕೊಳಗಾದ ಯುವಕ.

ಮಂಗಳೂರು, ಎ.26: ಮಂಗಳೂರು ಹೊರವಲಯದ ಫರಂಗಿಪೇಟೆಯ ಕುಮ್ಡೇಲು ಎಂಬಲ್ಲಿ ಯುವಕನೊಬ್ಬನಿಗೆ ಚೂರಿ ಇರಿತ ಘಟನೆ ನಡೆದಿದೆ. ರೌಡಿ ಶೀಟರ್ ಪವನ್ ಎಂಬಾತ ಚೂರಿ ಇರಿತಕ್ಕೊಳಗಾದ ಯುವಕ. 

ಎಸ್ ಡಿ ಪಿ ಐ ಮುಖಂಡ ಕಲಾಯಿ ಅಶ್ರಫ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪವನ್ ಮೇಲೆ ಆತನ ಸ್ನೇಹಿತನೇ ಪೂರ್ವ ದ್ವೇಷದಲ್ಲಿ ಹಲ್ಲೆ ಮಾಡಿದ್ದಾನೆ. ಮತ್ತೊಬ್ಬ ರೌಡಿಶೀಟರ್ ಚರಣ್ ಎಂಬಾತ ಚೂರಿ ಇರಿದಿದ್ದಾನೆ ಎನ್ನುವ ಮಾಹಿತಿ ಇದೆ‌. 

ಚರಣ್ ಗಾಂಜಾ ವ್ಯಸನಿಯಾಗಿದ್ದು ವೈಯಕ್ತಿಕ ದ್ವೇಷದಲ್ಲಿ ಹಲ್ಲೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಪವನ್ ಆಸ್ಪತ್ರೆಗೆ ದಾಖಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನುವ ಮಾಹಿತಿ ಇದೆ.‌ ಬಂಟ್ವಾಳ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Personal revenge, rowdy sheeter Pawan was stabbed and attacked at Farangipete in Mangalore. Some personal revenge has lead to attack by his own friends.