ಬ್ರೇಕಿಂಗ್ ನ್ಯೂಸ್
08-05-24 11:33 am Mangalore Correspondent ಕ್ರೈಂ
ಮಂಗಳೂರು, ಮೇ 8: ನಗರದ ಬಾವುಟಗುಡ್ಡೆಯ ಕೆಎಂಸಿ ಮೆಡಿಕಲ್ ಕಾಲೇಜಿನ ಡೆಂಟಲ್ ವಿಭಾಗಕ್ಕೆ ಬಂದಿದ್ದ 17 ವರ್ಷದ ಹುಡುಗನೊಬ್ಬ ಲೇಡಿಸ್ ಟಾಯ್ಲೆಟ್ ನಲ್ಲಿ ಮೊಬೈಲ್ ಇಟ್ಟು ವಿಡಿಯೋ ಚಿತ್ರೀಕರಣಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದಾನೆ.
ಮಂಗಳವಾರ ಬೆಳಗ್ಗೆ ಹಲ್ಲಿನ ಚಿಕಿತ್ಸೆಗೆಂದು ಹುಡುಗ ಬಂದಿದ್ದ. ಈ ಹಿಂದೆಯೂ ತಾಯಿ ಜೊತೆಗೆ ಚಿಕಿತ್ಸೆಗಾಗಿ ಬರುತ್ತಿದ್ದ. ನಿನ್ನೆ ಒಬ್ಬನೇ ಬಂದಿದ್ದು, ತಾಯಿಯ ಮೊಬೈಲನ್ನು ತೆಗೆದುಕೊಂಡು ಬಂದಿದ್ದ. ಟ್ರೀಟ್ಮೆಂಟ್ ಹೋಗುವುದಕ್ಕೂ ಮುನ್ನ ಮೊಬೈಲನ್ನು ಲೇಡಿಸ್ ಟಾಯ್ಲೆಟಲ್ಲಿ ಮೇಲೆ ಇಟ್ಟು ಹೋಗಿದ್ದಾನೆ. ಆದರೆ, ಸೈಲಂಟ್ ಮೋಡಲ್ಲಿ ಇಡುವುದಕ್ಕೆ ಮರೆತಿದ್ದ. ಕೆಲ ಹೊತ್ತಿನಲ್ಲೇ ಮೊಬೈಲ್ ರಿಂಗಣಿಸಿತ್ತು. ಪದೇ ಪದೇ ಮೊಬೈಲ್ ಟಾಯ್ಲೆಟ್ ಒಳಗಿನಿಂದ ರಿಂಗ್ ಆಗುತ್ತಿದ್ದುದನ್ನು ಸೆಕ್ಯುರಿಟಿ ಸಿಬಂದಿ ಗಮನಿಸಿದ್ದು, ಒಳಗೆ ಹೋಗಿ ನೋಡಿದಾಗ ಮೇಲೆ ಇಟ್ಟಿದ್ದ ಮೊಬೈಲ್ ಕಾಣ ಸಿಕ್ಕಿದೆ.
ಬಳಿಕ ಸಿಸಿಟಿವಿ ಗಮನಿಸಿದಾಗ, ಹುಡುಗನ ಚಹರೆ ಸಿಕ್ಕಿದ್ದು ಬಂದರು ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ. ಉಡುಪಿ ಜಿಲ್ಲೆಯ ಕಾಪು ಮೂಲದ ಮುಸ್ಲಿಂ ಹುಡುಗನಾಗಿದ್ದು, ಸುರತ್ಕಲ್ ನಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ. ತಾಯಿ ಜೊತೆಗೆ ಹಲ್ಲಿನ ಚಿಕಿತ್ಸೆಗೆ ಬರುತ್ತಿದ್ದ ಹುಡುಗ ನಿನ್ನೆ ಒಬ್ಬಂಟಿಯಾಗಿ ಬಂದು ಕತರ್ನಾಕ್ ಕೆಲಸ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಮೊಬೈಲನ್ನು ಚೆಕ್ ಮಾಡಿದಾಗ ಯಾವುದೇ ವಿಡಿಯೋ, ಫೋಟೋ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. ಆರೋಪಿಯನ್ನು ಜುವೆನಿಲ್ ಕೋರ್ಟಿಗೆ ಹಾಜರುಪಡಿಸಿದ್ದಾರೆ.
ವರ್ಷದ ಹಿಂದೆ ಉಡುಪಿಯಲ್ಲೂ ನಡೆದಿತ್ತು
2023ರ ಜುಲೈ ತಿಂಗಳಲ್ಲಿ ಉಡುಪಿ ನಗರದ ಕಣ್ಣಿನ ಚಿಕಿತ್ಸೆಯ ಕಾಲೇಜಿನಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಮೂವರು ವಿದ್ಯಾರ್ಥಿನಿಯರು ತಮಾಷೆಗಾಗಿ ಮೊಬೈಲನ್ನು ಟಾಯ್ಲೆಟಲ್ಲಿಟ್ಟು ವಿಡಿಯೋ ಚಿತ್ರೀಕರಣಕ್ಕೆ ಯತ್ನಿಸಿದ್ದರು. ಈ ಘಟನೆ ರಾಜ್ಯಾದ್ಯಂತ ಭಾರೀ ಗದ್ದಲ, ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಆ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿತ್ತು. ವಿಪಕ್ಷಗಳ ಆರೋಪ ಜೋರಾದ ಕಾರಣ ಪ್ರಕರಣದ ತನಿಖೆಯನ್ನು ಸಿಓಡಿಗೆ ಒಪ್ಪಿಸಲಾಗಿತ್ತು.
An unsettling incident unfolded on Tuesday, May 7, at a private medical college located in the city, as a mobile phone was discovered in the women's restroom. The startling discovery came to light when the college's security guard, while conducting routine checks, noticed the mobile phone ringing persistently from within the deserted restroom. The guard confiscated the device and informed the authorities.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm