ಬ್ರೇಕಿಂಗ್ ನ್ಯೂಸ್
09-05-24 10:59 am Mangalore Correspondent ಕ್ರೈಂ
ಮಂಗಳೂರು, ಮೇ.9: ನಗರದ ಬಾವುಟಗುಡ್ಡೆಯ ಮೆಡಿಕಲ್ ಕಾಲೇಜಿನ ಲೇಡಿಸ್ ಟಾಯ್ಲೆಟ್ ನಲ್ಲಿ ಮೊಬೈಲ್ ಇಟ್ಟಿದ್ದ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು ಮೊಬೈಲಿನಲ್ಲಿ ಆರು ನಿಮಿಷದ ವಿಡಿಯೋ ಸೆರೆಯಾಗಿತ್ತು ಎನ್ನುವುದನ್ನು ಪತ್ತೆ ಮಾಡಿದ್ದಾರೆ. ಪ್ರಕರಣ ಸಂಬಂಧ ಸುರತ್ಕಲ್ ನಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಹುಡುಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಲ್ಲಿನ ಚಿಕಿತ್ಸೆಗಾಗಿ ಮೆಡಿಕಲ್ ಕಾಲೇಜಿನ ಡೆಂಟಲ್ ವಿಭಾಗಕ್ಕೆ 17 ವರ್ಷದ ಹುಡುಗ ತಾಯಿ ಜೊತೆಗೆ ಬರುತ್ತಿದ್ದ. ಈ ಹಿಂದೆ ಎರಡು ಬಾರಿ ಬಂದಿದ್ದ ಬಾಲಕ, ಮೊನ್ನೆ ತಾಯಿಗೆ ಹುಷಾರಿಲ್ಲವೆಂದು ಒಬ್ಬನೇ ಬಂದಿದ್ದ. ತಾಯಿ ಮೊಬೈಲನ್ನು ಜೊತೆಗೆ ತಂದಿದ್ದ ಹುಡುಗ, ಟಾಯ್ಲೆಟಲ್ಲಿ ವಿಡಿಯೋ ಆನ್ ಮಾಡಿ ಹೊರಗೆ ಸುತ್ತಾಡಲು ಹೋಗಿದ್ದ. ಕೆಲ ಹೊತ್ತಿನಲ್ಲಿ ಮೊಬೈಲ್ ರಿಂಗ್ ಆಗಿದ್ದರಿಂದ ಸೆಕ್ಯುರಿಟಿ ಸಿಬಂದಿ ಅಲರ್ಟ್ ಆಗಿದ್ದು, ಮೊಬೈಲನ್ನು ವಶಕ್ಕೆ ಪಡೆದಿದ್ದರು.
ಬಂದರು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಮೊಬೈಲ್ ಸಂಖ್ಯೆ ಆಧಾರದಲ್ಲಿ ಬಾಲಕನ ತಾಯಿಯನ್ನು ಬರಲು ಹೇಳಿದ್ದಾರೆ. ಆನಂತರ, ಬಾಲಕ ಮತ್ತು ತಾಯಿ ಜೊತೆಗೇ ಮೆಡಿಕಲ್ ಕಾಲೇಜಿಗೆ ಬಂದಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮೊಬೈಲ್ ಆನ್ ಮಾಡಿಟ್ಟಿದ್ದರಿಂದ ಆ ಕ್ಷಣದ ವರೆಗೆ ಆರು ನಿಮಿಷದ ವಿಡಿಯೋ ಸೆರೆಯಾಗಿತ್ತು. ಆದರೆ, ಅದರಲ್ಲಿ ಯಾವುದೇ ಅಸಭ್ಯ ವಿಡಿಯೋ ದಾಖಲಾಗಿಲ್ಲ. ಒಬ್ಬ ಮಹಿಳೆಯೇನೋ ಬಂದು ಹೋಗುವ ಚಿತ್ರಣವಿದ್ದು, ಆಕೆಯ ತಲೆಯ ಭಾಗ ಮಾತ್ರ ಅಸ್ಪಷ್ಟವಾಗಿ ಬಂದಿದೆ. ಇಷ್ಟರಲ್ಲೇ ಮೊಬೈಲಿಗೆ ಕರೆ ಬಂದಿದ್ದು, ಕಿಡಿಗೇಡಿ ಕೃತ್ಯ ಬಯಲಾಗಿತ್ತು.
ಟಾಯ್ಲೆಟಲ್ಲಿ ಮೊಬೈಲ್ ಇಟ್ಟು ಹೋಗಿದ್ದ ಹುಡುಗ 17 ವರ್ಷದವನಾಗಿದ್ದು, ಆತನನ್ನು ಬಾಲಪರಾಧ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಪ್ರಾಪ್ತನಾಗಿರುವ ಕಾರಣ ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುವಂತಿಲ್ಲ. ಮುಗ್ಧನಂತೆ ವರ್ತಿಸುವ ಹುಡುಗನ ತನಿಖೆಯೇ ಪೊಲೀಸರಿಗೆ ಸವಾಲಾಗಿದೆ.
Mangalore Mobile Phone in Toilet at KMC college Bavuta Gudde, 6 minute video found, minor arrested. The arrested is a 17 year old from surathkal. According to the police, the college security guard discovered the mobile while it was ringing even when no one was in the toilet. The phone was seized and a case has been registered in the North PS under Cr No 57/2024 u/s 354C IPC.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm