ಬ್ರೇಕಿಂಗ್ ನ್ಯೂಸ್
17-05-24 09:52 pm HK News Desk ಕ್ರೈಂ
ಕಾಸರಗೋಡು, ಮೇ 17: ತನ್ನ ಮನೆಯಲ್ಲಿ ಮಲಗಿದ್ದ ಹತ್ತು ವರ್ಷದ ಬಾಲಕಿಯನ್ನು ದುರುಳನೊಬ್ಬ ನಸುಕಿನಲ್ಲಿ ಹೊತ್ತೊಯ್ದು ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಆಕೆಯ ಕಿವಿಯಲ್ಲಿದ್ದ ಚಿನ್ನದ ಓಲೆಯನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಹೊಸದುರ್ಗದಲ್ಲಿ ನಡೆದಿದೆ.
ಮೇ 15ರಂದು ನಸುಕಿನ ಮೂರು ಗಂಟೆ ವೇಳೆಗೆ ಘಟನೆ ನಡೆದಿದ್ದು ಪೊಲೀಸರು ಆರೋಪಿಗೆ ತಲಾಶ್ ನಡೆಸಿದ್ದಾರೆ. ಬಾಲಕಿ ಪ್ರತಿ ದಿನ ತನ್ನ ಅಜ್ಜಿಯ ಜೊತೆಗೆ ಮಲಗುತ್ತಿದ್ದಳು. ಅಂದು ಅಜ್ಜಿ ಸಂಬಂಧಿಕರ ಮನೆಗೆ ತೆರಳಿದ್ದರಿಂದ ಅಜ್ಜನ ಜೊತೆಗೆ ಮಲಗಿದ್ದಳು. ನಸುಕಿನಲ್ಲಿ ಮೂರು ಗಂಟೆಗೆ ಎಂದಿನಂತೆ ಅಜ್ಜ ದನಗಳನ್ನು ಹಾಲು ಕರೆಯಲೆಂದು ತೆರಳಿದ್ದರು. ಕೋಣೆಯ ಬಾಗಿಲನ್ನು ಎಳೆದುಕೊಂಡು ಹೋಗಿದ್ದರು. ಇದೇ ಹೊತ್ತಿನಲ್ಲಿ ಬಾಲಕಿಯನ್ನು ಹೊತ್ತೊಯ್ಯಲಾಗಿತ್ತು. 3.30ಕ್ಕೆ ಅಜ್ಜ ಮರಳಿ ಬಂದು ನೋಡಿದಾಗ, ಬೆಡ್ ನಲ್ಲಿ ಬಾಲಕಿ ಇರಲಿಲ್ಲ.
ಬಾಲಕಿಯನ್ನು ದುರುಳ ಒಂದು ಕಿಮೀ ದೂರಕ್ಕೆ ಹೊತ್ತೊಯ್ದಿದ್ದು, ಬೊಬ್ಬೆ ಹಾಕದಂತೆ ಬಾಯಿಗೆ ಕೈಯನ್ನು ಗಟ್ಟಿ ಹಿಡಿದುಕೊಂಡಿದ್ದ. ಬೊಬ್ಬೆ ಹಾಕಿದರೆ ಕೊಂದು ಹಾಕುತ್ತೇನೆಂದು ಹೆದರಿಸಿ ರಸ್ತೆಯಲ್ಲೇ ಲೈಂಗಿಕ ದೌರ್ಜನ್ಯ ಎಸಗಿ, ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಕಿತ್ತುಕೊಂಡು ಬಾಲಕಿಯನ್ನು ಬಿಟ್ಟು ಹೋಗಿದ್ದ. ಬೆಳಗ್ಗೆ 5 ಗಂಟೆ ವೇಳೆಗೆ ಬಾಲಕಿ ಅಲ್ಲಿನ ಪರಿಸರದ ಮನೆಯೊಂದಕ್ಕೆ ಹೋಗಿ ಬೆಲ್ ಹಾಕಿದ್ದಾಳೆ. ಬಾಗಿಲು ಬಡಿದರೂ ಎಚ್ಚರಗೊಳ್ಳದ ಕಾರಣ ಪಕ್ಕದ ಮನೆಗೂ ಹೋಗಿ ಬಾಗಿಲು ಬಡಿದಿದ್ದಾಳೆ. ಆ ಮನೆಯ ಬಾಗಿಲು ತೆರೆಯುತ್ತಿದ್ದಂತೆ ತನ್ನ ಮನೆಯವರನ್ನು ಕರೆಯುವಂತೆ ತಿಳಿಸಿ, ತಂದೆಯ ಮೊಬೈಲ್ ನಂಬರ್ ಹೇಳಿ ಬರಹೇಳಿದ್ದಾಳೆ.
ತಂದೆ, ತಾಯಿ ಮತ್ತು ಇನ್ನೊಬ್ಬಳು ಸಣ್ಣ ತಂಗಿ ಪಕ್ಕದ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು. ಮನೆಯ ಹಿಂದಿನ ಬಾಗಿಲು ತೆರೆದುಕೊಂಡಿದ್ದರಿಂದ ಅಲ್ಲಿಂದಲೇ ಬಾಲಕಿಯನ್ನು ಹೊತ್ತೊಯ್ದಿದ್ದಾರೆ ಎನ್ನುವ ಸಂಶಯ ಉಂಟಾಗಿತ್ತು. ಪೊಲೀಸರು ಮೊದಲು ರಾಬರಿ ಕೇಸು ದಾಖಲಿಸಿದ್ದರು. ಬಾಲಕಿಯ ಮೆಡಿಕಲ್ ಚೆಕಪ್ ನಲ್ಲಿ ರೇಪ್ ಆಗಿರುವುದು ಕಂಡುಬಂದಿದ್ದರಿಂದ ಪೋಕ್ಸೋ ಕಾಯ್ದೆ ದಾಖಲು ಮಾಡಿದ್ದು ಆರೋಪಿಗೆ ಹುಡುಕಾಟ ನಡೆಸಿದ್ದಾರೆ. ಬಾಲಕಿಯ ಮುಖ, ಕುತ್ತಿಗೆಯಲ್ಲಿ ಪರಚಿದ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ. (ಮನೋರಮಾ ವರದಿ)
A10-year-old girl sleeping in her house at Padannakkad near Kanhangad in Kerala’s Kasargod district was abducted, sexually assaulted and abandoned one kilometre away in the early hours of Wednesday. The incident occurred when her grandfather briefly stepped out to milk the cow. The rest of the members of the family were asleep. It is suspected that the assailant entered the house when the grandfather went out after opening the front door.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm