Mangalore crime, Surathkal Police: ಸುರತ್ಕಲ್ ಬಾಡಿಗೆ ಮನೆಗಳಿಗೆ ಕನ್ನ ; ಚಾರ್ಜ್ ಇಟ್ಟಿದ್ದ ಮೂರು ಮೊಬೈಲ್ ಕಳವುಗೈದಿದ್ದ ಆರೋಪಿ ಸೆರೆ   

25-06-24 11:06 pm       Mangalore Correspondent   ಕ್ರೈಂ

ಬಾಡಿಗೆ ಮನೆಯೊಂದಕ್ಕೆ ನುಗ್ಗಿದ ಕಳ್ಳನೊಬ್ಬ ಮೂರು ಮೊಬೈಲ್ ಮತ್ತು ನಗದು ಕಳವು ಮಾಡಿದ್ದ ಪ್ರಕರಣದಲ್ಲಿ ಸುರತ್ಕಲ್ ಪೊಲೀಸರು ಕಾಟಿಪಳ್ಳದ ಆರೋಪಿಯನ್ನು ಬಂಧಿಸಿದ್ದಾರೆ.

ಮಂಗಳೂರು, ಜೂನ್ 25: ಬಾಡಿಗೆ ಮನೆಯೊಂದಕ್ಕೆ ನುಗ್ಗಿದ ಕಳ್ಳನೊಬ್ಬ ಮೂರು ಮೊಬೈಲ್ ಮತ್ತು ನಗದು ಕಳವು ಮಾಡಿದ್ದ ಪ್ರಕರಣದಲ್ಲಿ ಸುರತ್ಕಲ್ ಪೊಲೀಸರು ಕಾಟಿಪಳ್ಳದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಮಹಮ್ಮದ್ ಅಶ್ರಫ್ ಅಲಿಯಾಸ್ ಚೋಟಾ ಅಶ್ರಫ್ (26) ಎಂದು ಗುರುತಿಸಲಾಗಿದೆ.

ಜೂನ್ 14ರಂದು ಸುರತ್ಕಲ್ಲಿನ ಬಾಡಿಗೆ ಮನೆಯೊಂದಕ್ಕೆ ನುಗ್ಗಿದ್ದ ಆರೋಪಿ ಅಲ್ಲಿದ್ದ ಮೂರು ಮೊಬೈಲ್ ಮತ್ತು ಎರಡು ಸಾವಿರ ರೂ. ನಗದು ಹಣವನ್ನು ಕಳವು ಮಾಡಲಾಗಿತ್ತು. ಆಸುಪಾಸಿನ ಸಿಸಿಟಿವಿ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕಿದ ಪೊಲೀಸರು ಆರೋಪಿ ಮಹಮ್ಮದ್ ಅಶ್ರಫ್ ನನ್ನು ಬಂಧಿಸಿದ್ದು, ಕಳವುಗೈದ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಈತನ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಸುರತ್ಕಲ್ ಠಾಣೆಯಲ್ಲಿ ಈ ಹಿಂದೆ ಮೂರು ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ತಡಂಬೈಲ್ ಬಸ್ ನಿಲ್ದಾಣದ ಬಳಿ ಜೂನ್ 24ರಂದು ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

Mangalore 26 year old mobile thief arrested by surathkal police. The arrested has been identified as Ashraf Alias chota Ashraf.