ಬ್ರೇಕಿಂಗ್ ನ್ಯೂಸ್
30-06-24 08:12 pm Bangalore Correspondent ಕ್ರೈಂ
ಬೆಂಗಳೂರು, ಜೂ 30: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಅಪಹರಣ ಪ್ರಕರಣ ಬೆಳಕಿಗೆ ಬಂದಿದೆ. ಅಪಹರಣ ಪ್ರಕರಣದಲ್ಲಿ ಲೇಡಿ ಗ್ಯಾಂಗ್ ಜೊತೆ ಕನ್ನಡ ಪರ ಸಂಘಟನೆ ಅಧ್ಯಕ್ಷ ಪ್ರಕಾಶ್ ತಗಲಾಕುಂಡಿದ್ದಾನೆ. ಘಟನೆ ಸಂಬಂಧ ಶಂಕರಪುರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕಾಶ್ ಅಲಿಯಾಸ್ ಕನ್ನಡ ಪ್ರಕಾಶ್ & ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬ್ಯಾಂಕ್ ಉದ್ಯೋಗಿ ಮಂಜುನಾಥ್ ನನ್ನ ಪ್ರಕಾಶ್ & ಗ್ಯಾಂಗ್ ಕಿಡ್ನಾಪ್ ಮಾಡಿದೆ. ಕಿಡ್ನಾಪ್ ಮಾಡಿದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಕನ್ನಡ ಪ್ರಕಾಶ್ಗೆ ಸೇರಿದ ಕಚೇರಿಯಲ್ಲಿ ಮಂಜುನಾಥ್ ಅವರನ್ನ ಕರೆದುಕೊಂಡು ಬಂದು ಸಿಕ್ಕಾಪಟ್ಟೆ ಥಳಿಸಲಾಗಿತ್ತು. ಅಪಹರಿಸಿ ಹಣ, ಮನೆ ದಾಖಲೆಗಳನ್ನು ಕಸಿದುಕೊಂಡ ಟಾರ್ಚರ್ ಮಾಡಿದ್ದಾರೆ.
ಬ್ಯಾಂಕ್ ಉದ್ಯೋಗಿಯಾಗಿರುವ ಮಂಜುನಾಥ್, ಆರೋಪಿ ಮಂಜುಳಾ ಬಳಿ 8 ಲಕ್ಷ ರೂ ಸಾಲ ಪಡೆದಿದ್ದರು. ಸಾಲ ವಾಪಸ್ ನೀಡಲಾಗದಿದ್ದಾಗ ಮಂಜುನಾಥ್ ವಿರುದ್ಧ ಮಂಜುಳಾ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಏಪ್ರಿಲ್ 4ರಂದು ಕೊರಿಯರ್ ಬಂದಿರುವುದಾಗಿ ಮಂಜುನಾಥ್ಗೆ ಕರೆ ಮಾಡಿದ್ದ ಆರೋಪಿಗಳು, ಶಂಕರಮಠ ರಸ್ತೆಯ ಬಳಿ ಕರೆಸಿಕೊಂಡಿದ್ದಾರೆ. ಈ ವೇಳೆ ಮಂಜುಳಾ ಸೇರಿದಂತೆ ಕೆಲ ಮಹಿಳೆಯರು ಕಾರಿನಲ್ಲಿ ಬಂದು ಮಂಜುನಾಥ್ ಅವರನ್ನ ಕಿಡ್ನಾಪ್ ಮಾಡಿದ್ದಾರೆ. ಕಾರಿನಲ್ಲಿದ್ದ ಪ್ರಕಾಶ್ ಮತ್ತು ಆತನ ಚಾಲಕ ವೆಂಕಟಾಚಲಪತಿ, ಮಹಿಳೆಯರೊಂದಿಗೆ ಸೇರಿ ತನ್ನ ಕಚೇರಿಗೆ ಕರೆದೊಯ್ದು ಥಳಿಸಿದ್ದಾರೆ. ಬಳಿಕ ಹಣ, ಮನೆ ದಾಖಲೆಗಳನ್ನು ಕಸಿದುಕೊಂಡಿದ್ದಾರೆ. ನಂತರವೂ ಸಹ ಆರೋಪಿಗಳು ಕರೆ ಮಾಡಿ ಬೆದರಿಕೆ ಹಾಕುತ್ತಿರುವುದರಿಂದ ತನಗೆ ಜೀವಭಯವಿದೆ ಎಂದು ಮಂಜುನಾಥ್ ದೂರಿದ್ದಾರೆ. ಮಂಜುನಾಥ್ ನೀಡಿದ್ದ ದೂರಿನನ್ವಯ ಸದ್ಯ ಮಂಜುಳಾ, ಪ್ರಕಾಶ್, ವೆಂಕಟಾಚಲಪತಿ, ಮೂವರು ಅಪರಿಚಿತ ಮಹಿಳೆಯರ ವಿರುದ್ಧ ಶಂಕರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Pro kannada organisation president kannada Prakash arrested in kidnap case in Bangalore of bank employee. Bank employees was kidnapped by Prakash in his car and later taken to his office and have brutally assaulted him by nabbing cash and house documents.
02-07-24 02:23 pm
Bangalore Correspondent
ಕೇಂದ್ರ ಸರ್ಕಾರದ ಹೊಸ ಕಾನೂನುಗಳಿಗೆ ರಾಜ್ಯದಲ್ಲಿ ತಿದ...
02-07-24 01:16 pm
Bidar baby body, crime: ಹೂತು ಹಾಕಿದ್ದ ಮಗುವಿನ ಶ...
01-07-24 11:01 pm
Bangalore crime, Police constable suicide: ಮೂ...
01-07-24 06:48 pm
Devaramane tourist spot, News: ದೇವರಮನೆ ಟೂರಿಸ್...
01-07-24 02:04 pm
02-07-24 07:54 pm
HK News Desk
Mumbai news, sleep walking: ನಿದ್ದೆಯಲ್ಲಿ ನಡೆಯು...
02-07-24 12:27 pm
Mangalore news, kalladka abroad farm: ಕಲ್ಲಡ್ಕ...
01-07-24 11:26 pm
ಪ್ರತಿಪಕ್ಷ ನಾಯಕನಾಗಿ ಮೊದಲ ಭಾಷಣದಲ್ಲೇ ವಿವಾದಕ್ಕೆ ಸ...
01-07-24 10:57 pm
IAS Online Class, Sayooj Chandran ; ಬಿಎಸ್ಸಿ ಓ...
01-07-24 07:42 pm
02-07-24 06:39 pm
Mangalore Correspondent
Mangalore Sachitha Nandagopal, CMTAI: ಸಿಎಂಟಿಎ...
02-07-24 04:35 pm
Kadaba, Mangalore News; ಕಡಬದಲ್ಲಿ 800 ವರ್ಷ ಹಳೆ...
02-07-24 02:58 pm
Mangalore accident, Harekala Ullal: ಹರೇಕಳದಲ್ಲ...
02-07-24 01:41 pm
Mogling, Mangalore Samachar paper, Stany Alva...
01-07-24 10:15 pm
02-07-24 06:03 pm
HK News Desk
Jail Mangalore crime, attack; ಮಂಗಳೂರು ಜೈಲಿನಲ್...
01-07-24 09:38 pm
Arun Kathare reels star arrested, Bangalore c...
01-07-24 05:27 pm
Hassan SP office Murder, Police Constable; ಹಾ...
01-07-24 12:10 pm
Bangalore crime, kidnap, kannada Prakash: ಲೇಡ...
30-06-24 08:12 pm