Mysuru crime: ಮೈಸೂರು ; ಮಗನನ್ನ ಕೊಂದ ಅಳಿಯ, ಅಗಲಿಕೆ ಸಹಿಸದೆ ಆತ್ಮಹತ್ಯೆ ಮಾಡಿಕೊಂಡ ಅಮ್ಮ 

02-07-24 06:03 pm       HK News Desk   ಕ್ರೈಂ

ಕೊಲೆಯಾಗಿ ಹೋದ ಪುತ್ರನ  ಅಗಲಿಕೆಯ ನೋವು ಸಹಿಸದೆ ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ  ಕೂರ್ಗಳ್ಳಿಯಲ್ಲಿ ನಡೆದಿದೆ.

ಮೈಸೂರು, ಜುಲೈ 02: ಕೊಲೆಯಾಗಿ ಹೋದ ಪುತ್ರನ  ಅಗಲಿಕೆಯ ನೋವು ಸಹಿಸದೆ ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ  ಕೂರ್ಗಳ್ಳಿಯಲ್ಲಿ ನಡೆದಿದೆ.

ಭಾಗ್ಯಮ್ಮ (46) ಆತ್ಮಹತ್ಯೆ ಮಾಡಿಕೊಂಡವರು.

ನಿನ್ನೆ ಅವರು ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇವರ ಅಳಿಯ, ಅಂದರೆ ಮಗಳ ಗಂಡನಿಂದಲೇ ಮಗ ಅಭಿಷೇಕ್‌ ಕೊಲೆಯಾಗಿದ್ದ. ಈ ಕೊಲೆ ಮೈಸೂರಿನ ಕುವೆಂಪುನಗರದಲ್ಲಿ ಜೂನ್‌ 9ರಂದು ನಡೆದಿತ್ತು.

ಅಳಿಯ ರವಿಚಂದ್ರ ವರದಕ್ಷಿಣೆ ತರುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ಹಲ್ಲೆ ನಡೆಸುತ್ತಿದ್ದ. ಇದರಿಂದ ನೊಂದ ತಂಗಿ ಈ ಬಗ್ಗೆ ಅಣ್ಣನಲ್ಲಿ ದೂರಿದ್ದಳು. ತಂಗಿ ಮೇಲೆ ಆಗುತ್ತಿರುವ ಹಲ್ಲೆಯನ್ನು ತಡೆಯಲು ಹೋಗಿದ್ದ ಅಭಿಷೇಕ್‌ಗೆ ಭಾವ ರವಿಚಂದ್ರ ಚಾಕುವಿನಿಂದ ಇರಿದಿದ್ದು, ಅಭಿಷೇಕ್‌ ಸ್ಥಳದಲ್ಲೇ ಮೃತಪಟ್ಟಿದ್ದರು.

ಮಗ ಹತ್ಯೆಯಾಗಿದ್ದು, ಅಳಿಯ ಜೈಲುಪಾಲಾಗಿದ್ದಾನೆ. ಈ ಘಟನೆಗಳಿಂದ ನೊಂದ ತಾಯಿ ಭಾಗ್ಯಮ್ಮ, ಅಂದಿನಿಂದ ಮಗನ ನೆನಪಿನಲ್ಲಿಯೇ ಖಿನ್ನತೆಗೆ ಜಾರಿದ್ದರು. ನಿನ್ನೆ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Mysuru 46 year old mother commits suicide after son been murdered by son in law. The deceased has been identified as Bhagyamma.