ಬ್ರೇಕಿಂಗ್ ನ್ಯೂಸ್
04-09-24 04:42 pm Bangalore Correspondent ಕ್ರೈಂ
ಬೆಂಗಳೂರು, ಸೆ.4: ಬಾಂಗ್ಲಾದಿಂದ ಅಪ್ರಾಪ್ತ ಹೆಣ್ಣು ಮಕ್ಕಳನ್ನ ಕಳ್ಳಸಾಗಣಿಕೆ ಮೂಲಕ ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಜಾಗಕ್ಕೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು ಬೆಳ್ತಂಗಡಿ ಮೂಲದ ಟೆಕ್ಕಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಬೊಮ್ಮನಹಳ್ಳಿ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಕೈಗೊಂಡ ಜಂಟಿ ಕಾರ್ಯಾಚರಣೆಯಲ್ಲಿ ಹೊಂಗಸಂದ್ರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದುದನ್ನು ಪತ್ತೆ ಮಾಡಲಾಗಿದೆ. ಪಶ್ಚಿಮ ಬಂಗಾಳ ಮೂಲದ ಸೂರಜ್ ಸಹಜಿ (26), ಕರೀಷ್ಮಾ ಶೇಕ್ (23) ಹಾಗೂ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಬೆಳ್ತಂಗಡಿ ಮೂಲದ ಸುಬ್ರಹ್ಮಣ್ಯ ಶಾಸ್ತ್ರಿ ಎಂಬವರನ್ನು ಬಂಧಿಸಲಾಗಿದೆ. ಸುಬ್ರಹ್ಮಣ್ಯ ಶಾಸ್ತ್ರಿಗೆ ಕೆಲವೇ ದಿನಗಳಲ್ಲಿ ನಿಶ್ಚಿತಾರ್ಥ ನಡೆಯಲಿಕ್ಕಿತ್ತು. ವೇಶ್ಯಾವಾಟಿಕೆ ಅಡ್ಡೆಗೆ ಎರಡನೇ ಬಾರಿ ಎಂಟ್ರಿ ಕೊಟ್ಟು ಸಿಕ್ಕಿಬಿದ್ದ ಕಾರಣ ನಿಶ್ಚಿತಾರ್ಥ ರದ್ದಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಮಾತನಾಡಿ, ದಾಳಿ ವೇಳೆ ಪಶ್ಚಿಮ ಬಂಗಾಳ ವಿಳಾಸದ ಇಬ್ಬರು ಬಾಲಕಿಯರು ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ ಅವರು ಬಾಂಗ್ಲಾದೇಶ ಮೂಲದವರು ಎಂದು ತಿಳಿದುಬಂದಿದೆ. ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ಸುಬ್ರಹ್ಮಣ್ಯ ಶಾಸ್ತ್ರಿ ಅಪ್ರಾಪ್ತೆಯರನ್ನ ಕರೆಸಿಕೊಂಡಿದ್ದ. ಆತನ ಬೇಡಿಕೆ ಮೇರೆಗೆ ಉಳಿದ ಆರೋಪಿಗಳು ಅಪ್ರಾಪ್ತೆಯರನ್ನ ಕರೆತಂದಿದ್ದರು. ಬಳಿಕ ಹೊಂಗಸಂದ್ರದ ಬಾಡಿಗೆ ಮನೆಯಲ್ಲಿ ಇರಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಆರೋಪಿಗಳ ವಿರುದ್ಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.
ಕರಿಷ್ಮಾ ಹಾಗೂ ಸೂರಜ್ ಮೂಲತಃ ಪಶ್ಚಿಮ ಬಂಗಾಳ ರಾಜ್ಯದವರಾಗಿದ್ದು, ಹಲವು ವರ್ಷಗಳ ಹಿಂದೆ ಬೆಂಗಳೂರು ನಗರಕ್ಕೆ ಉದ್ಯೋಗ ನೆಪದಲ್ಲಿ ಬಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಅಂತೆಯೇ ಗೋವಿಂದಪುರದಲ್ಲಿ ಮನೆ ಬಾಡಿಗೆ ಪಡೆದು ಅಲ್ಲಿ ತಮ್ಮ ದಂಧೆಯನ್ನು ಆರೋಪಿಗಳು ನಡೆಸುತ್ತಿದ್ದರು. ಕೆಲ ದಿನಗಳ ಹಿಂದೆ ಬಾಂಗ್ಲಾದೇಶದ ಇಬ್ಬರು ಬಾಲಕಿಯರನ್ನು ಕರೆತಂದು ವೇಶ್ಯಾವಾಟಿಕೆ ಕೂಪಕ್ಕೆ ಕರಿಷ್ಮಾ ಗ್ಯಾಂಗ್ ನೂಕಿತ್ತು.
Bengaluru City Police rescued two minor Bangladeshi girls and arrested three individuals involved in a prostitution racket. The raid, conducted by the Central Crime Branch (CCB), led to the arrest of Karisma Sheikh alias Muskan from Hongsandra, Suraj Shahjee from Shantipur, and Subrahmanya Shastri from Electronic City.
15-09-24 05:33 pm
Bengaluru Correspondent
BJP, RSS: ರಾಜ್ಯ ಬಿಜೆಪಿಗೆ ಮತ್ತೆ ಸಂಘಟನಾ ಕಾರ್ಯದರ...
15-09-24 01:53 pm
Munirathan: ಗುತ್ತಿಗೆದಾರನಿಗೆ ಜಾತಿ ನಿಂದನೆ, ಲಂಚಕ...
15-09-24 12:47 pm
Nagamangala violence, Hemant Nimbalkar IPS: ನ...
13-09-24 09:10 pm
ಸಿಎಂ ಸಿದ್ದರಾಮಯ್ಯ ಪ್ರಕರಣ, ಹೈಕೋರ್ಟ್ ವಿಚಾರಣೆ ಮುಕ...
12-09-24 10:41 pm
16-09-24 02:04 pm
HK News Desk
ಆರು ತಿಂಗಳು ಜೈಲಲ್ಲಿದ್ದರೂ, ಸಿಎಂ ಸ್ಥಾನ ಬಿಟ್ಟುಕೊಡ...
15-09-24 06:55 pm
ಪೋರ್ಟ್ ಬ್ಲೇರ್ ಇನ್ನು ಶ್ರೀವಿಜಯ ಪುರಂ ; ವಸಾಹತು ಶಾ...
14-09-24 09:46 pm
ವಯನಾಡು ದುರಂತದಲ್ಲಿ ಒಂದೇ ಕುಟುಂಬದ 9 ಮಂದಿ ಬಲಿ ; ಈ...
13-09-24 12:33 pm
ಅಬಕಾರಿ ನೀತಿ ಹಗರಣ ; 6 ತಿಂಗಳ ಬಳಿಕ ಸಿಎಂ ಕೇಜ್ರಿವಾ...
13-09-24 12:24 pm
16-09-24 02:07 pm
Mangalore Correspondent
BC road fight, Mangalore, Sharan Pumpwell: ನಾ...
16-09-24 11:55 am
Mangalore sand mining, Pavoor Uliya: ಮರಳು ದಂಧ...
15-09-24 10:55 pm
Mangalore Eid, Sharan Pumpwell, Puneeth Attav...
15-09-24 09:49 pm
ರಾಜ್ಯಾದ್ಯಂತ ಮಾನವ ಸರಪಳಿ ; ಕೈ-ಕೈ ಜೋಡಿಸಿ ಪ್ರಜಾಪ್...
15-09-24 09:44 pm
15-09-24 01:21 pm
Bangalore Correspondent
MLA Munirathna Arrest: ತಿಂಗಳಿಗೆ 30 ಲಕ್ಷ ಲಂಚಕ್...
14-09-24 06:54 pm
Srimathi Shetty murder case, Mangalore Court...
14-09-24 11:52 am
Kristina Joksimovic, Miss Switzerland finalis...
13-09-24 10:50 pm
Mangalore crime, Bantwal Bank: ಬ್ಯಾಂಕ್ ಕಚೇರಿಯ...
13-09-24 09:08 pm