ಬ್ರೇಕಿಂಗ್ ನ್ಯೂಸ್
07-09-24 05:45 pm HK News Desk ಕ್ರೈಂ
ಬೆಂಗಳೂರು, ಸೆ.7: ನಿತ್ಯ ಅಶ್ಲೀಲ ವೀಡಿಯೋ ತೋರಿಸಿ ಕಿರುಕುಳ ನೀಡುತ್ತಿದ್ದ ಗಂಡನ ನಡೆಗೆ ಬೇಸತ್ತ ಮಹಿಳೆಯೊಬ್ಬರು ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಹುಳಿಮಾವು ಅಕ್ಷಯನಗರದಲ್ಲಿ ನಡೆದಿದೆ.
ಅನುಷಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆಯ ಪತಿ ಶ್ರೀಹರಿ ಮೊಬೈಲ್ನಲ್ಲಿ ಅಶ್ಲೀಲ ವೀಡಿಯೋ ತೋರಿಸಿ ಹೀಗೆ ಸಹಕರಿಸು ಎಂದು ಟಾರ್ಚರ್ ಕೊಡುತ್ತಿದ್ದ. ಅಲ್ಲದೇ ಆಕೆಯ ಮುಂದೆಯೇ ಇನ್ನೊಂದು ಹುಡುಗಿಯ ಜೊತೆ ಸಲುಗೆ ಬೆಳೆಸಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಹೆಂಡತಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಎರಡು ತಿಂಗಳಿಂದ ಡೈವರ್ಸ್ ಕೊಡುವಂತೆ ಪೀಡಿಸುತ್ತಿದ್ದ. ಇದರಿಂದ ಬೇಸತ್ತು ಅನುಷಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶ್ರೀಹರಿ ಹಾಗೂ ಅನುಷಾಗೆ ಮದುವೆಯಾಗಿ 5 ವರ್ಷ ಆಗಿತ್ತು. ಒಂದು ಮಗು ಕೂಡ ಇತ್ತು. ಇದರ ನಡುವೆ, ಪತಿ ಶ್ರೀಹರಿ ಬೇರೆ ಹುಡುಗಿಯರ ಜೊತೆ ಸಹವಾಸ ಮಾಡಿದ್ದ. ಮನೆಯ ವಾಶ್ ರೂಂನಿಂದ ಗಂಡನಿಗೆ ವೀಡಿಯೋ ಕಾಲ್ ಮಾಡಿ ಪೆಟ್ರೋಲ್ ಸುರಿದುಕೊಳ್ಳುತ್ತೇನೆ ಎಂದು ಹೆಂಡತಿ ಹೇಳಿದ್ದಾಳೆ. ಈ ವೇಳೆ ರಕ್ಷಣೆ ಮಾಡದೇ ನಿರ್ಲಕ್ಷ್ಯ ಮಾಡಿರುವುದಾಗಿ ಮೃತ ಅನುಷಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಎರಡು ದಿನಗಳ ಹಿಂದೆಯೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅನುಶಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಆಕೆ ಸಾವು ಕಂಡಿದ್ದಾರೆ.
ನಡತೆ ಸರಿಯಿಲ್ಲ ಎಂದು ಹೇಳಿ ಆತನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಕಚೇರಿಯಲ್ಲಿ ಟೀಮ್ ಲೀಡರ್ ಆಗಿದ್ದ. ಅದಾದಮೇಲೆ ಹೆಂಡ್ತಿ ಮೇಲೆ ಟಾರ್ಚರ್ ಮತ್ತೂ ಜಾಸ್ತಿ ಮಾಡಿದ್ದ. ಸಾಯೋದಿನ ಪಕ್ಕದಲ್ಲೇ ಇದ್ದ. ಆಕೆ ಸಾಯ್ತಿದಾಳೆ ಅಂತಾ ಗೊತ್ತಿದ್ರೂ ನಮಗೆ ಹೇಳಲಿಲ್ಲ. ಎಲ್ಲರೂ ಒಂದೇ ಮನೆಯಲ್ಲೇ ಇದ್ದೆವು. ಮಾಸ್ಟರ್ ಬೆಡ್ ರೂಮ್ ನಲ್ಲಿ ಅವರು ಇದ್ದರು. ಅವ್ಳು ಸಾಯ್ಲಿ ಅಂತಾ ಸಾಯೋ ಟೈಮಲ್ಲಿ ಬಂದು ನಮಗೆ ಹೇಳ್ದ. ಹತ್ತು ನಿಮಿಷ ಮುಂಚೆ ಹೇಳಿದ್ರೆ ನಾವು ಡೋರ್ ಒಡೆದು ಮಗಳನ್ನ ಬದುಕಿಸಿಕೊಳ್ತಿದ್ವಿ. 2 ವರ್ಷದ ಮಗು ಅನಾಥವಾಗಿದೆ. ಅಮ್ಮ ಎಲ್ಲಿ ಅಂತಾ ಕೇಳುತ್ತೆ. ನಿಮ್ಮಮ್ಮ ಬರಲ್ಲ ಅಂತಾ ಹೇಗೆ ಹೇಳೋದು. ನನ್ನ ಮಗಳ ಜೀವನ ಹಾಳ್ಮಾಡಿಬಿಟ್ಟ ಎಂದು ಯುವತಿ ತಾಯಿ ರೇಣುಕಾ ಕಣ್ಣೀರಿಟ್ಟಿದ್ದಾರೆ.
Wife commits suicide over husbands sex torture in Bangalore. The deceased has been identified as Anusha. Husband was showing her sex videos and forcing her to have such sex.
16-09-24 07:49 pm
HK News Desk
P Murthy, Ambedkar Sena, MLA Munirathna: ದಲಿತ...
15-09-24 05:33 pm
BJP, RSS: ರಾಜ್ಯ ಬಿಜೆಪಿಗೆ ಮತ್ತೆ ಸಂಘಟನಾ ಕಾರ್ಯದರ...
15-09-24 01:53 pm
Munirathan: ಗುತ್ತಿಗೆದಾರನಿಗೆ ಜಾತಿ ನಿಂದನೆ, ಲಂಚಕ...
15-09-24 12:47 pm
Nagamangala violence, Hemant Nimbalkar IPS: ನ...
13-09-24 09:10 pm
16-09-24 02:04 pm
HK News Desk
ಆರು ತಿಂಗಳು ಜೈಲಲ್ಲಿದ್ದರೂ, ಸಿಎಂ ಸ್ಥಾನ ಬಿಟ್ಟುಕೊಡ...
15-09-24 06:55 pm
ಪೋರ್ಟ್ ಬ್ಲೇರ್ ಇನ್ನು ಶ್ರೀವಿಜಯ ಪುರಂ ; ವಸಾಹತು ಶಾ...
14-09-24 09:46 pm
ವಯನಾಡು ದುರಂತದಲ್ಲಿ ಒಂದೇ ಕುಟುಂಬದ 9 ಮಂದಿ ಬಲಿ ; ಈ...
13-09-24 12:33 pm
ಅಬಕಾರಿ ನೀತಿ ಹಗರಣ ; 6 ತಿಂಗಳ ಬಳಿಕ ಸಿಎಂ ಕೇಜ್ರಿವಾ...
13-09-24 12:24 pm
16-09-24 09:12 pm
Mangalore Correspondent
ಜಾಗತಿಕ ತಾಪಮಾನದಿಂದ ಅತಿ ಉಷ್ಣತೆ ಮತ್ತು ಮಳೆ ಹೆಚ್ಚಳ...
16-09-24 09:09 pm
ಸೆ.18ರಂದು ಬಿಗ್ ಸಿನೆಮಾಸ್ ನಲ್ಲಿ “ಇನ್ನೊವೇಶನ್ ಸಮ್...
16-09-24 06:30 pm
ಕಾಟಿಪಳ್ಳ ಮಸೀದಿಗೆ ಕಲ್ಲು ತೂರಾಟ ಪ್ರಕರಣ ; ಮಿಂಚಿನ...
16-09-24 02:07 pm
BC road fight, Mangalore, Sharan Pumpwell: ನಾ...
16-09-24 11:55 am
15-09-24 01:21 pm
Bangalore Correspondent
MLA Munirathna Arrest: ತಿಂಗಳಿಗೆ 30 ಲಕ್ಷ ಲಂಚಕ್...
14-09-24 06:54 pm
Srimathi Shetty murder case, Mangalore Court...
14-09-24 11:52 am
Kristina Joksimovic, Miss Switzerland finalis...
13-09-24 10:50 pm
Mangalore crime, Bantwal Bank: ಬ್ಯಾಂಕ್ ಕಚೇರಿಯ...
13-09-24 09:08 pm