ಬ್ರೇಕಿಂಗ್ ನ್ಯೂಸ್
21-09-24 10:24 pm Bangalore Correspondent ಕ್ರೈಂ
ಬೆಂಗಳೂರು, ಸೆ.21: ನಗರದ ವೈಯ್ಯಾಲಿ ಕಾವಲ್ ನ ಮನೆಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಾಲಕ್ಷ್ಮೀ (26) ಎಂಬ ಯುವತಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕಳೆದ 19 ದಿನಗಳ ಹಿಂದೆಯೇ ಆಕೆಯನ್ನು ಹತ್ಯೆ ಮಾಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹಂತಕರು ಆಕೆಯ ದೇಹವನ್ನು 30 ತುಂಡುಗಳಾಗಿ ಕತ್ತರಿಸಿ, ಆ ತುಂಡುಗಳನ್ನು ಫ್ರಿಡ್ಜ್ ನಲ್ಲಿ ಇಟ್ಟು ಹೋಗಿದ್ದಾರೆ. ಆಕೆಯ ದೇಹದ ತುಂಡುಗಳಿಂದ ಬಂದ ರಕ್ತ ಫ್ರಿಡ್ಜ್ ನಿಂದ ಸೋರಿಕೆಯಾಗಿ ಮನೆಯ ತುಂಬೆಲ್ಲಾ ಹರಡಿತ್ತು. ಶುಕ್ರವಾರದಂದು ಆಕೆಯಿದ್ದ ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಮೊದಮೊದಲಿಗೆ, ಯಾವುದೋ ಹೆಗ್ಗಣ ಸತ್ತಿರುವ ವಾಸನೆ ಇರಬಹುದು ಎಂದು ನೆರೆಯವರು ತಿಳಿದಿದ್ದರು.

ಆದರೆ, ದಿನಗಳೆದಂತೆ ವಾಸನೆ ಮಹಾಲಕ್ಷ್ಮಿಯಿದ್ದ ಮನೆಯಿಂದಲೇ ಬರುತ್ತಿದ್ದ ಕಾರಣಕ್ಕೆ ನೆರೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಪೊಲೀಸರು ಬಂದು ಪರಿಶೀಲಿಸಿ ಬಾಗಿಲು ಒಡೆದು ಹೋದಾಗ ಮನೆಯಲ್ಲಿ ಹರಡಿದ್ದ ರಕ್ತದಲ್ಲಿ ಅದಾಗಲೇ ಹುಳ ಬಿದ್ದಿದ್ದವು. ರಕ್ತ ಎಲ್ಲಿಂದ ಸೋರಿದೆ ಎಂದು ಪರಿಶೀಲಿಸಿದಾಗ ಆ ರಕ್ತ ಪೊಲೀಸರನ್ನು ಮನೆಯಲ್ಲಿದ್ದ ಫ್ರಿಡ್ಜ್ ಕಡೆಗೆ ಕರೆದೊಯ್ದಿದೆ. ಫ್ರಿಡ್ಜ್ ಬಾಗಿಲು ತೆಗೆದಾಗ ಪೊಲೀಸರು ಫ್ರಿಡ್ಜ್ ನಲ್ಲಿದ್ದ ಯುವತಿಯ ದೇಹದ 30 ಪೀಸ್ ಗಳನ್ನು ನೋಡಿ ದಂಗಾಗಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆಕೆ ನೇಪಾಳದವಳು ಎಂದು ಹೇಳಲಾಗಿದೆ. ಆಕೆಯು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದಳು. ಪ್ರತಿ ದಿನ ಬೆಳಗ್ಗೆ 9.30ಕ್ಕೆ ಕೆಲಸಕ್ಕೆ ಹೋದರೆ ರಾತ್ರಿ 9 ಗಂಟೆಗೆ ಮನೆಗೆ ಬರುತ್ತಿದ್ದಳು. ಒಮ್ಮೆ ಮನೆಯೊಳಗೆ ಹೋದರೆ ಪುನಃ ಆಕೆ ಹೊರಕ್ಕೆ ಬರುತ್ತಿದ್ದುದು ಮರುದಿನ ಡ್ಯುಟಿಗೆ ಹೋಗಬೇಕಾದಾಗ ಮಾತ್ರ ಎಂದು ನೆರೆಯವರು ಹೇಳಿದ್ದಾರೆ.
ಮತ್ತೊಂದು ಮೂಲದ ಪ್ರಕಾರ, ಆಕೆಯು ನೇಪಾಳದವಳಾಗಿದ್ದು ವಿವಾಹಿತೆಯಾಗಿದ್ದಳು. ದಂಪತಿಯಿಬ್ಬರೂ ಮುನೇಶ್ವರನಗರದಲ್ಲಿರುವ ಮನೆಯೊಂದರಲ್ಲಿ ವಾಸವಾಗಿದ್ದರು. ಆಕೆ, ಹುಕುಂ ಸಿಂಗ್ ಎಂಬಾತನನ್ನು ಮದುವೆಯಾಗಿದ್ದಳು. ಆ ದಂಪತಿಗೊಂದು ಮಗುವೂ ಇದೆ. ಆದರೆ, ಆಕೆ ತನ್ನ ಪತಿ ಹಾಗೂ ಮಗುವನ್ನು ತೊರೆದಿದ್ದಳು. ಪತಿ ಹಾಗೂ ಮಗುವನ್ನು ತೊರೆದ ನಂತರ ಆಕೆ ವೈಯ್ಯಾಲಿ ಕಾವಲ್ ನಲ್ಲಿ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು ಎಂದು ಹೇಳಲಾಗಿದೆ.
In a shocking incident, a 26-year-old home-alone woman was murdered and her body parts cut into several pieces and stuffed in the fridge of the house she was living in at Vinayaka Nagar in Vyalikaval here on Saturday.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
08-11-25 04:08 pm
Mangaluru Staff
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm