ಬ್ರೇಕಿಂಗ್ ನ್ಯೂಸ್
22-09-24 10:40 pm Mangalore Correspondent ಕ್ರೈಂ
ಮಂಗಳೂರು, ಸೆ.22: ಮಹಿಳೆಯೊಬ್ಬರು ಪಾರ್ಟ್ ಟೈಮ್ ಉದ್ಯೋಗದ ಹೆಸರಲ್ಲಿ ಹಣ ಹೂಡಿಕೆ ಮಾಡಿ 28 ಲಕ್ಷ ರೂಪಾಯಿ ಕಳಕೊಂಡಿದ್ದು ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ.
ಜುಲೈ 21ರಂದು ಮಹಿಳೆಗೆ ವಾಟ್ಸಪ್ ನಲ್ಲಿ ಪಾರ್ಟ್ ಟೈಮ್ ಉದ್ಯೋಗದ ಬಗ್ಗೆ ಮೆಸೇಜ್ ಬಂದಿತ್ತು. ಟೆಲಿಗ್ರಾಮ್ ಏಪ್ ಡೌನ್ಲೋಡ್ ಮಾಡುವಂತೆ ಮೋಸಗಾರರು ಸೂಚನೆ ನೀಡಿದ್ದರು. ಅದರಂತೆ, ಏಪ್ ನಲ್ಲಿ ವಿಡಿಯೋ ಲಿಂಕ್ ಷೇರ್ ಮಾಡಿದ್ದು, ಉದ್ಯೋಗದ ಬಗ್ಗೆ ಮಾಹಿತಿ ನೀಡಲು 123 ರೂ. ಪಾವತಿ ಮಾಡುವಂತೆ ಹೇಳಿದ್ದರು. ಆನಂತರ, ವಿಡಿಯೋ ಒಂದನ್ನು ಕಳಿಸಿದ್ದು, ಅದನ್ನು ನೋಡಿ ಸ್ಕ್ರೀನ್ ಶಾಟ್ ಶೇರ್ ಮಾಡುವಂತೆ ಕೇಳಿಕೊಂಡಿದ್ದರು. ಮತ್ತೆ 130 ರೂ. ಕಳಿಸುವುದಕ್ಕೆ ಹೇಳಿದ್ದು ಹಾಗೆಯೇ ಮಹಿಳೆ ಅನುಸರಿಸಿದ್ದರು.
ಜುಲೈ 23ರಂದು ಮತ್ತೊಂದು ಲಿಂಕ್ ಕಳಿಸಿದ್ದು, ಮತ್ತೆ ಒಂದು ಸಾವಿರ ರೂ. ಪಾವತಿಸುವಂತೆ ಹೇಳಿದ್ದರು. ಮಹಿಳೆ ಒಂದು ಸಾವಿರ ಪಾವತಿಸಿದ್ದು, ಅವರು ಹೇಳಿದ ಹಾಗೇ ಮಾಡಿದ್ದಕ್ಕಾಗಿ ಈಕೆಗೆ 1300 ರೂ. ಕಳಿಸಿಕೊಟ್ಟು ನಂಬಿಕೆ ಬರುವಂತೆ ಮಾಡಿದ್ದರು.
ಆನಂತರ, ಮತ್ತಷ್ಟು ಲಿಂಕ್ ಗಳನ್ನು ಕಳಿಸಿಕೊಟ್ಟು ವಿಶ್ವಾಸ ಹುಟ್ಟಿಸಿದ್ದರು. ಇದೇ ನಂಬಿಕೆಯಿಂದ ಮಹಿಳೆ 2.85 ಲಕ್ಷ ರೂ.ವನ್ನು ಅವರು ನೀಡಿದ್ದ ಖಾತೆಗೆ ಕಳಿಸಿಕೊಟ್ಟಿದ್ದಾರೆ. ಇನ್ನೊಂದು ಖಾತೆಗೆ 25.32 ಲಕ್ಷ ರೂ.ವನ್ನು ರವಾನೆ ಮಾಡಿದ್ದಾರೆ. ವಂಚಕರು 28.18 ಲಕ್ಷ ರೂ.ಗೆ ಪ್ರತಿಯಾಗಿ ದೊಡ್ಡ ಮೊತ್ತದ ಲಾಭಾಂಶವನ್ನು ನೀಡುವುದಾಗಿ ನಂಬಿಸಿದ್ದರು. ಹಣ ಹಿಂತಿರುಗಿ ಬರುತ್ತೆ ಎಂಬ ನಂಬಿಕೆಯಿಂದ ಮನೆಯಲ್ಲಿ ಯಾರಿಗೂ ಹೇಳದೆ ಮಹಿಳೆ ಕೆಲವು ದಿನಗಳನ್ನು ಕಳೆದಿದ್ದಾರೆ. ಆದರೆ ವಂಚಕರು ಸಂಪರ್ಕವನ್ನು ಕಡಿದುಕೊಂಡಿದ್ದು, ಮಹಿಳೆಗೆ ಪಂಗನಾಮ ಹಾಕಿದ್ದಾರೆ. ಆನಂತರ, ಹಣ ಕಳಕೊಂಡ ಬಗ್ಗೆ ಮನೆಯವರಲ್ಲಿ ಹೇಳಿಕೊಂಡಿದ್ದು ಕೊಣಾಜೆ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದಾರೆ.
A woman was allegedly duped of Rs 28.18 lakh in a part-time job scam here, said the police on Sunday. In a complaint to Konaje police, the victim of the job fraud scam said that she received a WhatsApp message offering her a part-time job on July 21. She was asked to download the Telegram app, where she received a link from the fraudsters.
25-06-26 09:10 pm
HK News Staffer
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 10:56 pm
HK News Staffer
Mangalore Drugs, Police: ಒಂದು ವರ್ಷದಲ್ಲಿ 400 ಡ...
25-06-26 10:48 pm
ಸಂಪುಟ ವಿಸ್ತರಣೆ ವಿಳಂಬ ; ಪ್ರಕೃತಿ ವಿಕೋಪ ಮೇಲುಸ್ತು...
25-06-26 02:39 pm
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
25-06-26 09:40 pm
HK News Staffer
ಮಂಡ್ಯದಲ್ಲಿ ಸೆಲ್ಫಿ ಹುಚ್ಚಿಗೆ ಐವರ ಬಲಿ ; ಕಾವೇರಿ ನ...
25-06-26 01:00 pm
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm