ಬ್ರೇಕಿಂಗ್ ನ್ಯೂಸ್
22-09-24 10:40 pm Mangalore Correspondent ಕ್ರೈಂ
ಮಂಗಳೂರು, ಸೆ.22: ಮಹಿಳೆಯೊಬ್ಬರು ಪಾರ್ಟ್ ಟೈಮ್ ಉದ್ಯೋಗದ ಹೆಸರಲ್ಲಿ ಹಣ ಹೂಡಿಕೆ ಮಾಡಿ 28 ಲಕ್ಷ ರೂಪಾಯಿ ಕಳಕೊಂಡಿದ್ದು ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ.
ಜುಲೈ 21ರಂದು ಮಹಿಳೆಗೆ ವಾಟ್ಸಪ್ ನಲ್ಲಿ ಪಾರ್ಟ್ ಟೈಮ್ ಉದ್ಯೋಗದ ಬಗ್ಗೆ ಮೆಸೇಜ್ ಬಂದಿತ್ತು. ಟೆಲಿಗ್ರಾಮ್ ಏಪ್ ಡೌನ್ಲೋಡ್ ಮಾಡುವಂತೆ ಮೋಸಗಾರರು ಸೂಚನೆ ನೀಡಿದ್ದರು. ಅದರಂತೆ, ಏಪ್ ನಲ್ಲಿ ವಿಡಿಯೋ ಲಿಂಕ್ ಷೇರ್ ಮಾಡಿದ್ದು, ಉದ್ಯೋಗದ ಬಗ್ಗೆ ಮಾಹಿತಿ ನೀಡಲು 123 ರೂ. ಪಾವತಿ ಮಾಡುವಂತೆ ಹೇಳಿದ್ದರು. ಆನಂತರ, ವಿಡಿಯೋ ಒಂದನ್ನು ಕಳಿಸಿದ್ದು, ಅದನ್ನು ನೋಡಿ ಸ್ಕ್ರೀನ್ ಶಾಟ್ ಶೇರ್ ಮಾಡುವಂತೆ ಕೇಳಿಕೊಂಡಿದ್ದರು. ಮತ್ತೆ 130 ರೂ. ಕಳಿಸುವುದಕ್ಕೆ ಹೇಳಿದ್ದು ಹಾಗೆಯೇ ಮಹಿಳೆ ಅನುಸರಿಸಿದ್ದರು.
ಜುಲೈ 23ರಂದು ಮತ್ತೊಂದು ಲಿಂಕ್ ಕಳಿಸಿದ್ದು, ಮತ್ತೆ ಒಂದು ಸಾವಿರ ರೂ. ಪಾವತಿಸುವಂತೆ ಹೇಳಿದ್ದರು. ಮಹಿಳೆ ಒಂದು ಸಾವಿರ ಪಾವತಿಸಿದ್ದು, ಅವರು ಹೇಳಿದ ಹಾಗೇ ಮಾಡಿದ್ದಕ್ಕಾಗಿ ಈಕೆಗೆ 1300 ರೂ. ಕಳಿಸಿಕೊಟ್ಟು ನಂಬಿಕೆ ಬರುವಂತೆ ಮಾಡಿದ್ದರು.
ಆನಂತರ, ಮತ್ತಷ್ಟು ಲಿಂಕ್ ಗಳನ್ನು ಕಳಿಸಿಕೊಟ್ಟು ವಿಶ್ವಾಸ ಹುಟ್ಟಿಸಿದ್ದರು. ಇದೇ ನಂಬಿಕೆಯಿಂದ ಮಹಿಳೆ 2.85 ಲಕ್ಷ ರೂ.ವನ್ನು ಅವರು ನೀಡಿದ್ದ ಖಾತೆಗೆ ಕಳಿಸಿಕೊಟ್ಟಿದ್ದಾರೆ. ಇನ್ನೊಂದು ಖಾತೆಗೆ 25.32 ಲಕ್ಷ ರೂ.ವನ್ನು ರವಾನೆ ಮಾಡಿದ್ದಾರೆ. ವಂಚಕರು 28.18 ಲಕ್ಷ ರೂ.ಗೆ ಪ್ರತಿಯಾಗಿ ದೊಡ್ಡ ಮೊತ್ತದ ಲಾಭಾಂಶವನ್ನು ನೀಡುವುದಾಗಿ ನಂಬಿಸಿದ್ದರು. ಹಣ ಹಿಂತಿರುಗಿ ಬರುತ್ತೆ ಎಂಬ ನಂಬಿಕೆಯಿಂದ ಮನೆಯಲ್ಲಿ ಯಾರಿಗೂ ಹೇಳದೆ ಮಹಿಳೆ ಕೆಲವು ದಿನಗಳನ್ನು ಕಳೆದಿದ್ದಾರೆ. ಆದರೆ ವಂಚಕರು ಸಂಪರ್ಕವನ್ನು ಕಡಿದುಕೊಂಡಿದ್ದು, ಮಹಿಳೆಗೆ ಪಂಗನಾಮ ಹಾಕಿದ್ದಾರೆ. ಆನಂತರ, ಹಣ ಕಳಕೊಂಡ ಬಗ್ಗೆ ಮನೆಯವರಲ್ಲಿ ಹೇಳಿಕೊಂಡಿದ್ದು ಕೊಣಾಜೆ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದಾರೆ.
A woman was allegedly duped of Rs 28.18 lakh in a part-time job scam here, said the police on Sunday. In a complaint to Konaje police, the victim of the job fraud scam said that she received a WhatsApp message offering her a part-time job on July 21. She was asked to download the Telegram app, where she received a link from the fraudsters.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 10:50 pm
Mangalore Correspondent
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm