Karwar Murder, Crime, Suicide: ಹಣಕೋಣ ಉದ್ಯಮಿ ಕೊಲೆಗೆ ಸುಪಾರಿ ನೀಡಿದ್ದ ಗೋವಾ ಉದ್ಯಮಿ ಆತ್ಮಹತ್ಯೆ ; ನದಿಯಲ್ಲಿ ಶವ ಪತ್ತೆ, ಸಂಬಂಧಿಗಳೇ ಆಗಿದ್ದವರ ದ್ವೇಷ ಸಾವಿನಲ್ಲಿ ಅಂತ್ಯ ! 

25-09-24 10:32 pm       HK News Desk   ಕ್ರೈಂ

ಪುಣೆಯಲ್ಲಿ ಉದ್ಯಮಿಯಾಗಿದ್ದ ವಿನಾಯಕ ನಾಯ್ಕ ಅವರನ್ನು ಹತ್ಯೆಗೈಯ್ಯಲು ಸುಪಾರಿ ನೀಡಿದ್ದರು ಎನ್ನಲಾದ ಗೋವಾ ಉದ್ಯಮಿ ಗುರುಪ್ರಸಾದ ರಾಣೆ (52) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾರವಾರ, ಸೆ.25: ಪುಣೆಯಲ್ಲಿ ಉದ್ಯಮಿಯಾಗಿದ್ದ ವಿನಾಯಕ ನಾಯ್ಕ ಅವರನ್ನು ಹತ್ಯೆಗೈಯ್ಯಲು ಸುಪಾರಿ ನೀಡಿದ್ದರು ಎನ್ನಲಾದ ಗೋವಾ ಉದ್ಯಮಿ ಗುರುಪ್ರಸಾದ ರಾಣೆ (52) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುರುಪ್ರಸಾದ ಅವರ ಮೃತದೇಹವು ಗೋವಾ ರಾಜ್ಯದ ಬೇತುಲ್ ಎಂಬಲ್ಲಿ ಮಾಂಡೋವಿ ನದಿ ತೀರದಲ್ಲಿ ಪತ್ತೆಯಾಗಿದೆ. ಸಾವಿನ ಸುದ್ದಿಯನ್ನು ಕಾರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದ್ದಾರೆ. ವೈಯಕ್ತಿಕ ದ್ವೇಷದಿಂದ ವಿನಾಯಕ ನಾಯ್ಕ ಅವರ ಹತ್ಯೆಗೆ ಗುರುಪ್ರಸಾದ್ ಸುಪಾರಿ ನೀಡಿದ್ದರು ಎನ್ನಲಾಗಿದೆ. 

ಇವರಿಬ್ಬರೂ ಸಂಬಂಧಿಗಳೇ ಆಗಿದ್ದು ಯಾವುದೋ ಕಾರಣಕ್ಕೆ ದ್ವೇಷ ಬೆಳೆಸಿಕೊಂಡಿದ್ದರು. ಗೋವಾದ ಪೊಂಡಾದಲ್ಲಿರುವ ತಮ್ಮ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾದ ಅಸ್ಸಾಂ ಮೂಲದ ಲಕ್ಷ್ಮಿಜ್ಯೋತಿನಾಥ, ಬಿಹಾರ ಮೂಲದ ಮಾಸುಮ ಮಹೇಂದ್ರಾಪುರ ಮತ್ತು ಅಜ್ಮಲ್ ಪಯರನಿಯಾ ಎಂಬವರನ್ನು ಕೊಲೆ ಕೃತ್ಯಕ್ಕೆ ಬಳಸಿಕೊಂಡಿದ್ದರು. ಈ ಮೂವರು ಸೇರಿ ಮಾರಕಾಸ್ತ್ರಗಳಿಂದ ಸೆ.22 ರಂದು ವಿನಾಯಕ ಅವರನ್ನು ಹಣಕೋಣ ಗ್ರಾಮದ ಮನೆಯಲ್ಲೇ ಹತ್ಯೆ ಮಾಡಿದ್ದರು.

Karwar Pune businessman murder, man behind murder commits suicide in Goa. The deceased has been identified as Guruprasad Rane. Guruprasad used supari killers to murder Vinayak Nayak at his house in Karwar.