ಬ್ರೇಕಿಂಗ್ ನ್ಯೂಸ್
06-11-24 09:11 pm HK News Desk ಕ್ರೈಂ
ಹಾಸನ, ನ.6: ಪೊಲೀಸ್ ಕಾನ್ಸ್ ಟೇಬಲ್ ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸಿರುವ ಹಾಸನ ಪೊಲೀಸರು, ಕೊಲೆಗೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದೇ ಕಾರಣ ಎನ್ನುವ ವಿಚಾರವನ್ನು ಪತ್ತೆ ಮಾಡಿದ್ದಾರೆ.
ಕೆಐಎಸ್ಎಫ್ ಪಡೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸ್ ಸಿಬಂದಿಯಾಗಿದ್ದ ಬಿವಿ ಹರೀಶ್ ಕೊಲೆಯಾಗಿದ್ದರು. ನ.11ರಂದು ಮದುವೆಗೆ ಸಿದ್ಧತೆ ನಡೆಸುತ್ತಿದ್ದಾಗಲೇ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದರು. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಹಾಸನದಿಂದ ತನ್ನ ಸ್ವಗ್ರಾಮ ಅರಸೀಕೆರೆ ತಾಲೂಕಿನ ಬಾಗೇಶಪುರಕ್ಕೆ ತೆರಳುತ್ತಿದ್ದಾಗಲೇ ಬೈಕಿನಲ್ಲಿ ತೆರಳುತ್ತಿದ್ದಾಗ ಮೂವರು ಆಗಂತುಕರು ಅಡ್ಡಗಟ್ಟಿ ಕಣ್ಣಿಗೆ ಮೆಣಸಿನ ಪುಡಿ ಎರಚಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು.

ಘಟನೆ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ್ದು, ಹರೀಶ್ ಹಾಸನದಲ್ಲಿ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನುವ ಅಂಶವನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಮಾಜಿ ಯೋಧನ ಪತ್ನಿಯೊಂದಿಗೆ ಹರೀಶ್ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗುತ್ತಿದ್ದು, ಇದೇ ವಿಚಾರದಲ್ಲಿ ಯೋಧ ಮತ್ತು ಹರೀಶ್ ನಡುವೆ ಸಾಕಷ್ಟು ಬಾರಿ ಗಲಾಟೆ ನಡೆದಿತ್ತು. ಯೋಧ ಕರ್ತವ್ಯದಲ್ಲಿದ್ದಾಗೆಲ್ಲ ಹರೀಶ್ ಮಹಿಳೆಯ ಮನೆಗೆ ತೆರಳುತ್ತಿದ್ದ ಎನ್ನುವ ಶಂಕೆಯಲ್ಲಿ ಗಲಾಟೆ ಮಾಡಿಕೊಂಡಿದ್ದರು.
ಇದರಿಂದ ಸಿಟ್ಟುಗೊಂಡಿದ್ದ ಯೋಧ ಮೂರು ತಿಂಗಳ ಹಿಂದೆ ಸೇನೆಯ ಕೆಲಸವನ್ನೇ ಬಿಟ್ಟು ಬಂದಿದ್ದು, ಹರೀಶ್ ನನ್ನು ಕೊಲೆ ಮಾಡುವುದಾಗಿ ಹೇಳಿಕೊಂಡಿದ್ದ. ಇದೇ ವಿಚಾರದಲ್ಲಿ ತನ್ನ ಪತ್ನಿಯ ಜೊತೆಗೂ ಗಲಾಟೆ ಮಾಡಿಕೊಂಡಿದ್ದ. ಈ ನಡುವೆ, ಪೊಲೀಸ್ ಪೇದೆ ಹರೀಶ್ ಗೆ ಬೇರೆ ಯುವತಿ ಜೊತೆಗೆ ಮದುವೆ ನಿಶ್ಚಯವಾಗಿತ್ತು. ಇತ್ತೀಚೆಗೆ ತನ್ನ ಊರಲ್ಲಿ ಹೊಸ ಮನೆ ಕಟ್ಟಿಸಿ ಗೃಹ ಪ್ರವೇಶ ಮಾಡಿಸಿದ್ದ ಹರೀಶ್ ಮದುವೆ ಸಿದ್ಧತೆಯಲ್ಲಿದ್ದ. ಇದಕ್ಕಾಗಿ ನ.3ರಂದು ಕೆಲಸಕ್ಕೆ ರಜೆ ಪಡೆದು ಆಮಂತ್ರಣ ಪತ್ರಿಕೆ ಹಂಚುವುದರಲ್ಲಿ ತೊಡಗಿದ್ದ. ಮೊನ್ನೆ ರಾತ್ರಿ ಹಾಸನದಿಂದ ರಾತ್ರಿ ವೇಳೆ ತನ್ನ ಸ್ವಂತ ಊರಿಗೆ ತೆರಳುತ್ತಿದ್ದಾಗ, ದುದ್ದ ಗ್ರಾಮದ ಬಳಿಯ ಡಾಬಾ ಸರ್ಕಲ್ ಬಳಿಯ ರೈಲ್ವೇ ಬ್ರಿಡ್ಜ್ ಹತ್ತಿರ ಏಕಾಏಕಿ ದುಷ್ಕರ್ಮಿಗಳು ಮೆಣಸಿನ ಪುಡಿ ಎರಚಿ ತಲವಾರು ದಾಳಿ ನಡೆಸಿದ್ದಾರೆ. ತಲೆಗೆ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೇ ಹರೀಶ್ ಕೊಲೆಯಾಗಿದ್ದ.
ಯೋಧ ಮತ್ತು ಪೊಲೀಸ್ ಪೇದೆ ಹರೀಶ್ ನಡುವಿನ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆನಂತರ, ಬುದ್ಧಿ ಹೇಳಿ ಇಬ್ಬರನ್ನೂ ಕಳುಹಿಸಲಾಗಿತ್ತು. ಆದರೆ, ಪತ್ನಿಯ ಪೀಕಲಾಟದಿಂದ ಬೇಸತ್ತಿದ್ದ ಯೋಧನೇ ಈ ಕೊಲೆ ಮಾಡಿರಬೇಕು ಎನ್ನುವ ಶಂಕೆ ಹರಡಿದೆ. ಆದರೆ ಪೊಲೀಸರು ತನಿಖೆ ನಡೆಸುತ್ತಿದ್ದು, ಈವರೆಗೂ ಯಾರನ್ನೂ ಬಂಧಿಸಿರುವ ಬಗ್ಗೆ ಖಚಿತಪಡಿಸಿಲ್ಲ.
Police constable murder in Hassan, affair with soliders wife reason for deadly murder says sources. A police constable attached to the Karnataka State Industrial Security Force (KSISF), Bengaluru, was brutally murdered over an alleged illicit relationship near his native village in Hassan on Monday night. The victim is identified as BV Harish, a native of Bageshpura in Arasikere taluk.
19-02-26 09:29 pm
mangalore
ಪರಮೇಶ್ವರ್ ಅಥವಾ ಡಿಕೆಶಿ ಯಾರಾಗ್ತಾರೆ ಮುಂದಿನ ಮುಖ್ಯ...
19-02-26 03:11 pm
ವಿಧಾನಸೌಧ ಒಳಗಡೆ ಮಾಧ್ಯಮಗಳಿಗೆ ಲಕ್ಷ್ಮಣ ರೇಖೆ ; ಭದ್...
18-02-26 09:02 pm
ಮಹಾರಾಷ್ಟ್ರದಿಂದ ಬೈಕ್ ನಲ್ಲಿ ಬಾಗಲಕೋಟಗೆ ಬರುತ್ತಿದ...
18-02-26 06:03 pm
ಊಟಕ್ಕೆ ತೆರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ ; ಬೈಕ್...
17-02-26 10:33 pm
19-02-26 11:04 pm
mangalore
'ಉಚಿತ' ಕೊಡುಗೆಗಳು ದೇಶದ ಅಭಿವೃದ್ಧಿಗೆ ಅಡ್ಡಿ ; ಆದಾ...
19-02-26 10:10 pm
ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಶೋಚನೀಯ ಸ್ಥಿತಿ ; ಕ...
17-02-26 08:50 pm
ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು ಸಾವಿನ ಬೆನ್ನ...
16-02-26 12:53 pm
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
19-02-26 10:37 pm
mangalore
2013ರಲ್ಲಿ ಶಿಲಾನ್ಯಾಸಗೊಂಡಿದ್ದ ಅಬ್ಬಕ್ಕ ಭವನ ನಿರ್ಮ...
19-02-26 09:50 pm
ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹ, ಹೋರಾಟ...
19-02-26 06:08 pm
ನೇತ್ರಾವತಿ ಸೇತುವೆ ಆವರಣ ಗೋಡೆಗೆ ಅಪ್ಪಳಿಸಿದ ಮಿನಿ ಟ...
19-02-26 05:38 pm
ಬೆಳ್ತಂಗಡಿ : ಮಕ್ಕಳು ಕ್ರಿಕೆಟ್ ಆಡುತ್ತಿದ್ದಾಗ ನಿಗೂ...
19-02-26 04:09 pm
18-02-26 09:16 pm
Mangaluru Staffer
Mangalore Shivabagh Suicide: ಕೈ ಕೊಯ್ದುಕೊಂಡು ರ...
18-02-26 07:42 pm
Hassan Murder: ಆಸ್ತಿ ವಿಚಾರಕ್ಕೆ ತಕರಾರು, ಕೋರ್ಟ್...
18-02-26 07:10 pm
ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆ, ಹಡಗುಗಳ ರಹಸ್ಯ ಮಾ...
18-02-26 01:52 pm
ಬೆಚ್ಚಿಬೀಳಿಸಿದ ಎಂಬಿಎ ವಿದ್ಯಾರ್ಥಿನಿ ಹತ್ಯೆ ಪ್ರಕರಣ...
17-02-26 03:03 pm