ಬ್ರೇಕಿಂಗ್ ನ್ಯೂಸ್
22-01-25 11:04 am Mangalore Correspondent ಕ್ರೈಂ
ಮಂಗಳೂರು, ಜ 22: ಹಣ ಡಬಲ್ ಮಾಡುವ ಆಮಿಷವೊಡ್ಡಿ ಸೈಬರ್ ವಂಚಕರು ಮಂಗಳೂರಿನ ವ್ಯಕ್ತಿಯೊಬ್ಬರಿಗೆ 14.31 ಲಕ್ಷ ರೂಪಾಯಿ ವಂಚಿಸಿದ್ದಾರೆ. ಈ ಬಗ್ಗೆ ವಂಚನೆಗೊಳಗಾದ ವ್ಯಕ್ತಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
2024 ಅಕ್ಟೋಬರ್ 26 ರಂದು ಮಂಗಳೂರಿನ ವ್ಯಕ್ತಿ ಶೇರು ಮಾರ್ಕೆಟ್ ನಲ್ಲಿ ಹಣವನ್ನು ಹೂಡಿಕೆ ಮಾಡುವ ಬಗ್ಗೆ ಯೂಟ್ಯೂಬ್ ನಲ್ಲಿ SEBI RGISTRERED FREE TELEGRAM CHANNAL ನ ವಿಡಿಯೋಗಳನ್ನು ನೋಡುತ್ತಿದ್ದರು. ಆಗ Mr. Market Analyst-Mang.By SEBI RA ಚಾನಲ್ ಹೆಸರಿನ ವಿಡಿಯೋ ಬಂದಿದ್ದು, ಆ ಸಂದರ್ಭದಲ್ಲಿ ಈ ವ್ಯಕ್ತಿ ಟೆಲಿಗ್ರಾಂ ಆಪ್ ನಲ್ಲಿ Mr. Market Analyst-Mang.By SEBI RA ಎಂದು ಸರ್ಚ್ ಕೊಟ್ಟಿದ್ದು, ಅದರಲ್ಲಿ Mr.Market Analyst-Mang.By SEBI RA ಎಂಬ ಟೆಲಿಗ್ರಾಂ ಪೇಜ್ ಓಪನ್ ಆಗಿತ್ತು. ಆ ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆದಾಗ, ಅದರಲ್ಲಿ Minimum 5K Investment ಎಂಬ ಮೆಸ್ಸೇಜ್ ಇತ್ತು. ಅಂದರೆ ರೂ 5,000/- ಇನ್ವೆಸ್ಟ್ ಮಾಡಿದರೆ 20,000/- ಲಾಭಾಂಶ ಬರುವುದಾಗಿ ಮೆಸ್ಸೇಜ್ ಬಂದಿತ್ತು. ಹಾಗೆಯೇ ಅದರ ಕೆಳಗಡೆ ವಾಟ್ಸಪ್ ಲಿಂಕ್ ಬಂದಿದ್ದು, ಆ ಲಿಂಕ್ ಅನ್ನು ಪ್ರೆಸ್ ಮಾಡಿದಾಗ ವಂಚಕರಿಗೆ ಕನೆಕ್ಟ್ ಆಗಿತ್ತು.
ವಾಟ್ಸಪ್ ನಲ್ಲಿ ಆರೋಪಿಗಳು dolamaniraksa-3@okaxis ಎಂಬ UPI Id ಲಿಂಕ್ ನ್ನು ಕಳುಹಿಸಿದ್ದು, ಅದಕ್ಕೆ ರೂ. 5,000/- ಹಣವನ್ನು ವರ್ಗಾವಣೆ ಮಾಡಿರುತ್ತಾರೆ. ಆರೋಪಿಗಳ ಮಾತನ್ನು ನಂಬಿ, ಅವರು ತಿಳಿಸಿದಂತೆ ಹಣವನ್ನ ಹೂಡಿಕೆ ಮಾಡಿದರೆ. ಹೂಡಿಕೆ ಮಾಡಿದ ಹಣಕ್ಕೆ ಡಬಲ್ ಮಾಡಿಕೊಡುವುದಾಗಿ ಹೇಳಿದ್ದರು. ಹೀಗೆ ಈ ವ್ಯಕ್ತಿ ದಿನಾಂಕ 27-10-2024 ರಿಂದ 19-12-2024ರ ವರೆಗೆ ಅಪರಿಚಿತ ವ್ಯಕ್ತಿಗಳು ತಿಳಿಸಿದಂತೆ ಅವರು ವಾಟ್ಸಪ್ ಮೂಲಕ ಕಳುಹಿಸಿಕೊಟ್ಟ ವಿವಿಧ ಬ್ಯಾಂಕ್ ಖಾತೆ ಹಾಗೂ UPI Id ಗಳಿಗೆ ಒಟ್ಟು ರೂ 14,36,601/- ರೂ. ಹಣವನ್ನು ವರ್ಗಾವಣೆ ಮಾಡಿದ್ದರು ದೂರಿನಲ್ಲಿ ಮೋಸ ಹೋದ ವ್ಯಕ್ತಿ ಉಲ್ಲೇಖಿಸಿದ್ದಾರೆ.
ಇದೀಗ ಆರೋಪಿಗಳು ಮೊದಲೇ ನಂಬಿಸಿದಂತೆ ಪಿರ್ಯಾದುದಾರರು ಇನ್ವೆಸ್ಟ್ ಮಾಡಿದ ಹಣವನ್ನು ಡಬಲ್ ಮಾಡಿಕೊಡದೇ, ಇನ್ವೆಸ್ಟ್ ಮಾಡಿದ ಹಣವನ್ನು ವಾಪಸ್ ಕೊಡದೇ ಮೋಸ ಹಾಗೂ ವಂಚನೆ ಮಾಡಿರುತ್ತಾರೆ ಎಂದು ಸಂತ್ರಸ್ತ ದೂರು ನೀಡಿದ್ದಾರೆ.
Mangalore man looses 14 lakhs falling to online fraud prey of double money scheme. Case has been registered at the cyber police station. Mr. Market analyst manga, by SEBI ra is the fraud company looting people's money online.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm