ಬ್ರೇಕಿಂಗ್ ನ್ಯೂಸ್
16-12-20 12:53 pm Headline Karnataka News Network ಕ್ರೈಂ
ಕಾನ್ಪುರ, ಡಿ.16: ರಷ್ಯನ್ ಯುವತಿಗೆ ಮತ್ತು ಬರಿಸುವ ಪಾನೀಯ ಕೊಟ್ಟು ಸೇನಾಧಿಕಾರಿಯೇ ಅತ್ಯಾಚಾರಗೈದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರದ ಕೆಂಟ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಕರ್ನಲ್ ದರ್ಜೆಯ ನೀರಜ್ ಗೆಹ್ಲೋಟ್ ಆರೋಪಿ ಸೇನಾಧಿಕಾರಿ. ರಷ್ಯನ್ ಯುವತಿ ಮತ್ತು ಆಕೆಯ ಪತಿ ಲಕ್ನೋದಿಂದ ಕಾನ್ಪುರಕ್ಕೆ ತಿರುಗಾಟಕ್ಕೆ ಬಂದಿದ್ದರು. ಆಕೆಯ ಪತಿ ಕಾನ್ಪುರದ ನಿವಾಸಿಯಾಗಿದ್ದು ಸೇನಾಧಿಕಾರಿಗೆ ಪರಿಚಿತನಾಗಿದ್ದ. ಊರಿಗೆ ಬಂದಿದ್ದ ಗೆಳೆಯನನ್ನು ಸೇನಾಧಿಕಾರಿ ನೀರಜ್ ತನ್ನ ಕಚೇರಿ ಬಂಗಲೆಗೆ ಊಟಕ್ಕೆ ಕರೆದಿದ್ದ. ಹಗಲಿನಲ್ಲಿ ಶಾಪಿಂಗ್ ಮುಗಿಸಿ, ಸಂಜೆಯ ಹೊತ್ತಿಗೆ ಡಿನ್ನರ್ ಗೆಂದು ದಂಪತಿ ಬಂಗಲೆಗೆ ತೆರಳಿದ್ದರು.

ಆದರೆ, ಬಂಗಲೆಯಲ್ಲಿ ಮಾತುಕತೆ ಎಲ್ಲ ಮುಗಿದು ಪಾನೀಯ ಕೊಟ್ಟಿದ್ದಾರೆ. ಆದರೆ, ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಕೊಟ್ಟಿದ್ದು ಅವರಿಗೆ ಗೊತ್ತಾಗಿರಲಿಲ್ಲ. ಪಾನೀಯ ಕುಡಿದ ಪತಿ ಅಮಲಿನಲ್ಲಿ ಬಿದ್ದುಕೊಂಡಿದ್ದಾನೆ. ಈ ವೇಳೆ, ಆತನ ಪತ್ನಿ ರಷ್ಯನ್ ಯುವತಿಯನ್ನು ಸೇನಾಧಿಕಾರಿ ಇನ್ನೊಂದು ಕೊಠಡಿಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಈ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ ಯುವತಿ ಅಧಿಕಾರಿಯನ್ನು ದೂಡಿ ಹಾಕಿದ್ದು, ಪ್ರತಿಯಾಗಿ ಯುವತಿಗೆ ಹಲ್ಲೆಯನ್ನೂ ನಡೆಸಿದ್ದಾನೆ.
ಮರುದಿನ, ಬಂಗಲೆಯಲ್ಲಿ ನಡೆದ ವಿಚಾರವನ್ನು ರಷ್ಯನ್ ಯುವತಿ ತನ್ನ ಪತಿಗೆ ತಿಳಿಸಿದ್ದಾಳೆ. ದಂಪತಿ ಬಳಿಕ ಕೆಂಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸೇನಾಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದೆ.
In a shocking incident, a colonel posted in Uttar Pradesh’s Kanpur allegedly sexually assaulted a Russian woman after inviting her for dinner at the officer’s mess in the city’s Cantt area on December 10. The accused Army officer, identified as Neeraj Gehlot, is on the run.
25-05-26 09:38 pm
HK News Staffer
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
25-05-26 08:18 pm
HK News Staffer
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
ರಾಜ್ಯಸಭೆ ಚುನಾವಣೆ ; ಮಲ್ಲಿಕಾರ್ಜುನ ಖರ್ಗೆ, ದೇವೇಗೌ...
23-05-26 08:47 pm
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
25-05-26 09:57 pm
HK News Staffer
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
25-05-26 11:00 pm
Mangalore Correspondent
ಭಟ್ಕಳದಲ್ಲಿ ಮುರಿದ ಕೋಮು ಸಾಮರಸ್ಯದ ಕಟ್ಟೆ; ರಸ್ತೆ ನ...
25-05-26 09:40 pm
ಮುಸ್ಲಿಂ ಲೀಗ್ ಶಾಸಕನ ಬಗ್ಗೆ ವಾಟ್ಸಾಪ್ ಗ್ರೂಪಿನಲ್ಲಿ...
25-05-26 04:26 pm
ಭಟ್ಕಳದಲ್ಲಿ ದೇವರಕಟ್ಟೆ ನಿರ್ಮಾಣ ವಿಚಾರಕ್ಕೆ ಎರಡು ಗ...
25-05-26 02:23 pm
ಭಟ್ಕಳ ದುರಂತ ; ಮೃತರ ಸಂಖ್ಯೆ 10ಕ್ಕೆ ಏರಿಕೆ, ತಲಾ 5...
25-05-26 09:27 am