ಮದುವೆ ಪಾರ್ಟಿಗೆ ಮದ್ಯ ಕೊಡಿಸದ್ದಕ್ಕೆ ವರನನ್ನೇ ಕೊಂದ ಸ್ನೇಹಿತರು !! 

16-12-20 10:07 pm       Headline Karnataka News Network   ಕ್ರೈಂ

ಮದ್ಯ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಸ್ನೇಹಿತರು ಮದುವೆಯಾದ ಕೆಲವೇ ಗಂಟೆಗಳಲ್ಲಿ ವರನನ್ನು ಕೊಲೆಗೈದ ಘಟನೆ ಉತ್ತರ ಪ್ರದೇಶದ ಪಲಿಮುಕಿಂಪುರ ಗ್ರಾಮದಲ್ಲಿ ನಡೆದಿದೆ.

ಲಕ್ನೋ, ಡಿ.16: ಮದುವೆಯ ಪಾರ್ಟಿಗೆ ಕುಡಿಯಲು ಮದ್ಯ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಸ್ನೇಹಿತರು ಮದುವೆಯಾದ ಕೆಲವೇ ಗಂಟೆಗಳಲ್ಲಿ ವರನನ್ನು ಕೊಲೆಗೈದ ಘಟನೆ ಉತ್ತರ ಪ್ರದೇಶದ ಪಲಿಮುಕಿಂಪುರ ಗ್ರಾಮದಲ್ಲಿ ನಡೆದಿದೆ.

28 ವರ್ಷದ ಬಬ್ಲು ಕೊಲೆಯಾದವ. ಈತನ ಮದುವೆ ಮಂಗಳವಾರ ನಡೆದಿದ್ದು, ಮದುವೆಯಾದ ಕೆಲ ಗಂಟೆಗಳ ನಂತರ ತನ್ನ ಸ್ನೇಹಿತರನ್ನು ಭೇಟಿಯಾಗಲು ಬಂದಿದ್ದ. ಆ ಸಂದರ್ಭ ಸ್ನೇಹಿತರು ಮದುವೆ ಪಾರ್ಟಿ ಮಾಡಿದ್ದಾರೆ. ಪಾರ್ಟಿಯಲ್ಲಿ ಸ್ನೇಹಿತರು ಮದ್ಯ ಕುಡಿದಿದ್ದು, ಇನ್ನಷ್ಟು ಮದ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ. ಈಗಲೇ ಸಾಕಷ್ಟು ಕುಡಿದಿದ್ದು, ಇನ್ನೂ ಮದ್ಯ ಕೊಡಿಸಲು ಸಾಧ್ಯವಿಲ್ಲ ಎಂದು ಬಬ್ಲು ನಿರಾಕರಿಸಿದ್ದಾನೆ.

ಇದೇ ವಿಷಯಕ್ಕೆ ಜಗಳ ಉಂಟಾಗಿ ಸ್ನೇಹಿತನೊಬ್ಬ ಚಾಕು ಇರಿದಿದ್ದಾನೆ. ಗಾಯಗೊಂಡ ಬಬ್ಲುವನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ.

ಮುಖ್ಯ ಆರೋಪಿ ರಾಮ್ ಖಿಲಾಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಐವರು ತಲೆಮರೆಸಿಕೊಂಡಿದ್ದಾರೆ.

A groom was stabbed to death hours after his marriage in Uttar Pradesh's Aligarh district because he refused to provide more liquor to his friends.