Bidar Murder, Crime: ಬೀದರ್ ; ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಗಂಡನಿಗೆ ಗತಿ ತೋರಿಸಿದ ಪತ್ನಿ ! ಕೈಕಾಲು ಕಟ್ಟಿ ಹಲ್ಲೆಗೈದು ಹತ್ಯೆ 

26-02-25 10:48 pm       HK News Desk   ಕ್ರೈಂ

ಮದ್ಯದ ಅಮಲಿನಲ್ಲಿ ಕಿರುಕುಳ ನೀಡುತ್ತಿದ್ದ ತನ್ನ ಪತಿಯನ್ನು ಪತ್ನಿಯೇ ತಾಯಿ- ತಂದೆಯರ ಸಹಾಯದಿಂದ ಹತ್ಯೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬಾಚೇಪಳ್ಳಿ ಗ್ರಾಮದಲ್ಲಿ ನಡೆದಿದೆ. 

ಬೀದರ್, ಫೆ.26 : ಮದ್ಯದ ಅಮಲಿನಲ್ಲಿ ಕಿರುಕುಳ ನೀಡುತ್ತಿದ್ದ ತನ್ನ ಪತಿಯನ್ನು ಪತ್ನಿಯೇ ತಾಯಿ- ತಂದೆಯರ ಸಹಾಯದಿಂದ ಹತ್ಯೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬಾಚೇಪಳ್ಳಿ ಗ್ರಾಮದಲ್ಲಿ ನಡೆದಿದೆ. 

ಮೃತನನ್ನು ಶ್ರೀಧರ ಶಿವರಾಜ್ (30) ಎಂದು ಗುರುತಿಸಲಾಗಿದೆ. ಆರು ವರ್ಷಗಳ ಹಿಂದೆ, ಶ್ರೀಧರ್ ಪಕ್ಕದ ಗ್ರಾಮದ ಸವಿತಾ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.

ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಶ್ರೀಧರ್, ಮದ್ಯಪಾನ ಮಾಡಿ ಮನೆಗೆ ಬಂದು ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ. ಕಿರುಕುಳವನ್ನು ಸಹಿಸಲಾಗದೆ, ಸವಿತಾ  ಫೆಬ್ರವರಿ 25ರಂದು ತನ್ನ ತಾಯಿ ವಿಜಯಲಕ್ಷ್ಮಿ ಮತ್ತು ತಂದೆ ಶಶಿಕಾಂತ್ ಅವರನ್ನು ಮನೆಗೆ ಕರೆಸಿಕೊಂಡಿದ್ದು ರಾತ್ರಿಯಿಡೀ ಜಗಳ ಮಾಡಿದ್ದಾರೆ.‌ ಗಲಾಟೆ ತೀವ್ರಗೊಂಡು, ಸವಿತಾ ತನ್ನ ಹೆತ್ತವರ ಜೊತೆಗೂಡಿ ಶ್ರೀಧರ್ ಮೇಲೆ ಹೊಡೆದು ಗಾಯಗೊಳಿಸಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 

ಆತನ ಕೈಕಾಲುಗಳನ್ನು ಕಟ್ಟಿ, ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದರಿಂದ ಸಾವು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ತಂದೆ ಶಿವರಾಜ್ ದೂರು ನೀಡಿದ ಹಿನ್ನೆಲೆಯಲ್ಲಿ ಸಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bidar murder, Husband killed by wife after fight over drinking. The deceased has been identified as Shridhar Shivaraj.