ಬ್ರೇಕಿಂಗ್ ನ್ಯೂಸ್
07-03-25 05:51 pm HK News Desk ಕ್ರೈಂ
ಕಾಸರಗೋಡು, ಮಾ.7 : ಕಾಞಂಗಾಡು ಬಳಿಯ ಮಾವುಂಗಾಲ್ ಎಂಬಲ್ಲಿ ಕ್ರಶರ್ ಮ್ಯಾನೇಜರ್ ಗೆ ಬಂದೂಕು ತೋರಿಸಿ ಬೆದರಿಸಿ 10.20 ಲಕ್ಷ ರೂ. ನಗದನ್ನು ದರೋಡೆಗೈದ ಘಟನೆ ನಡೆದಿದ್ದು, ಕೃತ್ಯದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳನ್ನು ಕೆಲವೇ ಗಂಟೆಗಳ ಅಂತರದಲ್ಲಿ ಕಾಸರಗೋಡು ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ.
ಬಿಹಾರ ಮೂಲದ ಮಹಮ್ಮದ್ ಇಬ್ರಾನ್ ಆಲಂ (21), ಮಹಮ್ಮದ್ ಮಲಿಕ್ (21), ಮಹಮ್ಮದ್ ಫಾರೂಕ್ (30) ಮತ್ತು ಅಸ್ಸಾಂ ಮೂಲದ ಧನಂಜಯ್ ಬೋರಾ (22) ಬಂಧಿತರಾಗಿದ್ದು, ದರೋಡೆಗೈದ ನಗದು ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಾಸರಗೋಡು ಎಸ್ಪಿ ಡಿ. ಶಿಲ್ಪಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬುಧವಾರ ಸಂಜೆ ಕಾಞಂಗಾಡು ಕಲ್ಯಾಣ್ ರಸ್ತೆಯ ಜಾಸ್ ಗ್ರಾನೈಟ್ ಅಗ್ರಿಗೇಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸ್ಟಾಕ್ ಯಾರ್ಡ್ ಮ್ಯಾನೇಜರ್ ಪಿಪಿ ರವೀಂದ್ರನ್ ಎಂಬವರಿಗೆ ಬಂದೂಕು ತೋರಿಸಿ ಅವರ ಕೈಯಲ್ಲಿದ್ದ ನಗದು ಹಣವನ್ನು ದರೋಡೆ ಮಾಡಲಾಗಿತ್ತು. ಸಂಜೆಯಾಗುತ್ತಲೇ ಕ್ರಶರ್ ಕಡೆಯಿಂದ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಇದರ ಬಗ್ಗೆ ತಿಳಿದಿದ್ದ ತಂಡವೊಂದು ಕಾರನ್ನು ಅಡ್ಡಗಟ್ಟಿ ಹಣವಿದ್ದ ಚೀಲವನ್ನು ಎಗರಿಸಿ ಪರಾರಿಯಾಗಿತ್ತು. 10.20 ಲಕ್ಷ ರೂ. ನಗದು ಹಾಗೂ ರವೀಂದ್ರನ್ ಕೈಯಲ್ಲಿದ್ದ ಮೊಬೈಲನ್ನು ಲೂಟಿ ಮಾಡಲಾಗಿತ್ತು. ಈ ಬಗ್ಗೆ ಕೂಡಲೇ ರವೀಂದ್ರನ್ ಅವರು ಕಂಪನಿ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ಹೊಸದುರ್ಗ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದು, ಎಲ್ಲ ಕಡೆಗೂ ಪೊಲೀಸರಿಗೆ ಅಲರ್ಟ್ ಮಾಹಿತಿ ನೀಡಲಾಗಿತ್ತು.
ಆರೋಪಿಗಳು ಪ್ರಯಾಣಿಸಿದ್ದ ಕಾರು ತೆಲಂಗಾಣ ನೋಂದಣಿ ಹೊಂದಿರುವುದು ಮತ್ತು ಆ ವಾಹನವನ್ನು ಕೋಜಿಕ್ಕೋಡ್ ಮೂಲದವರಿಗೆ ಬಾಡಿಗೆ ನೀಡಲಾಗಿತ್ತು ಎನ್ನುವುದು ತಿಳಿದುಬಂದಿತ್ತು. ಜಿಪಿಎಸ್ ಮೂಲಕ ಅದರ ಮಾಲೀಕರು ಸರ್ಚ್ ಮಾಡಿದಾಗ, ವಾಹನ ಕಾಞಂಗಾಡ್ ರೈಲು ನಿಲ್ದಾಣದ ಬಳಿ ನಿಂತಿತ್ತು. ಕೂಡಲೇ ಪೊಲೀಸರು ಅಲ್ಲಿ ತಲುಪುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಅಲ್ಲಿನ ಸಿಸಿಟಿವಿಯಲ್ಲಿ ಆರೋಪಿಗಳು ಮಂಗಳೂರಿನತ್ತ ತೆರಳಿದ ರೈಲಿನಲ್ಲಿ ಹೋಗಿರುವುದು ಪತ್ತೆಯಾಗಿತ್ತು. ಕಾಸರಗೋಡು ಎಸ್ಪಿ ಶಿಲ್ಪಾ ಅವರ ಸೂಚನೆಯಂತೆ ಮಂಗಳೂರಿನ ಪೊಲೀಸರು ರೈಲು ನಿಲ್ದಾಣದಲ್ಲಿ ಶಂಕಿತ ಮೂವರನ್ನು ವಶಕ್ಕೆ ಪಡೆದಿದ್ದರು.
ಆನಂತರ, ಬುಧವಾರ ರಾತ್ರಿಯೇ ಹೊಸದುರ್ಗ ಪೊಲೀಸರು ಮಂಗಳೂರಿಗೆ ಬಂದು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ನಾಲ್ಕನೇ ಆರೋಪಿ ಅಸ್ಸಾಂ ಮೂಲದ ಧನಂಜಯ್ ಬೋರಾನನ್ನು ಆನಂತರ ಮಂಗಳೂರಿನಲ್ಲಿಯೇ ಬಂಧಿಸಲಾಗಿದೆ. ದೂರು ಬಂದ ಕೂಡಲೇ ಪೊಲೀಸರು ಎಲ್ಲ ಕಡೆ ಅಲರ್ಟ್ ಆಗಿದ್ದಲ್ಲದೆ, ಕಾರನ್ನು ಟ್ರೇಸ್ ಮಾಡಿ ಬೆನ್ನತ್ತಿದ್ದರಿಂದ ಆರೋಪಿಗಳನ್ನು ಸುಲಭದಲ್ಲಿ ಬಲೆಗೆ ಕೆಡವಲು ಸಾಧ್ಯವಾಗಿದೆ. ಕಾಞಂಗಾಡು ಡಿವೈಎಸ್ಪಿ ಬಾಬು ಪೆರಿಂಜೋತ್, ಹೊಸದುರ್ಗ ಇನ್ಸ್ ಪೆಕ್ಟರ್ ಪಿ.ಅಜಿತ್ ಕುಮಾರ್, ಎಸ್ಐಗಳಾದ ಅಖಿಲ್, ಜೋಜೊ ಮತ್ತು ಅಪರಾಧ ವಿಭಾಗದ ಪೊಲೀಸರಾದ ಶೈಜು ಮೋಹನ್, ಸನೋಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
The police have arrested four individuals in connection with the alleged armed robbery of ₹10.20 lakh from a crusher manager at Mavungala, Kanhangad, Kasaragod, on Thursday (March 6). The arrested suspects are Bihar natives Muhammed Ebron Alam, 21, Muhammed Malik, 21, and Muhammad Farooq, 30, and Assam native Dhananjan Bora, 22.
14-04-25 09:48 pm
HK News Desk
Bangalore Suicide: ಅಪಾರ್ಟ್ಮೆಂಟ್ನ ನಾಲ್ಕನೇ ಮಹ...
14-04-25 07:51 pm
Kannada comedy actor Bank Janardhan, Death: ಕ...
14-04-25 03:09 pm
SIT, Probe, Dysp Kanakalakshmi: ಸಿಐಡಿ ಡಿವೈಎಸ್...
14-04-25 02:06 pm
Hubballi rape, Encounter, Crime; ಐದು ವರ್ಷದ ಬಾ...
13-04-25 10:58 pm
14-04-25 11:25 pm
HK News Desk
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
Waqf clashes: ವಕ್ಫ್ ವಿರುದ್ಧ ಬೀದಿಗಿಳಿದ ಜನರು ;...
12-04-25 09:01 pm
Indian Mujahideen, Yasin Bhatkal: ಹೈದರಾಬಾದ್ ಬ...
10-04-25 09:10 pm
14-04-25 09:20 pm
Mangalore Correspondent
Drowning Ullal, Mangalore: ಉಳ್ಳಾಲದಲ್ಲಿ ಸಮುದ್ರ...
13-04-25 05:20 pm
ಮಂಗಳೂರಿಗೆ ಮತ್ತೊಂದು ವಂದೇ ಭಾರತ್ ರೈಲು ; ಪ್ರತ್ಯೇಕ...
13-04-25 01:27 pm
Siddaramaiah, caste census, Somanna: ಜಾತಿಗಣತಿ...
12-04-25 10:13 pm
Mangalore Kambala, Dk Shivakumar: ಮುಂದಿನ ವರ್ಷ...
12-04-25 09:43 pm
12-04-25 10:52 pm
Mangalore Correspondent
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm
Cyber Command Centre, Bangalore: ದೇಶದ ಮೊದಲ ಸೈ...
11-04-25 04:38 pm
Davanagere Murder, Suicide, Crime: ಪ್ರೀತಿಸಿ ಮ...
11-04-25 01:52 pm
Mangalore Auto Driver, Kunjathbail, Body, Cri...
11-04-25 11:42 am