13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ್ಟರಲ್ಲಿ ಹೆಣ ಉರುಳಿಸಿದ ಕ್ರೂರಿಗಳು, ಇಬ್ಬರು ರಾಕ್ಷಸರ ಕಾಲಿಗೆ ಪೊಲೀಸರ ಗುಂಡು, ಬೆಚ್ಚಿ ಬಿದ್ದ ಬೆಂಗಳೂರು ! 

01-08-25 04:27 pm       HK News Desk   ಕ್ರೈಂ

13 ವರ್ಷದ ಬಾಲಕನನ್ನು ಟ್ಯೂಷನ್ ಗೆ ಹೋಗಿ ಬರುವ ವೇಳೆ ಕಿಡ್ನಾಪ್ ಮಾಡಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಬೆಂಗಳೂರು, ಆಗಸ್ಟ್ 1 : 13 ವರ್ಷದ ಬಾಲಕನನ್ನು ಟ್ಯೂಷನ್ ಗೆ ಹೋಗಿ ಬರುವ ವೇಳೆ ಕಿಡ್ನಾಪ್ ಮಾಡಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮೃತ ಬಾಲಕನನ್ನ ನಿಶ್ಚಿತ್ ಎಂದು ಗುರುತಿಸಲಾಗಿದೆ. 

ಕಗ್ಗಲೀಪುರದ ಅರಕೆರೆಯ ಶಾಂತಿನಿಕೇತನ ಬಡಾವಣೆಯಿಂದ ಕಿಡ್ನಾಪ್ ಮಾಡಲಾಗಿದ್ದು, ಸ್ಥಳದಲ್ಲಿ ಆತನ ಸೈಕಲ್ ಪತ್ತೆಯಾಗಿತ್ತು. ಗೋಪಾಲಕೃಷ್ಣ ಎಂಬ ಪರಿಚಯದ ವ್ಯಕ್ತಿಯೇ ಬೈಕ್‌ನಲ್ಲಿ ಕರೆದುಕೊಂಡು ಹೀಗಿ, 5 ಲಕ್ಷಕ್ಕೆ ಪೋಷಕರಿಂದ ಡಿಮ್ಯಾಂಡ್ ಮಾಡಿದ್ದ. ದುಷ್ಕರ್ಮಿಗಳು ಬಾಲಕನ ಕತ್ತು ಸೀಳಿ ಕೊಲೆ ಮಾಡಿ, ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ.

ದುರ್ಷರ್ಮಿಗಳಿಂದ ಹಣಕ್ಕೆ ಬೇಡಿಕೆ ಬಂದ ತಕ್ಷಣ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದರು. ಬೆಂಗಳೂರಲ್ಲಿ ಖಾಸಗಿ ಕಾಲೇಜ್ ಉಪನ್ಯಾಸಕನ ಪುತ್ರ ನಿಶ್ಚಿತ್ ಪೋಷಕರು 5 ಲಕ್ಷ ರೂ ತಯಾರು ಮಾಡಿ ಇಟ್ಟಿದ್ರೂ ಕೂಡಾ ಬಾಲಕನನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಉಂಡ ಮನೆಗೆ ದ್ರೋಹ ಬಗೆದ್ನಾ ಗುರುಮೂರ್ತಿ ?

ಅಚ್ಯುತ್ ಮನೆಯಲ್ಲಿ ಹೆಚ್ಚುವರಿ ಡ್ರೈವರ್ ಆಗಿದ್ದ ಗುರುಮೂರ್ತಿಯೇ ಬಾಲಕನ ಕಿಡ್ನಾಪ್ ಗೆ ಪ್ಲ್ಯಾನ್ ಮಾಡಿದ್ದ ಎನ್ನಲಾಗಿದೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಗುರುಮೂರ್ತಿ ಪರಿಚಯದ ವ್ಯಕ್ತಿಯಿಂದಲೇ ಕಿಡ್ನಾಪ್ ನಡೆದಿದೆ. ಹೊರವಲಯದ ಅರಣ್ಯ ಪ್ರದೇಶದ ಬಳಿಗೆ ಕರೆದೊಯ್ದು ಕೊಲೆ ಮಾಡಿ, ನಂತರ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ನಂತರ ಪೆಟ್ರೋಲ್ ಸುರಿದು ಸುಟ್ಟುಹಾಕುವ ಕೆಲಸ ಮಾಡಿದ್ದಾರೆ. 

ಇಬ್ಬರು ಆರೋಪಿಗಳು ಕಗ್ಗಲಿಪುರ ಅರಣ್ಯದಲ್ಲಿ ಅಡಗಿ ಕುಳಿತ್ತಿದ್ದರು.‌ ಖಚಿತ ಮಾಹಿತಿ ಆಧರಿಸಿ ಗುರುವಾರ ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕಾರ್ಯಾಚರಣೆ ವೇಳೆ ಪೊಲೀಸರ ಮೇಲೆ ಆರೋಪಿಗಳು ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಪ್ರಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದುಕೊಳ್ಳಲು ಯಶಸ್ವಿಯಾದರು.

ಮೃತ ಬಾಲಕ ನಿಶ್ಚಿತ್ ತಂದೆಗೆ ಪರಿಚಯವಿದ್ದ ಆರೋಪಿಗಳೇ ಕೃತ್ಯ ಎಸಗಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

A 13-year-old schoolboy was allegedly brutally murdered hours after being kidnapped while he was returning home from tuition classes in Hulimavu, on Thursday.