2014 Kulai Sumathi Prabhu Murder Case: 2014 ರಲ್ಲಿ ಕುಳಾಯಿ ಸುಮತಿ ಪ್ರಭು ಕೊಲೆಗೈದು ಚಿನ್ನ ಕಿತ್ತುಕೊಂಡ ಪ್ರಕರಣ ; ತಲೆಮರೆಸಿಕೊಂಡಿದ್ದ ರಾಜಸ್ಥಾನ, ಯುಪಿ ಮೂಲದ ಆರೋಪಿಗಳ ಬಂಧನ  

08-08-25 12:21 pm       Mangalore Correspondent   ಕ್ರೈಂ

ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಧ್ಯಪ್ರದೇಶ ಮೂಲದ ಆರೋಪಿಯನ್ನು ಸುರತ್ಕಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಮಂಗಳೂರು, ಆ.8 : ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಧ್ಯಪ್ರದೇಶ ಮೂಲದ ಆರೋಪಿಯನ್ನು ಸುರತ್ಕಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಉತ್ತರ ಪ್ರದೇಶದ ರಾಮ್ ಪುರ ನಿವಾಸಿ ಶಾಹನಾಜ್ ಬಂಧಿತ ಅರೋಪಿ.

2014ರಲ್ಲಿ ಕುಳಾಯಿ ಬಳಿ ಕೋರಬ್ಬು ಕಲ ಎಂಬಲ್ಲಿ ನಡೆದಿದ್ದ ಸುಮತಿ ಪ್ರಭು ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳು ಸುಮತಿ ಪ್ರಭು ಅವರ ಕತ್ತು ಸೀಳಿ 24 ಪವನ್ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದರು. ಈ ಬಗ್ಗೆ ಅವರ ಪುತ್ರ ಗುರುದಾಸ್ ಪ್ರಭು ಸುರತ್ಕಲ್ ಠಾಣೆಗೆ ದೂರು ನೀಡಿದ್ದು ಅಂದಿನ ಪಿಐ ಎಂ.ಎ. ನಟರಾಜ್ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಳು ಸುರತ್ಕಲ್ ಬಳಿಯ ಕೈಗಾರಿಕೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿದ್ದು ಸುಮತಿ ಪ್ರಭು ಅವರ ಮನೆಯಲ್ಲಿ ಬಾಡಿಗೆ ವಾಸವಿದ್ದರು. ಹಾಗಾಗಿ ಈ ಪ್ರಕರಣ ಅಂದಿನ ದಿನಗಳಲ್ಲಿ ಸಂಚಲನ ಮೂಡಿಸಿತ್ತು. ಕೃತ್ಯದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು. 

ಪ್ರಕರಣ ಭೇದಿಸಿದ್ದ ಪೊಲೀಸರು ರಾಜಸ್ಥಾನದ ನಿವಾಸಿಗಳಾದ ಶಿವರಾಮ್ ಹಾಗೂ ಬಹದ್ದೂರ್ ಸಿಂಗ್, ಉತ್ತರ ಪ್ರದೇಶದ ಶಹನಾಜ್ ಎಂಬವರನ್ನು ಬಂಧಿಸಿದ್ದರು. ಇಬ್ಬರು ಆರೋಪಿಗಳು ಬಳಿಕ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿದ್ದರು. ರಾಜಸ್ಥಾನದ ಬಯಾನ ನಿವಾಸಿ ಶಿವರಾಮ್ ನನ್ನು ಮಾರ್ಚ್ 6ರಂದು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಶಹನಾಜ್‌ನನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬುಧವಾರ ಬಂಧಿಸಿದ್ದು ಮಂಗಳೂರಿಗೆ ಕರೆತರಲಾಗಿದೆ.

The Surathkal police have arrested an accused who had been absconding for over four years in connection with the 2014 murder and gold theft case of Sumathi Prabhu in Kulai.