ಬ್ರೇಕಿಂಗ್ ನ್ಯೂಸ್
13-08-25 05:40 pm Udupi Correspondent ಕ್ರೈಂ
ಕುಂದಾಪುರ, ಆ.13 : ವಾಟ್ಸ್ಆ್ಯಪ್ ಗ್ರೂಪ್ಗೆ ವ್ಯಕ್ತಿಯೊಬ್ಬರನ್ನು ಸೇರಿಸಿ ಕಂಪೆನಿಯಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸಿ ಬಳಿಕ ಅವರ ಬ್ಯಾಂಕ್ ಖಾತೆಯಿಂದಲೇ ಸುಮಾರು 10 ಲಕ್ಷ ರೂ. ಲಪಟಾಯಿಸಿದ ಘಟನೆ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ನಡೆದಿದೆ.
ಕಿರಿಮಂಜೇಶ್ವರ ಗ್ರಾಮದ ನಾಗೂರು ನಿವಾಸಿ ಅಲ್ತಾಫ್ ಹುಸೇನ್ ತನ್ನ ಫೇಸ್ಬುಕ್ ಖಾತೆಯಲ್ಲಿ ಬಂದಿರುವ ಲಿಂಕ್ ಅನ್ನು ತೆರೆದಾಗ ವಾಟ್ಸ್ಆ್ಯಪ್ ಗ್ರೂಪ್ ಒಂದಕ್ಕೆ ಸೇರ್ಪಡೆಯಾಗಿದ್ದರು. ಗ್ರೂಪ್ನಲ್ಲಿದ್ದ ಪರಿನಿಥಿ ಜೈನ್ ಎಂಬ ಮಹಿಳೆ ತಮ್ಮ ಕಂಪೆನಿಯ ಬಗ್ಗೆ ಹೇಳಿಕೊಂಡು ವಿಳಾಸ, ದೂರವಾಣಿ ಸಂಖ್ಯೆ ನೀಡಿ ವಾಟ್ಸ್ಆ್ಯಪ್ ಮೂಲಕ ಷೇರು ಮಾರುಕಟ್ಟೆ ಬಗ್ಗೆ ನಿರಂತರ ಮಾಹಿತಿ ನೀಡಿದ್ದಳು. ಅನುಪ್ ತಿವಾರಿ ಎಂಬಾತನೂ ಪ್ರತಿನಿತ್ಯ ಪ್ರಮುಖ ಷೇರುಗಳ ಮಾಹಿತಿ ಒದಗಿಸುತ್ತಿದ್ದ.
ಕೆಲವು ದಿನಗಳ ಬಳಿಕ ಒಂದು ವೆಬ್ಸೈಟ್ ವಿಳಾಸ ಕಳುಹಿಸಿ ಅದರಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿ ಲಾಗಿನ್ ಐ.ಡಿ. ಮತ್ತು ಪಾಸ್ ವರ್ಡ್ ನೀಡಿದ್ದರು. ಇದಾದ ಬಳಿಕ ವಾಟ್ಸ್ಆ್ಯಪ್ನಲ್ಲಿ ಕಳುಹಿಸಿದ ಬೇರೆ ಬೇರೆ ಬ್ಯಾಂಕ್ ಖಾತೆಗೆ ಅಲ್ತಾಫ್ ಅವರು ತನ್ನ ಬ್ಯಾಂಕ್ ಖಾತೆಯಿಂದ ಒಟ್ಟು 10,15,000 ರೂ. ಪಾವತಿಸಿದ್ದರು. ಅವರ ವೆಬ್ ಸೈಟ್ನಲ್ಲಿ ಹೂಡಿಕೆ ಮಾಡಿದ ಹಣ ಮತ್ತು ಅದರ ಲಾಭಾಂಶದ ಸೇರಿ ದುಪ್ಪಟ್ಟು ಆಗಿ ಒಟ್ಟು ಮೊತ್ತ 75,42,343 ಇದೆ ಎಂದು ತೋರಿಸುತ್ತಿತ್ತು. ಆ ಮೊತ್ತವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ವೆಬ್ ಸೈಟ್ ಖಾತೆ ಬ್ಲಾಕ್ ಆಗಿತ್ತು.
ಈ ಬಗ್ಗೆ ಪರಿನಿಥಿ ಜೈನ್ ಅವರಲ್ಲಿ ಪ್ರಶ್ನಿಸಿದಾಗ ಈ ಮೊತ್ತದಲ್ಲಿ ಶೇ. 20ರಷ್ಟು ಕಮಿಷನ್ ಕಂಪೆನಿಗೆ ನೀಡಬೇಕು ಎಂದಿದ್ದಾಳೆ. ಹೂಡಿಕೆ ಮಾಡಿರುವ ಹಣದಲ್ಲಿ ಕಮಿಷನ್ ಕಡಿತ ಮಾಡಿ ಉಳಿದ ಹಣ ನೀಡುವಂತೆ ಅಲ್ತಾಫ್ ತಿಳಿಸಿದರೆ, ಅದಕ್ಕೆ ಪರಿಮಿಥಿ ಜೈನ್ ಒಪ್ಪದೇ ಇದ್ದಾಗ ಅನುಮಾನಗೊಂಡು ಕಂಪೆನಿಯ ವಿಳಾಸ ಇದ್ದ ಬೆಂಗಳೂರಿನ ಜಾಗಕ್ಕೆ ಹೋಗಿ ವಿಚಾರಿಸಿದರು. ಅಲ್ಲಿ ಅ ಕಂಪೆನಿಯೇ ಇಲ್ಲ ಎಂದು ತಿಳಿದಾಗ ತಾನು ಮೋಸ ಹೋಗಿರುವುದು ಖಚಿತವಾಗಿದ್ದು, ನ್ಯಾಯ ಒದಗಿಸುವಂತೆ ಬೈಂದೂರು ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ.
A man from Uppunda in Byndoor taluk lost over ₹10 lakh after being lured into a fake stock market investment scheme through a WhatsApp group. The scam came to light when he went to the company’s listed address in Bengaluru, only to discover it did not exist.
07-12-25 10:21 pm
HK News Desk
Dog Attack: ಪಾದಚಾರಿಗಳ ಮೇಲೆ ಹುಚ್ಚುನಾಯಿ ದಾಳಿ ;...
07-12-25 10:17 pm
Dog Attack, Davangere: ಮಹಿಳೆ ಮೇಲೆ ರಾಟ್ ವೀಲರ್...
06-12-25 12:33 pm
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
07-12-25 10:45 pm
Udupi Correspondent
Inayat Ali, Mangalore Notice: ನ್ಯಾಶನಲ್ ಹೆರಾಲ್...
07-12-25 03:02 pm
ತಡರಾತ್ರಿ ಮನೆಗೆ ನುಗ್ಗಿ ಕಡಬ ಹೆಡ್ ಕಾನ್ಸ್ ಟೇಬಲ್ ದ...
06-12-25 06:12 pm
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm