ಬ್ರೇಕಿಂಗ್ ನ್ಯೂಸ್
13-10-25 10:04 pm Mangalore Correspondent ಕ್ರೈಂ
ಬಂಟ್ವಾಳ, ಅ.13 : ಗಲ್ಫ್ ಉದ್ಯಮಿಯಾಗಿರುವ ಕೇರಳ ಮೂಲದ 53 ವರ್ಷದ ವ್ಯಕ್ತಿಗೆ ಎರಡನೇ ಮದುವೆಯಾಗಲು ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ನಡೆಸಿದ ಬಂಟ್ವಾಳ ಮೂಲದ ಕಂತ್ರಿಗಳ ತಂಡವೊಂದು ಆತನಿಂದ 45 ಲಕ್ಷಕ್ಕೂ ಹೆಚ್ಚು ಹಣ ಸುಲಿಗೆ ಮಾಡಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೇರಳದ ತಾವರಕಡನ್ ಮೂಲದ ಮಹಮ್ಮದ್ ಅಶ್ರಫ್ ಎಂಬವರು ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿದ್ದು 2024ರ ಸೆಪ್ಟಂಬರ್ನಲ್ಲಿ ಎರಡನೇ ಮದುವೆಗಾಗಿ ಮಂಗಳೂರಿನ ಹೆಣ್ಣು ನೋಡಲು ಬಂದಿದ್ದರು. ಇವರಿಗೆ ಪರಿಚಯದ ಕಡಂಬು ಬಶೀರ್ ಮತ್ತು ಹನಿಟ್ರ್ಯಾಪ್ ರಾಣಿ ಮಾಣಿ ಸೆಫಿಯಾ ಅವರು ಅಶ್ರಫ್ ಗೆ ಹೆಣ್ಣು ತೋರಿಸುವುದಾಗಿ ಭರವಸೆ ನೀಡಿದ್ದಾರೆ. ಬಶೀರ್ ತನ್ನ ಸಂಬಂಧಿಕಳಾಗಿದ್ದ ಆಯಿಷತ್ ಮಿಸ್ರಿಯಾ ಎಂಬಾಕೆಯನ್ನು ವಿಟ್ಲದ ಸರಫುದ್ಧೀನ್ ಹಾಗೂ ಮತ್ತಿಬ್ಬರು ಕರೆತಂದು ಹೆಣ್ಣು ತೋರಿಸುವ ನಾಟಕವಾಡಿದ್ದಾರೆ.


ವಂಚಕರ ನಿಜಬಣ್ಣ ಅರಿಯದ ಮಹಮ್ಮದ್ ಅಶ್ರಫ್ ಹೆಣ್ಣಿಗೆ ಒಪ್ಪಿಗೆ ಸೂಚಿಸಿದ್ದು ಜೊತೆಯಾಗಿ ಕುಳಿತು ಫೊಟೋ, ವೀಡಿಯೋ ಮಾಡಿಸಿದ್ದಾರೆ. ಕೆಲದಿನಗಳ ಬಳಿಕ ಆರೋಪಿಗಳ ಪೈಕಿ ಕಡಂಬು ಬಶೀರ್ ಎಂಬಾತ ಮಹಮ್ಮದ್ ಅಶ್ರಫ್ ಗೆ ಕರೆ ಮಾಡಿದ್ದು ನಿನ್ನ ಮತ್ತು ಆಯಿಷತ್ ಮಿಸ್ರಿಯಾಳ ನಗ್ನ ಫೊಟೋ, ವೀಡಿಯೋಗಳು ನಮ್ಮಲ್ಲಿದ್ದು ಒಂದು ಕೋಟಿ ಹಣ ಕೊಡದಿದ್ದರೆ ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ. ಅಲ್ಲದೇ ಅಶ್ರಫ್ ಅವರ ಮೊದಲ ಪತ್ನಿ ಮತ್ತು ಸಂಬಂಧಿಕರ ಮೊಬೈಲಿಗೆ ಎಐನಿಂದ ಮಾಡಿದ್ದ ವೀಡಿಯೋ ಹಾಕಿದ್ದಾರೆ.
ಇದರಿಂದ ಬೆದರಿದ ಅಶ್ರಫ್ ಅವರು ಆರೋಪಿಗಳಿಗೆ ಇಪ್ಪತ್ತು ಲಕ್ಷ ನೀಡಿದ್ದಾರೆ. ಬಳಿಕ ಮತ್ತೆ ಬಶೀರ್, ಸರಫುದ್ಧೀನ್ ಹಾಗೂ ಇತರರು ಅಶ್ರಫ್ ಅವರನ್ನು ಕರೆಸಿಕೊಂಡು ಕೋಣೆಯಲ್ಲಿ ಕೂಡಿ ಹಾಕಿ ಥಳಿಸಿದ್ದು ಮತ್ತೆ ಮೂವತ್ತು ಲಕ್ಷ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಮರ್ಯಾದೆಗೆ ಅಂಜಿದ ಅಶ್ರಫ್ ಅವರು ಸರಪುದ್ಧೀನ್ ಖಾತೆಗೆ ಒಂಬತ್ತು ಲಕ್ಷ, ಬಶೀರ್, ಸೆಪಿಯಾ ಹಾಗೂ ಮತ್ತಿತರ ಆರೋಪಿಗಳಿಗೂ ಒಟ್ಟು ಇಪ್ಪತ್ನಾಲ್ಕು ಲಕ್ಷ ನೀಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಇಷ್ಟೆಲ್ಲ ಹಣ ನೀಡಿದ್ದರೂ ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ ಮಹಮ್ಮದ್ ಅಶ್ರಫ್ ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಅ ಕ್ರ : 145/2025 ಕಲಂ : 318(4), 308(2), 115(2), 351(2), r/w 3(5) ಬಿಎನ್ಎಸ್ -2023ರಂತೆ ಪ್ರಕರಣ ದಾಖಲಾಗಿದೆ.
More details have emerged in the shocking death of three people who died after falling into a well in Kottarakkara.The accident occurred when the handrail of an 80-foot-deep well collapsed. The victims have been identified as Archana (33) of Neduvathoor, who jumped into the well, her friend Sivakrishnan (22) and Soni S Kumar (36) of Attingal and an employee of the fire force unit in Kottarakkara, who tried to save her.
09-11-25 03:47 pm
Bangalore Correspondent
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 03:50 pm
Mangalore Correspondent
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm