ಬ್ರೇಕಿಂಗ್ ನ್ಯೂಸ್
13-10-25 10:04 pm Mangalore Correspondent ಕ್ರೈಂ
ಬಂಟ್ವಾಳ, ಅ.13 : ಗಲ್ಫ್ ಉದ್ಯಮಿಯಾಗಿರುವ ಕೇರಳ ಮೂಲದ 53 ವರ್ಷದ ವ್ಯಕ್ತಿಗೆ ಎರಡನೇ ಮದುವೆಯಾಗಲು ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ನಡೆಸಿದ ಬಂಟ್ವಾಳ ಮೂಲದ ಕಂತ್ರಿಗಳ ತಂಡವೊಂದು ಆತನಿಂದ 45 ಲಕ್ಷಕ್ಕೂ ಹೆಚ್ಚು ಹಣ ಸುಲಿಗೆ ಮಾಡಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೇರಳದ ತಾವರಕಡನ್ ಮೂಲದ ಮಹಮ್ಮದ್ ಅಶ್ರಫ್ ಎಂಬವರು ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿದ್ದು 2024ರ ಸೆಪ್ಟಂಬರ್ನಲ್ಲಿ ಎರಡನೇ ಮದುವೆಗಾಗಿ ಮಂಗಳೂರಿನ ಹೆಣ್ಣು ನೋಡಲು ಬಂದಿದ್ದರು. ಇವರಿಗೆ ಪರಿಚಯದ ಕಡಂಬು ಬಶೀರ್ ಮತ್ತು ಹನಿಟ್ರ್ಯಾಪ್ ರಾಣಿ ಮಾಣಿ ಸೆಫಿಯಾ ಅವರು ಅಶ್ರಫ್ ಗೆ ಹೆಣ್ಣು ತೋರಿಸುವುದಾಗಿ ಭರವಸೆ ನೀಡಿದ್ದಾರೆ. ಬಶೀರ್ ತನ್ನ ಸಂಬಂಧಿಕಳಾಗಿದ್ದ ಆಯಿಷತ್ ಮಿಸ್ರಿಯಾ ಎಂಬಾಕೆಯನ್ನು ವಿಟ್ಲದ ಸರಫುದ್ಧೀನ್ ಹಾಗೂ ಮತ್ತಿಬ್ಬರು ಕರೆತಂದು ಹೆಣ್ಣು ತೋರಿಸುವ ನಾಟಕವಾಡಿದ್ದಾರೆ.


ವಂಚಕರ ನಿಜಬಣ್ಣ ಅರಿಯದ ಮಹಮ್ಮದ್ ಅಶ್ರಫ್ ಹೆಣ್ಣಿಗೆ ಒಪ್ಪಿಗೆ ಸೂಚಿಸಿದ್ದು ಜೊತೆಯಾಗಿ ಕುಳಿತು ಫೊಟೋ, ವೀಡಿಯೋ ಮಾಡಿಸಿದ್ದಾರೆ. ಕೆಲದಿನಗಳ ಬಳಿಕ ಆರೋಪಿಗಳ ಪೈಕಿ ಕಡಂಬು ಬಶೀರ್ ಎಂಬಾತ ಮಹಮ್ಮದ್ ಅಶ್ರಫ್ ಗೆ ಕರೆ ಮಾಡಿದ್ದು ನಿನ್ನ ಮತ್ತು ಆಯಿಷತ್ ಮಿಸ್ರಿಯಾಳ ನಗ್ನ ಫೊಟೋ, ವೀಡಿಯೋಗಳು ನಮ್ಮಲ್ಲಿದ್ದು ಒಂದು ಕೋಟಿ ಹಣ ಕೊಡದಿದ್ದರೆ ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ. ಅಲ್ಲದೇ ಅಶ್ರಫ್ ಅವರ ಮೊದಲ ಪತ್ನಿ ಮತ್ತು ಸಂಬಂಧಿಕರ ಮೊಬೈಲಿಗೆ ಎಐನಿಂದ ಮಾಡಿದ್ದ ವೀಡಿಯೋ ಹಾಕಿದ್ದಾರೆ.
ಇದರಿಂದ ಬೆದರಿದ ಅಶ್ರಫ್ ಅವರು ಆರೋಪಿಗಳಿಗೆ ಇಪ್ಪತ್ತು ಲಕ್ಷ ನೀಡಿದ್ದಾರೆ. ಬಳಿಕ ಮತ್ತೆ ಬಶೀರ್, ಸರಫುದ್ಧೀನ್ ಹಾಗೂ ಇತರರು ಅಶ್ರಫ್ ಅವರನ್ನು ಕರೆಸಿಕೊಂಡು ಕೋಣೆಯಲ್ಲಿ ಕೂಡಿ ಹಾಕಿ ಥಳಿಸಿದ್ದು ಮತ್ತೆ ಮೂವತ್ತು ಲಕ್ಷ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಮರ್ಯಾದೆಗೆ ಅಂಜಿದ ಅಶ್ರಫ್ ಅವರು ಸರಪುದ್ಧೀನ್ ಖಾತೆಗೆ ಒಂಬತ್ತು ಲಕ್ಷ, ಬಶೀರ್, ಸೆಪಿಯಾ ಹಾಗೂ ಮತ್ತಿತರ ಆರೋಪಿಗಳಿಗೂ ಒಟ್ಟು ಇಪ್ಪತ್ನಾಲ್ಕು ಲಕ್ಷ ನೀಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಇಷ್ಟೆಲ್ಲ ಹಣ ನೀಡಿದ್ದರೂ ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ ಮಹಮ್ಮದ್ ಅಶ್ರಫ್ ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಅ ಕ್ರ : 145/2025 ಕಲಂ : 318(4), 308(2), 115(2), 351(2), r/w 3(5) ಬಿಎನ್ಎಸ್ -2023ರಂತೆ ಪ್ರಕರಣ ದಾಖಲಾಗಿದೆ.
More details have emerged in the shocking death of three people who died after falling into a well in Kottarakkara.The accident occurred when the handrail of an 80-foot-deep well collapsed. The victims have been identified as Archana (33) of Neduvathoor, who jumped into the well, her friend Sivakrishnan (22) and Soni S Kumar (36) of Attingal and an employee of the fire force unit in Kottarakkara, who tried to save her.
29-05-26 10:41 pm
HK News Staffer
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾ...
28-05-26 06:18 pm
CM Siddaramaiah, Supporters crying, Kaveri: ಸ...
28-05-26 05:31 pm
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am