Illegal Arms Case, Mahesh Shetty Timarodi: ಅಕ್ರಮ ಶಸ್ತ್ರಾಸ್ತ್ರ ಪ್ರಕರಣ ; ಮಹೇಶ್ ಶೆಟ್ಟಿ ತಿಮರೋಡಿಗೆ ಬಿಗ್ ರಿಲೀಫ್, ಎಫ್ಐಆರ್ ಕ್ರಮಕ್ಕೆ ಹೈಕೋರ್ಟ್ ತಡೆಯಾಜ್ಞೆ

18-10-25 01:52 pm       Mangalore Correspondent   ಕ್ರೈಂ

ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯಿದೆಯಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. 

ಬೆಳ್ತಂಗಡಿ, ಅ.18: ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯಿದೆಯಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. 

ಸೆ.16ರಂದು ಎಸ್ಐಟಿ ತಿಮರೋಡಿ ಮನೆಗೆ ದಾಳಿ ನಡೆಸಿದ ವೇಳೆ ಎರಡು ತಲವಾರು ಮತ್ತು ಬಂದೂಕು ಪತ್ತೆಯಾಗಿತ್ತು. ಎಸ್ಪಿ ಸೈಮನ್ ನೀಡಿದ ದೂರಿನಂತೆ ಮಹೇಶ್ ಶೆಟ್ಟಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆನಂತರ ಮಹೇಶ್ ಶೆಟ್ಟಿ ಬಂಧನ ಆಗುವ ಭಯದಲ್ಲಿ ಭೂಗತರಾಗಿದ್ದರು. ಇದೇ ವೇಳೆ, ಮಂಗಳೂರಿನ ಜಿಲ್ಲಾ ಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆಯಾಗಿತ್ತು.

15 ದಿನಗಳ ಕಾಲ ವಿಚಾರಣೆ ನಡೆದು ಜಿಲ್ಲಾ ಕೋರ್ಟ್ ಜಾಮೀನು ಅರ್ಜಿ ವಜಾ ಮಾಡಿತ್ತು. ಆಬಳಿಕ ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಲಾಗಿತ್ತು. ಇದೀಗ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಾದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು ಯಾವುದೇ ವಿಚಾರಣಾ ಪ್ರಕ್ರಿಯೆ ಕೈಗೊಳ್ಳದಂತೆ ಸೂಚಿಸಿದೆ. ಮಹೇಶ ಶೆಟ್ಟಿ ಪರವಾಗಿ ತಾರನಾಥ ಪೂಜಾರಿ ಮೂಡುಬಿದ್ರೆ, ಎಂ.ಆರ್ ಬಾಲಕೃಷ್ಣ ಸುಳ್ಯ, ಮೋಹಿತ್ ಕುಮಾರ್ ವಾದಿಸಿದ್ದರು.

In a major relief to Sowjanya case activist Mahesh Shetty Timarodi, the Karnataka High Court has issued a stay order on proceedings related to the illegal arms case registered against him at Belthangady Police Station.