Surathkal Stabbing, Crime, Mangalore: ಸುರತ್ಕಲ್ ಬಾರ್ ನಲ್ಲಿ ಎರಡು ತಂಡಗಳ ಗಲಾಟೆ ; ಮುಸ್ಲಿಂ ಯುವಕರಿಬ್ಬರಿಗೆ ಚೂರಿ ಇರಿತ, ರೌಡಿಶೀಟರ್ ಸೇರಿ ನಾಲ್ವರ ಕೃತ್ಯ 

24-10-25 10:07 am       Mangalore Correspondent   ಕ್ರೈಂ

ಸುರತ್ಕಲ್ ಪೇಟೆಯಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಒಂದರಲ್ಲಿ ಎರಡು ತಂಡಗಳ ಮಧ್ಯೆ ಹೊಡೆದಾಟ ನಡೆದಿದ್ದು ಮುಸ್ಲಿಂ ಯುವಕರಿಬ್ಬರಿಗೆ ಚೂರಿ ಇರಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಕಾಟಿಪಳ್ಳ ಕೃಷ್ಣಾಪುರ ನಿವಾಸಿಗಳಾದ ಮುಕ್ಷಿದ್ (28) ಮತ್ತು ನಿಜಾಮ್ (24) ಇರಿತಕ್ಕೊಳಗಾದವರು. 

ಮಂಗಳೂರು, ಅ.24 : ಸುರತ್ಕಲ್ ಪೇಟೆಯಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಒಂದರಲ್ಲಿ ಎರಡು ತಂಡಗಳ ಮಧ್ಯೆ ಹೊಡೆದಾಟ ನಡೆದಿದ್ದು ಮುಸ್ಲಿಂ ಯುವಕರಿಬ್ಬರಿಗೆ ಚೂರಿ ಇರಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಕಾಟಿಪಳ್ಳ ಕೃಷ್ಣಾಪುರ ನಿವಾಸಿಗಳಾದ ಮುಕ್ಷಿದ್ (28) ಮತ್ತು ನಿಜಾಮ್ (24) ಇರಿತಕ್ಕೊಳಗಾದವರು. 

ಮುಕ್ಷಿದ್, ನಿಜಾಮ್ ಮತ್ತು ಇತರ ಇಬ್ಬರು ಸುರತ್ಕಲ್ ನಲ್ಲಿ ದೀಪಕ್ ಬಾರ್ ಅಂಡ್ ರೆಸ್ಟೋರೆಂಟ್ ಗೆ ಮದ್ಯ ಸೇವನೆಗೆ ಬಂದಿದ್ದರು. ಇವರು ಮದ್ಯ ಸೇವಿಸುತ್ತಿದ್ದಾಗ ಅಲ್ಲಿಯೇ ಬೇರೊಂದು ಟೇಬಲ್ನಲ್ಲಿದ್ದ ನಾಲ್ವರ ತಂಡದ ಜೊತೆಗೆ ಜಗಳವಾಗಿದೆ. ಎರಡು ತಂಡಗಳ ಮಧ್ಯೆ ಮಾತಿನ ಜಗಳ ಮುಂದುವರೆದ ಹಿನ್ನೆಲೆಯಲ್ಲಿ ಬಾರ್ ಸಿಬಂದಿ ಎರಡೂ ತಂಡಗಳನ್ನು ಅಲ್ಲಿಂದ ಹೊರಕ್ಕೆ ಕಳುಹಿಸಿದ್ದಾರೆ. ಬಾರ್ ನಿಂದ ಹೊರ ಬಂದ ನಂತರವೂ ಹೊಡೆದಾಟ ನಡೆದಿದ್ದು ಆರೋಪಿಗಳಲ್ಲಿ ಒಬ್ಬಾತ ಚೂರಿಯಿಂದ ಇರಿದಿದ್ದಾನೆ. 

ನಿಜಾಮ್ ಎಂಬಾತನ ಹೊಟ್ಟೆ ಮತ್ತು ಕಿವಿಯ ಭಾಗಕ್ಕೆ ಚೂರಿ ಇರಿತವಾಗಿದ್ದು ಅತನನ್ನು ಆಸ್ಪತ್ರೆಗೆ ದಾಖಲಿಸಿದ್ದು ಅಪಾಯದಿಂದ ಪಾರಾಗಿದ್ದಾನೆ. ಅಡ್ಡ ಬಂದ ಮುಕ್ಷಿದ್ ಮೇಲೂ ಚೂರಿ ಕೈಗೆ ತಾಗಿದ್ದು ಗಾಯವಾಗಿದೆ. ಸುರತ್ಕಲ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಿದ್ದು ಪೊಲೀಸರು ಆರೋಪಿಗಳ ಶೋಧಕ್ಕೆ ಮುಂದಾಗಿದ್ದಾರೆ. ಆರೋಪಿಗಳನ್ನು ಬಜರಂಗದಳ ಕಾರ್ಯಕರ್ತ ಮತ್ತು ಸುರತ್ಕಲ್ ರೌಡಿಶೀಟರ್ ಗುರುರಾಜ್, ಅಲೆಕ್ಸ್ ಸಂತೋಷ್, ಸುಶಾಂತ್, ನಿತಿನ್ ಎಂದು ಗುರುತಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಆರೋಪಿಗಳ ಪತ್ತೆಗೆ ತಂಡವನ್ನು ರಚಿಸಲಾಗಿದೆ, ಶೀಘ್ರದಲ್ಲೇ ಬಂಧನ ಮಾಡುತ್ತೇವೆ ಎಂದು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ. ‌

A violent clash broke out between two groups at a bar and restaurant in Suratkal, Mangaluru, on Thursday night, resulting in a knife attack on two Muslim youths — Muksid (28) and Nizam (24) from Krishnapura, Katipalla. The altercation began inside the bar and continued outside after both groups were asked to leave.