ಬ್ರೇಕಿಂಗ್ ನ್ಯೂಸ್
27-10-25 05:29 pm HK News Desk ಕ್ರೈಂ
ಹಾಸನ, ಅ.27 : ಕೋಟಿ ರೂಪಾಯಿ ಚೀಟಿ ದುಡ್ಡು ಬರುತ್ತೆ, ಹಣ ಸಾಲ ಕೊಟ್ಟರೆ ದುಪ್ಪಟ್ಟು ವಾಪಸ್ ಕೊಡ್ತೇನೆ ಎಂದು ನಂಬಿಸಿ ಹಾಸನದ ಟೈಲರ್ ಮಹಿಳೆಯೊಬ್ಬರು ಮೂರು ಕೋಟಿಗೂ ಅಧಿಕ ಹಣ ವಂಚಿಸಿದ್ದು ಸಂತ್ರಸ್ತ ಮಹಿಳೆಯರು ನಡುರಸ್ತೆಯಲ್ಲೇ ಆಕೆಯ ಕೂದಲು, ರವಿಕೆ ಎಳೆದಾಡಿ ಧರ್ಮದೇಟು ನೀಡಿದ್ದಾರೆ. ಇದರ ಮೊಬೈಲ್ ವಿಡಿಯೋ ಹಾಸನದಲ್ಲಿ ವೈರಲ್ ಆಗಿದೆ.
ವಂಚಕಿ ಟೈಲರ್ ಜುಟ್ಟು ಹಿಡಿದು ವಾಹನಗಳ ಮಧ್ಯೆ ಎಳೆದಾಡಿದ್ದು ಇದರ ದೃಶ್ಯಗಳು ಜಾಲತಾಣದಲ್ಲಿ ವೈರಲ್ ಆಗಿದೆ. ವಂಚಕಿ ಮಹಿಳೆ ವಿರುದ್ಧ ಒಂದೆಡೆ ಪ್ರಕರಣ ದಾಖಲಾಗಿದ್ದರೆ, ತನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಆಕೆಯೂ ದೂರು ಕೊಟ್ಟಿದ್ದಾರೆ.
ಲೇಡಿ ಟೈಲರ್ ಹೇಮಾವತಿ ಎಂಬಾಕೆ ಹಾಸನದ ಅರಳಿಪೇಟೆ ರಸ್ತೆಯಲ್ಲಿ ತನ್ನದೇ ಆದ ಟೈಲರಿಂಗ್ ಅಂಗಡಿ ಹೊಂದಿದ್ದಳು. ಜ್ಯೋತಿ ಡ್ರೆಸ್ ಮೇಕರ್ಸ್ ಎನ್ನುವ ಅಂಗಡಿಯಿದ್ದು ಬಟ್ಟೆ ಕೊಡುತ್ತಿದ್ದ ಮಹಿಳೆಯರ ಬಳಿ ಸಲುಗೆಯಿಂದ ವ್ಯವಹರಿಸುತ್ತಿದ್ದಳು. ಅವರ ಬಳಿ ಮಾತನಾಡುತ್ತ, ಮಗಳಿಗೆ ವಿದೇಶದಲ್ಲಿ ಮಾಸ್ಟರ್ಸ್ ಓದಿಸಬೇಕು. ಈಗ ಕೋಟಿ ರೂಪಾಯಿ ಮೌಲ್ಯದ ಮನೆ ಖರೀದಿಸಿದ್ದೇನೆ ಎಂದು ಹೇಳುತ್ತಿದ್ದಳು. ಸದ್ಯಕ್ಕೆ ಒಂದಷ್ಟು ದುಡ್ಡಿನ ಅಗತ್ಯವಿದೆ, ಕೊಡಚಾದ್ರಿ ಚಿಟ್ಸ್ನಲ್ಲಿ 1 ಕೋಟಿ ರೂ.ಗೂ ಅಧಿಕ ದರಕ್ಕೆ ಚೀಟಿ ಹಾಕಿರುವೆ. ಕೆಲವೇ ತಿಂಗಳಲ್ಲಿ ಆ ಹಣ ಕೈಗೆ ಬರುತ್ತದೆ ಎಂದು ನಕಲಿ ಸ್ಲಿಪ್ಗಳನ್ನು ಮಹಿಳೆಯರಿಗೆ ತೋರಿಸಿ, ಚಿನ್ನ ಅಡವಿಟ್ಟಾದರೂ ಸರಿ ಸಾಲ ಕೊಡಿ ಎಂದು ಕೇಳುತ್ತಿದ್ದಳಂತೆ.
ಹೇಮಾವತಿ ಮಾತನ್ನು ನಂಬಿ ಕೆಲವರು ಚಿನ್ನ ಅಡವಿಟ್ಟು ಆಕೆಗೆ ಹಣ ನೀಡಿದ್ದಾರೆ. ನಿತ್ಯವೂ ಅಂಗಡಿಗೆ ಬರುವ ಮಹಿಳೆಯರನ್ನು ಮರುಳು ಮಾಡಿ, ಹಣ ಪಡೆಯುತ್ತಿದ್ದಳು. 45 ಲಕ್ಷ ರೂ.ಗಿಂತ ಹೆಚ್ಚು ಹಣ ಮೋಸ ಮಾಡಿದ್ದಾರೆ ಎಂದು ಹಾಸನ ನಗರ ಠಾಣೆ, ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ವಂಚಕಿ ಹೇಮಾವತಿ ಅವರಿಗೆ ಟೈಲರ್ ಅಂಗಡಿ ಬಾಡಿಗೆ ಕೊಟ್ಟಿದ್ದ ಮಾಲೀಕರು ಮಾತನಾಡಿ, ಅಂಗಡಿ ಬಾಡಿಗೆ ಎರಡು ವರ್ಷದಿಂದ ಕೊಟ್ಟಿಲ್ಲ. ಬೇಕಂತಲೇ ಹಣ ಕೊಟ್ಟಿಲ್ಲ. ವ್ಯವಹಾರ ಫಲ ಕೊಟ್ಟಿಲ್ಲ ಎಂದರೆ ಏನೋ ಹೇಳಹುದು. ಆದರೆ, ಅಂಗಡಿ ಬ್ಯುಸಿನಸ್ ಚೆನ್ನಾಗಿಯೇ ಇತ್ತು. ಆದರೂ ಬಾಡಿಗೆ ವಾಪಸ್ ಕೊಟ್ಟಿಲ್ಲ. ಮಗಳನ್ನ ವಿದೇಶಕ್ಕೆ ಕಳುಹಿಸಿದ್ದಾರೆ. ಈಕೆ ಬೇರೆ ದುಬಾರಿ ಬಟ್ಟೆ, ಕಾರು ತಗೊಂಡಿದ್ದಾರೆ. ಕೋಟಿ ಬೆಲೆ ಬಾಳುವ ಮನೆ ಖರೀದಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
A shocking incident took place in Hassan, where a local tailor woman allegedly cheated several women of over ₹3 crore, promising to double their money through a “₹1 crore chit fund scheme.” When her fraud came to light, angry victims dragged her by her hair and thrashed her in the middle of the road, as seen in viral videos circulating on social media.
31-12-25 02:35 pm
Bangalore Correspondent
ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಚಕ್ರವರ್ತಿ ಸೂಲಿ...
30-12-25 11:12 pm
ಬಯೋಕಾನ್ ಕಂಪನಿ ಟೆಕ್ಕಿ ಆಫೀಸ್ ಕಟ್ಟಡದ ಆರನೇ ಮಹಡಿಯಿ...
30-12-25 10:14 pm
ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ವಜಾಗೊಳಿಸುವ ಅಧಿಕಾ...
30-12-25 06:34 pm
ಪ್ರಿಯಾಂಕ ಗಾಂಧಿ ಪುತ್ರ ರೈಹಾನ್ ಮದುವೆ ನಿಶ್ಚಿತಾರ್ಥ...
30-12-25 05:44 pm
30-12-25 06:48 pm
HK News Desk
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
31-12-25 03:35 pm
Mangalore Correspondent
ಶೀಘ್ರದಲ್ಲೇ ಸ್ಕ್ಯಾನ್ ಜೆಟ್ ವಿಮಾನ ಸೇವೆ ; ವಿಜಯ್ ಮ...
31-12-25 11:47 am
ಹೊಸ ವರ್ಷಾಚರಣೆ ; ಕಾರ್ಯಕ್ರಮಕ್ಕೆ ಪೂರ್ವಾನುಮತಿ ಅಗತ...
30-12-25 10:43 pm
ಯುವತಿಗೆ ಮಗು ಕರುಣಿಸಿದ ಪ್ರಕರಣ ; ಬಿಜೆಪಿಯಿಂದ ಜಗನ್...
29-12-25 11:03 pm
Punjalkatte Crash: ಪುಂಜಾಲಕಟ್ಟೆ ; ಪೊಲೀಸ್ ಸಿಬಂದ...
29-12-25 08:47 pm
30-12-25 10:40 pm
Mangalore Correspondent
ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬ್ಬಂದಿಗಳಿಗೆ ಹಲ್ಲೆ ;...
30-12-25 12:42 pm
ಯೆಯ್ಯಾಡಿ ಬಳಿ ನಡೆದು ಹೋಗುತ್ತಿದ್ದ ಮಹಿಳೆಯ ಕರಿಮಣಿ...
29-12-25 03:02 pm
ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಮೇಲೆ ಮ...
29-12-25 02:07 pm
ಮೈಸೂರಿನಲ್ಲಿ ಹಾಡಹಗಲೇ ಜುವೆಲ್ಲರಿ ಅಂಗಡಿಗೆ ನುಗ್ಗಿ...
28-12-25 05:19 pm