ಬ್ರೇಕಿಂಗ್ ನ್ಯೂಸ್
29-10-25 02:53 pm Mangalore Correspondent ಕ್ರೈಂ
ಪುತ್ತೂರು, ಅ.29 : ವಿಷನ್ ಇಂಡಿಯಾ ಲಕ್ಕಿ ಸ್ಕೀಂ ಹೆಸರಲ್ಲಿ ದುಬಾರಿ ಗಿಫ್ಟ್ ನೀಡುವುದಾಗಿ ಹೇಳಿ ಜನರನ್ನು ನಂಬಿಸಿ ಹಣ ಸಂಗ್ರಹಿಸುತ್ತಿರುವ ಪ್ರಕರಣ ಪತ್ತೆಹಚ್ಚಿರುವ ಪುತ್ತೂರು ನಗರ ಠಾಣೆ ಪೊಲೀಸರು ಮಂಗಳೂರಿನ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪುತ್ತೂರು ನಗರ ಠಾಣೆಯ ಉಪ ನಿರೀಕ್ಷಕ ಜನಾರ್ದನ ಕೆ.ಎಂ. ಅವರು ಸೋಮವಾರ ಸಂಜೆ 4.30ರ ಹೊತ್ತಿಗೆ ಪುತ್ತೂರು ಪೇಟೆಯಲ್ಲಿ ರೌಂಡ್ಸ್ ನಲ್ಲಿದ್ದಾಗ ಕೋರ್ಟ್ ರಸ್ತೆ ಮತ್ತಿತರ ಕಡೆ ಜನ ಗುಂಪು ಸೇರಿಕೊಂಡು ಲಕ್ಕಿ ಸ್ಕೀಮ್ ಬಗ್ಗೆ ಚರ್ಚಿಸುತ್ತಿರುವುದು ಕಂಡುಬಂತು. ಅವರ ಕೈಯ್ಯಲ್ಲಿ ಲಕ್ಕಿ ಸ್ಟೀಂ ಕುರಿತಾದ ಕರಪತ್ರಗಳಿರುವುದನ್ನು ನೋಡಿ ಪಿಎಸ್ಐ ವಿಚಾರಿಸಿದ್ದಾರೆ. ಒಂದು ಬಾರಿ 23,000 ರೂ. ಹೂಡಿಕೆ ಮಾಡಿದರೆ ಕಾರು, ಚಿನ್ನಾಭರಣ, ನಗದು, ಮೊಬೈಲ್, ಫ್ರೀಜ್, ಗೃಹಪಯೋಗಿ ವಸ್ತುಗಳನ್ನು ನೀಡುವ ಬಗ್ಗೆ ಜನ ಚರ್ಚಿಸುತ್ತಿದ್ದರು. ಕರಪತ್ರ ಪರಿಶೀಲಿಸಿದಾಗ ಅದರಲ್ಲಿ ಸಂಸ್ಥೆಯ ಕಚೇರಿ ವಿಳಾಸ ಇರಲಿಲ್ಲ.
ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಮಂಗಳೂರಿನ ಸಲೀಂ ಮತ್ತು ಅಜೀಜ್ ಎಂಬವರು ವಿಷನ್ ಇಂಡಿಯಾ ಲಕ್ಕಿ ಸ್ಕೀಂ 15ನೇ ತಿಂಗಳ ಡ್ರಾ, ವಿಜೇತರಿಗೆ ಬಂಕರ್ ಬಹುಮಾನ ಎಂದು ಕರಪತ್ರ ಮೂಲಕ ಪ್ರಚಾರ ಮಾಡುತ್ತಿರುವುದು ತಿಳಿಯಿತು. ಅಲ್ಲದೆ, ವಿಜೇತರಿಗೆ ಸೊತ್ತುಗಳನ್ನು ನೀಡಲು ಪುತ್ತೂರಿನ ಮಾರುಕಟ್ಟೆ ರಸ್ತೆಯಲ್ಲಿ ಬಾಡಿಗೆ ಕೋಣೆ ಪಡೆದಿರುವುದು ಗೊತ್ತಾಗಿದೆ.
ಇವರು ನಿಷೇಧಿತ ಸೀಂ ನಡೆಸುತ್ತಿರುವುದು ಶಿಕ್ಷಾರ್ಹ ಅಪರಾಧವಾಗಿದ್ದು ದುಬಾರಿ ಗಿಫ್ಟ್ ಹೆಸರಲ್ಲಿ ಜನರನ್ನು ಯಾಮಾರಿಸುತ್ತಿರುವುದನ್ನು ತಿಳಿದು ವಿಷನ್ ಇಂಡಿಯಾ ಲಕ್ಕಿ ಸ್ಕೀಮ್ ಅಕ್ರಮವಾಗಿ ನಡೆಸುತ್ತಿರುವ ಮಂಗಳೂರಿನ ಅಜೀಜ್ ಮತ್ತು ಸಲಾಂ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
The Puttur City Police have registered a case against two residents of Mangaluru for allegedly running a fake “Vision India Lucky Scheme,” collecting money from the public under the pretext of offering expensive gifts.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
27-07-26 09:48 pm
HK News Staffer
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
27-07-26 10:21 pm
HK News Staffer
ಸಚಿವ ಸ್ಥಾನ ಕೊಡಿಸಲು ಮೂರು ಕೋಟಿ ಬೇಡಿಕೆ ; ಕೇರಳದ ಶ...
27-07-26 09:04 pm
ಬೆಂಗಳೂರು ಗ್ಯಾರೇಜ್ ನಲ್ಲಿ ಅಗ್ನಿ ಅವಘಡ ; ಜಾಗ್ವಾರ...
27-07-26 07:35 pm
ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಲೈಂಗಿಕ ಕಿರುಕುಳ ಆರೋ...
27-07-26 01:09 pm
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am