ಬ್ರೇಕಿಂಗ್ ನ್ಯೂಸ್
26-11-25 02:39 pm Mangalore Correspondent ಕ್ರೈಂ
ಮಂಗಳೂರು, ನ.26 : ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಲಂಡನ್ ಮೂಲದ ಲೇಡಿ ಹೆಸರಲ್ಲಿ ಕರೆ ಮಾಡಿ ಪೌಂಡ್ಸ್ ನೀಡುವುದಾಗಿ ಹೇಳಿ ನಂಬಿಸಿ 13 ಲಕ್ಷ ರೂಪಾಯಿ ಪಡೆದು ವಂಚಿಸಿದ ಘಟನೆ ನಡೆದಿದ್ದು ಮೋಸ ಹೋದ ವ್ಯಕ್ತಿ ಕದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
57 ವರ್ಷದ ದೂರುದಾರರಿಗೆ ಫೇಸ್ ಬುಕ್ನಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ತನ್ನನ್ನು ಲಂಡನ್ ಮೂಲದ ಲಿಲ್ಲಿಯನ್ ಮೇರಿ ಜಾರ್ಜ್ ಎಂದು ಪರಿಚಯಿಸಿದ್ದ ಮಹಿಳೆಯು ಬಳಿಕ ಚಾಟಿಂಗ್ ಮಾಡಿದ್ದರು. ಈ ವೇಳೆ, ನವೆಂಬರ್ ತಿಂಗಳಲ್ಲಿ ಲಂಡನ್ ಪೌಂಡ್ಸ್ ತೆಗೆದುಕೊಂಡು ಭಾರತಕ್ಕೆ ಬರುವುದಾಗಿ ಆಕೆ ತಿಳಿಸಿದ್ದಳು. ಅದರಂತೆ ನ.15ರಂದು ಸೊನಾಲಿ ಗುಪ್ತ ಎನ್ನುವ ಮಹಿಳೆ ಕರೆ ಮಾಡಿ ಲಂಡನ್ ಮಹಿಳೆ ಲಿಲ್ಲಿಯನ್ ಮೇರಿ ಜಾರ್ಜ್ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಅವರು ಟ್ರಾವೆಲರ್ಸ್ ಚೆಕ್ 25,000 ಪೌಂಡ್ಸ್ ಮತ್ತು 1 ಕೆ.ಜಿ. ಚಿನ್ನವನ್ನು ತಂದಿದ್ದು ಭಾರತದ ರೂಪಾಯಿಯಲ್ಲಿ ಪೌಂಡ್ಸ್ ಗೆ ಸುಮಾರು 30 ಲಕ್ಷ ರೂ. ಆಗುತ್ತದೆ ಎಂದು ತಿಳಿಸಿ, ಕರೆಯನ್ನು ಲಿಲ್ಲಿಯನ್ ಗೆ ಕೊಟ್ಟಿದ್ದಾಳೆ.
ಬಳಿಕ ಲಿಲ್ಲಿಯನ್ ಮೇರಿ ಮಾತನಾಡಿ ಆ ಹಣವನ್ನು ಭೇಟಿ ಮಾಡುವ ಸಮಯದಲ್ಲಿ ನೀಡುವುದಾಗಿ ಹೇಳಿ ನಂಬಿಸಿದ್ದಾಳೆ. ಪೌಂಡ್ಸ್ ಕುರಿತು ಎಕ್ಸ್ಚೆಂಜ್ ರಿಜಿಸ್ಟ್ರೇಷನ್, ಡಿಸ್ಕೌಂಟ್ ಚಾರ್ಜಸ್, ಕಸ್ಟಮ್ಸ್ ಡಿಕ್ಲರೇಷನ್ ಫಾರ್ಮ್ ನಲ್ಲಿ ನಮೂದಿಸದೆ ಇರುವ ಬಗ್ಗೆ, ಮನಿ ಲಾಂಡರಿಂಗ್ ಚಾರ್ಜ್ ಬಗ್ಗೆ ಇನ್ನಿತರ ಅನೇಕ ಕಾರಣಗಳನ್ನು ತಿಳಿಸಿದ್ದು ತನ್ನನ್ನು ಪಾರು ಮಾಡಲು ಕೇಳಿಕೊಂಡಿದ್ದಳು. ಈ ವೇಳೆ, ಬೇರೆ ಬೇರೆ ಬ್ಯಾಂಕ್ ಖಾತೆಗಳ ವಿವರವನ್ನು ನೀಡಿ ಹಣ ಪಾವತಿಸಲು ಮಹಿಳೆ ತಿಳಿಸಿದ್ದಾಳೆ. ಅದರಂತೆ ನ.15ರಿಂದ 18ರ ವರೆಗೆ ದೂರುದಾರ ವ್ಯಕ್ತಿಯು ಹಂತ ಹಂತವಾಗಿ ಒಟ್ಟು 13,38,900 ರೂ. ವರ್ಗಾಯಿಸಿದ್ದಾರೆ. ಬಳಿಕ ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ ಎರಡು ದಿನದಲ್ಲಿ ನೀಡುವುದಾಗಿ ಲಿಲ್ಲಿಯನ್ ತಿಳಿಸಿದ್ದಾಳೆ. ಆದರೆ ಆ ಬಳಿಕ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ತಾನು ಮೋಸ ಹೋಗಿರುವುದು ತಿಳಿದಿದ್ದು ಹಣ ಕಳಕೊಂಡ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ರಾಖಲಿಸಿದ್ದಾರೆ.
A 57-year-old man from Mangaluru lost ₹13.38 lakh after being duped by a woman who posed as a London resident and promised £25,000 and 1 kg of gold. Another woman pretended to be from Mumbai Airport Customs and demanded money for clearance charges. Realising he was cheated, the victim filed a complaint at Kadri Police Station.
25-11-25 09:49 pm
HK News Desk
DK Shivakumar: ಮುಖ್ಯಮಂತ್ರಿ ಬದಲಾವಣೆ ನಾಲ್ಕು ಜನರ...
25-11-25 07:58 pm
ವಿಂಜೋ ಗೇಮಿಂಗ್ ಸಂಸ್ಥೆ ಮೇಲೆ ಇಡಿ ದಾಳಿ ; 527 ಕೋಟಿ...
25-11-25 06:58 pm
ಮಂಗಳೂರಿನ ಧನಲಕ್ಷ್ಮಿ ಪೂಜಾರಿ ಪ್ರತಿನಿಧಿಸಿದ ಮಹಿಳಾ...
25-11-25 02:18 pm
ಕಾಶ್ಮೀರಿ ಪಂಡಿತರಿಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ...
25-11-25 12:19 pm
25-11-25 04:30 pm
HK News Desk
ಚೆನ್ನೈ ; ಎರಡು ಖಾಸಗಿ ಬಸ್ಗಳ ನಡುವೆ ಅಪಘಾತ, 6 ಮಂದ...
24-11-25 10:04 pm
ಬಾಲಿವುಡ್ ಚಿತ್ರರಂಗದ ದಂತಕಥೆ, 'ಹೀ ಮ್ಯಾನ್' ಖ್ಯಾತ...
24-11-25 03:37 pm
Explosives Gelatin Sticks, High Alert in Utta...
23-11-25 09:21 pm
ದುಬೈ ಏರ್ ಶೋನಲ್ಲಿ ಭಾರತೀಯ ತೇಜಸ್ ಯುದ್ಧ ವಿಮಾನ ಪತನ...
21-11-25 06:10 pm
26-11-25 03:34 pm
Udupi Correspondent
ಪ್ರಧಾನಿ ಮೋದಿ ಆಗಮನದಿಂದ ಸಂಚಾರ ತೊಡಕು ; ನ.28ರಂದು...
25-11-25 10:51 pm
ಪುಸ್ತಕ ಮೇಳದಲ್ಲಿ ಸಾಹಿತಿಗಳ ಗೌರವಕ್ಕಾಗಿ 25 ಸಾವಿರದ...
25-11-25 10:07 pm
ಕ್ಯಾಂಪ್ಕೋ ಆಡಳಿತ ಮಂಡಳಿಗೆ ಚುನಾವಣೆ ; ಸಹಕಾರ ಭಾರತಿ...
25-11-25 09:53 pm
ಧರ್ಮಸ್ಥಳ ಪ್ರಕರಣ ; ಮೂರು ತಿಂಗಳ ಜೈಲುವಾಸದ ಬಳಿಕ ಚಿ...
24-11-25 10:08 pm
26-11-25 02:39 pm
Mangalore Correspondent
ಎಡಪದವು ; ಯುವಕನಿಗೆ ತಲವಾರು ದಾಳಿ ನಡೆಸಿದ ನಾಲ್ವರು...
26-11-25 12:10 pm
Hubballi Gold Robbery: ಬೆಂಗಳೂರು ದರೋಡೆ ಬೆನ್ನಲ್...
25-11-25 05:03 pm
ಆನ್ಲೈನ್ನಲ್ಲಿ ಅಧಿಕ ಲಾಭದ ಆಸೆಗೆ ಬಿದ್ದ ಹೊನ್ನಾವರ...
24-11-25 08:37 pm
Bajpe Yedapadavu Crime, Mangalore: ಎಡಪದವು ಬಳಿ...
24-11-25 08:37 pm