ಬ್ರೇಕಿಂಗ್ ನ್ಯೂಸ್
11-12-25 09:53 pm HK News Desk ಕ್ರೈಂ
ಹಾಸನ, ಡಿ.11 : ಕೊಲೆ ಮಾಡಿ ಶವದೆದುರು ಸೆಲ್ಪಿ ವಿಡಿಯೋ ಮಾಡಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಆರೋಪಿಯನ್ನು ಹಾಸನ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದು 24 ಗಂಟೆಯಲ್ಲಿ ಆರೋಪಿ ಉಲ್ಲಾಸ್ವ ಕ್ಯಾತೆ ಸೆರೆಯಾಗಿದ್ದಾನೆ.
ಆರೋಪಿಗಳ ಸೆರೆಗೆ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಐದು ತಂಡಗಳನ್ನು ರಚಿಸಿದ್ದರು. ಕೀರ್ತಿ ಎಂಬಾತನ ಕೊಲೆ ನಂತರ ಉಲ್ಲಾಸ್ ಶವದೆದುರು ಸೆಲ್ಫಿ ವಿಡಿಯೋ ಮಾಡಿ ಹಂಚಿಕೊಂಡಿದ್ದ. ಮರ್ಡರ್ ಆಯ್ತು.. ಹೊಡೆದಿದ್ದೀವಿ, ಹೊಡೆದಿದ್ದೀವಿ.. ಮರ್ಡರ್ ಎಂದು ಕೂಗುತ್ತಾ ಸೆಲ್ಪಿ ವಿಡಿಯೋ ಮಾಡಿದ್ದ. ಡಿ.9 ರಂದು ಬಿಟ್ಟಗೌಡನಹಳ್ಳಿಯಲ್ಲಿ ಹಾಸನ ತಾಲ್ಲೂಕಿನ ಹೂವಿನಹಳ್ಳಿ ಯುವಕ ಆಟೋ ಚಾಲಕ ಕೀರ್ತಿ ಎಂಬ ಯುವಕನ ಕೊಲೆಯಾಗಿತ್ತು.
ಉಲ್ಲಾಸ್ ಮತ್ತು ಸ್ನೇಹಿತರು ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ನಂತರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದು ಸ್ಥಳ ಮಹಜರು ವೇಳೆ ಕೃತ್ಯಕ್ಕೆ ಬಳಸಿದ್ದ ಕಲ್ಲು, ಕೊಲೆ ಮಾಡಿದ ಜಾಗ ತೋರಿಸಿದ್ದಾನೆ.
ಕುಡಿದು ಗಲಾಟೆ ಮಾಡಿ ಉಲ್ಲಾಸ್ ಮೇಲೆ ಕೀರ್ತಿ ಹಲ್ಲೆ ಮಾಡಿದ್ದ. ಇದರ ಸೇಡು ತೀರಿಸಿಕೊಳ್ಳಲು ಎಣ್ಣೆ ಪಾರ್ಟಿ ನೆಪದಲ್ಲಿ ಉಲ್ಲಾಸ್ ಮತ್ತು ಸ್ನೇಹಿತರು ಕೀರ್ತಿಯನ್ನು ಕರೆದೊಯ್ದಿದ್ದು ಕೊಲೆ ಮಾಡಿದ್ದರು. ಡಿ.7ರಂದು ಹೊಡೆದಿದ್ದು ಮರುದಿನ ಸ್ನೇಹಿತರ ಜೊತೆ ಬಂದು ಕೀರ್ತಿಯನ್ನು ಎಣ್ಣೆ ಪಾರ್ಟಿಗೆ ಕರೆದೊಯ್ದಿದ್ದ. ಕುಡಿದ ಮತ್ತಿನಲ್ಲಿ ಕೀರ್ತಿಗೆ ಹಲ್ಲೆಗೈದು ನಂತರ ಎದೆ ಭಾಗಕ್ಕೆ ಕಲ್ಲು ಎತ್ತಿ ಹಾಕಿ ಕೀರ್ತಿಯನ್ನು ಕೊಂದಿದ್ದರು. ಪ್ರಮುಖ ಆರೋಪಿ ಸೈಕೋ ಕಿಲ್ಲರ್ ಉಲ್ಲಾಸ್ ಬಂಧನವಾಗುತ್ತಲೇ ಕೊಲೆಯ ಕಾರಣವೂ ಬಯಲಾಗಿದೆ.
In a shocking case where the killer filmed a selfie video beside the victim’s body, Hassan police have arrested the prime accused, Ullas, from Bengaluru within 24 hours of the incident coming to light.
26-04-26 08:05 pm
HK News Staffer
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
ಬಿಎಂಟಿಸಿ ಬಸ್ ಚಲಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘ...
25-04-26 10:56 pm
ಫೇಲ್ ಎನ್ನಲಾಗಿದ್ದ ವಿದ್ಯಾರ್ಥಿನಿ ಟಾಪರ್ ; SSLC...
24-04-26 10:52 pm
ದಾವಣಗೆರೆ ಬಿಸಿ ; ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಜೋ...
24-04-26 02:35 pm
27-04-26 02:48 pm
HK News Staffer
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
ಆಗಷ್ಟೇ ಕಣ್ಬಿಟ್ಟಿದ್ದ ಮಗಳ ಅಂಗಾಂಗ ದಾನದಿಂದ ಮರುಜೀವ...
24-04-26 07:35 pm
28-04-26 09:18 pm
Mangalore Correspondent
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ; 67 ಕ...
26-04-26 04:30 pm
28-04-26 02:36 pm
Mangaluru Staffer
ರೈಲಿನಿಂದ ಕೈಜಾರಿ ಬಿದ್ದ ಮಗು ; ಚೈನ್ ಎಳೆದರೂ ನಿಲ್...
27-04-26 10:04 pm
ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ; ಪ್ರಮುಖ ಆ...
27-04-26 05:42 pm
ಉಡುಪಿಯಲ್ಲಿ ಕಟ್ಟಡಕ್ಕೆ ಬೆಂಕಿ ; ಮೊಬೈಲ್, ಹಾರ್ಡ್...
26-04-26 09:26 pm
ಚಾರ್ಮಾಡಿ ಘಾಟಿಯಲ್ಲಿ ಬಸ್ ಪಲ್ಟಿ; ಧರ್ಮಸ್ಥಳದಲ್ಲಿ ಮ...
26-04-26 09:23 pm