ಬ್ರೇಕಿಂಗ್ ನ್ಯೂಸ್
13-02-26 11:52 am HK News Desk ಕ್ರೈಂ
ನವದೆಹಲಿ, ಫೆ.12: ಡಿಜಿಟಲ್ ವಂಚನೆ ಪ್ರಕರಣಗಳು ಜಗತ್ತಿನಾದ್ಯಂತ ಹೆಚ್ಚುತ್ತಿರುವಾಗಲೇ ಕಾಂಬೋಡಿಯಾದಲ್ಲಿ ನಕಲಿ ಭಾರತೀಯ ಪೊಲೀಸ್ ಠಾಣೆಯನ್ನು ತೆರೆದು ಅದರ ಮೂಲಕವೇ ಸೈಬರ್ ವಂಚನಾ ಜಾಲ ನಡೆಸುತ್ತಿದ್ದುದನ್ನು ತನಿಖಾ ತಂಡ ಪತ್ತೆಹಚ್ಚಿದೆ.
ವಿಯೆಟ್ನಾಂ ಗಡಿಗೆ ಹೊಂದಿಕೊಂಡಿರುವ ಕಾಂಪೊಟ್ ಪ್ರಾಂತ್ಯದಲ್ಲಿ 'ಡಿಜಿಟಲ್ ಅರೆಸ್ಟ್' ಸೇರಿ ವಿವಿಧ ಬಗೆಯ ವಂಚನೆ ಚಟುವಟಿಕೆ ನಡೆಸುತ್ತಿದ್ದ ಖತರ್ನಾಕ್ ಜಾಲವನ್ನು ವಿಯೆಟ್ನಾಂ ಪೊಲೀಸ್ ಪಡೆ ಪತ್ತೆ ಮಾಡಿದೆ. ಅಂತಾರಾಷ್ಟ್ರೀಯ ವಂಚನೆಗಳಿಗೆ ತಡೆ ಹಾಕಲು ಕಾಂಬೋಡಿಯಾ ಪೊಲೀಸರು ಇತ್ತೀಚೆಗೆ ಭಾರಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ 190 ಸ್ಕ್ಯಾಮ್ ಸೆಂಟರ್ಗಳನ್ನು ಪತ್ತೆ ಮಾಡಿ ಜಪ್ತಿ ಮಾಡಲಾಗಿದೆ. 173 ಅಧಿಕಾರಿ ಸೋಗಿನಲ್ಲಿದ್ದ ಸೈಬರ್ ವಂಚಕರನ್ನೂ ಬಂಧಿಸಲಾಗಿದೆ. ಈ ಸೆಂಟರ್ಗಳನ್ನು ಭಾರತೀಯ ಪೊಲೀಸ್ ಠಾಣೆಯೆಂದು ಬಿಂಬಿಸಿ ಜನರನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.
ಭಾರತೀಯರೇ ಟಾರ್ಗೆಟ್ !
ಸೈಬರ್ ಜಾಲದ ಸೂತ್ರಧಾರಿ ಚೀನಾ ಮೂಲದ ಕಿಂಗ್ ಪಿನ್ ಲೀ ಕುಯಾಂಗ್ ಎಂದು ಶಂಕಿಸಲಾಗಿದೆ. ನಕಲಿ ಪೊಲೀಸ್ ಠಾಣೆಯು ಸಿನಿಮಾ ಸೆಟ್ ರೀತಿಯಿದ್ದು ಪಾಳುಬಿದ್ದ ಕಟ್ಟಡ, ಕಾಂಪೌಂಡ್ನಲ್ಲಿ ತಾತ್ಕಾಲಿಕ ಎನ್ನುವಂತೆ ನಿರ್ಮಿಸಲಾಗಿದೆ. ಇದರಲ್ಲಿ ಮುಂಬಯಿ ಪೊಲೀಸ್ ಹಾಗೂ ಸಿಬಿಐ ಲೋಗೊಗಳಿರುವ ನಕಲಿ ಸೈನ್ ಬೋರ್ಡ್ ಗಳಿವೆ. ಎರಡೂ ಬದಿಯಲ್ಲಿ ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿತ್ರ ಹಾಗೂ ಭಾರತದ ರಾಷ್ಟ್ರಧ್ವಜವನ್ನು ಅಳವಡಿಸಲಾಗಿದೆ. ವಿದೇಶಗಳಲ್ಲಿರುವ ಭಾರತೀಯರನ್ನು 'ಡಿಜಿಟಲ್ ಅರೆಸ್ಟ್' ಹೆಸರಲ್ಲಿ ವಂಚಿಸುವ ಜಾಲ ಇದಾಗಿದೆ ಎಂದು ವಿಯೆಟ್ನಾಂ ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಮಂಗಳೂರು ಪೊಲೀಸರು ನೇಪಾಳದಲ್ಲಿದ್ದುಕೊಂಡು ಸೈಬರ್ ವಂಚನೆ ನಡೆಸುತ್ತಿದ್ದ ಜಾಲವನ್ನು ಭೇದಿಸಿದ್ದರು. ಈ ವೇಳೆ, ಇವರಿಗೆ ಕಾಂಬೋಡಿಯಾದಲ್ಲಿ ನೆಟ್ವರ್ಕ್ ಇರೋದು, ಹಣವನ್ನು ಯುಎಸ್ ಡಾಲರಿಗೆ ಪರಿವರ್ತಿಸುವ ಜಾಲ ಇರುವುದು ತಿಳಿದುಬಂದಿತ್ತು. ಮಲೇಶಿಯಾ, ಥಾಯ್ಲೆಂಡಿಗೆ ಉದ್ಯೋಗಕ್ಕೆ ತೆರಳುವ ಭಾರತೀಯರನ್ನೇ ಬಳಸಿಕೊಂಡು ಸೈಬರ್ ವಂಚನಾ ಜಾಲ ನಡೆಸುತ್ತಿರುವುದೂ ಪತ್ತೆಯಾಗಿತ್ತು.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm