ಬ್ರೇಕಿಂಗ್ ನ್ಯೂಸ್
14-02-26 10:47 pm HK Staffer ಕ್ರೈಂ
ನವದೆಹಲಿ, ಫೆ.14: ಪ್ರೇಮಿಗಳ ದಿನಾಚರಣೆ ದಿನವೇ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಜೋಡಿ ದುರಂತ ಅಂತ್ಯಕಂಡ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ನೋಯ್ಡಾದ ಸೆಕ್ಟರ್ 39ರಲ್ಲಿ ಪಾರ್ಕ್ ಮಾಡಿದ್ದ ಟಾಟಾ ಅಲ್ಟ್ರೋಜ್ ಕಾರಿನಲ್ಲಿ ಪ್ರೇಮಿಗಳಾದ ಸುಮಿತ್ ಹಾಗೂ ರೇಖಾ ಎಂಬಿಬ್ಬರ ಶವಗಳು ಪತ್ತೆಯಾಗಿವೆ. ತಮ್ಮ ಕೊನೆಯ ಕ್ಷಣಗಳನ್ನು ಈ ಜೋಡಿ ಇದೇ ಕಾರಿನಲ್ಲಿ ಕಳೆದಿದ್ದಾರೆ. ಸುಮಿತ್ ಹಾಗೂ ರೇಖಾ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದರ ನಡುವೆ, ರೇಖಾಗೆ ಮನೆಯಲ್ಲಿ ಬೇರೆ ವರನನ್ನು ನೋಡಿದ್ದು, ಮದುವೆಗೆ ಮುಂದಾಗಿದ್ದರು. ಈ ವಿಷಯ ತಿಳಿದ ಸುಮಿತ್ ಕೊನೆಯದಾಗಿ ಭೇಟಿಯಾಗುವುದಾಗಿ ಹೇಳಿ ರೇಖಾಳ ಕರೆದಿದ್ದು, ಕಾರಿನಲ್ಲಿ ಕೂರಿಸಿಕೊಂಡು ಸೆಕ್ಟರ್ 39ರ ಬಳಿ ಬಂದಿದ್ದಾನೆ. ಬಳಿಕ ರಿವಾಲ್ವರ್ ತೆಗೆದು ಮೊದಲು ರೇಖಾ ಹಣೆಗೆ ಗುಂಡಿಕ್ಕಿದ್ದರೆ, ಬಳಿಕ ತನ್ನ ತಲೆಗೆ ಗುಂಡಿಕ್ಕಿ ದುರಂತ ಅಂತ್ಯ ಕಂಡಿದ್ದಾರೆ
ಸುಮಿತ್ ಕಳುಗಿಸಿದ ಮೆಸೇಜ್ನಲ್ಲಿ ಪ್ರೀತಿ, ಮದುವೆ ವಿಚಾರ ಹೇಳಿಕೊಂಡಿದ್ದ. ನನ್ನ ನಿರ್ಧಾರಕ್ಕೆ ರೇಖಾ ಕಾರಣ. ಕಳೆದ 15 ವರ್ಷದಿಂದ ನಾವು ಪ್ರೀತಿಸುತ್ತಿದ್ದೇವೆ. ಇದೀಗ ಆಕೆ ಬೇರೆಯೊಬ್ಬನ ಮದುವೆಯಾಗುತ್ತಿದ್ದಾಳೆ. ನನಗೆ ಮೋಸ ಮಾಡಿದ್ದಾಳೆ. ಇದು ನನಗೆ ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಬದುಕು ಅಂತ್ಯಗೊಳಿಸುತ್ತಿದ್ದೇನೆ ಎಂದು ಮೆಸೇಜ್ ಮಾಡಿದ್ದಾನೆ.
ಶುಕ್ರವಾರ ರೇಖಾಳ ಜೊತೆ ತೆರಳಿದ್ದು ಇಬ್ಬರೂ ಮನೆಗೆ ಮರಳಿಲ್ಲ. ಗಾಬರಿಗೊಂಡ ಎರಡೂ ಮನೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಟವರ್ ಲೋಕೇಶನ್ ಪತ್ತೆಹಚ್ಚಿ ಹುಡುಕಿದಾಗ ಕಾರಿನಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಒಳಗಿನಿಂದ ಲಾಕ್ ಮಾಡಿಕೊಂಡು ಇಬ್ಬರೂ ದುರಂತ ಅಂತ್ಯ ಕಂಡಿದ್ದಾರೆ. ಮೇಲ್ನೋಟಕ್ಕೆ ಪ್ರೀತಿ ವಿಚಾರದಲ್ಲಿ ಬದುಕು ಅಂತ್ಯಗೊಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
A young couple was found dead inside a parked car in Sector 39 of Noida on Valentine’s Day, in a suspected case of murder-suicide, police said. The deceased have been identified as Sumit and Rekha, who were reportedly in a relationship for several years. Their bodies were discovered inside a Tata Altroz car that was locked from the inside.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm