ಬ್ರೇಕಿಂಗ್ ನ್ಯೂಸ್
02-01-21 01:12 pm Headline Karnataka News Network ಕ್ರೈಂ
ಕರ್ನೂಲ್, ಜ.2: ಅಂತರ್ಜಾತಿ ಮದುವೆಯಾಗಿದ್ದ 30 ವರ್ಷದ ದಲಿತ ಯುವಕನನ್ನು ಆತನ ಪತ್ನಿ ಮನೆಯವರೇ ಹೊಡೆದು ಕೊಂದು ಹಾಕಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮೃತ ಯುವಕನನ್ನು ಆಡಮ್ ಸ್ಮಿತ್ ಎಂದು ಗುರುತಿಸಲಾಗಿದೆ. ಸ್ಮಿತ್ ಕಳೆದ ಆರು ತಿಂಗಳ ಹಿಂದೆ ಮಹೇಶ್ವರಿ ಎನ್ನುವ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಹೈದರಾಬಾದಿನ ಆರ್ಯ ಸಮಾಜದಲ್ಲಿ ಮದುವೆ ನಡೆದಿತ್ತು. ಮದುವೆ ಬಳಿಕ ಯುವಕ ಮತ್ತು ಯುವತಿ ಕರ್ನೂಲ್ ಜಿಲ್ಲೆಯ ಆದೊನಿ ಪಟ್ಟಣದಲ್ಲಿ ವಾಸವಿದ್ದರು. ಯುವಕ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದರೆ, ಯುವತಿ ಮೇಲ್ಜಾತಿಗೆ ಸೇರಿದ್ದಳು. ಆತನ ಜೊತೆ ಮದುವೆಯಾಗುವುದಕ್ಕೆ ಯುವತಿ ಮನೆಯವರ ಭಾರೀ ವಿರೋಧವಿತ್ತು.


ಆಡಮ್ ಸ್ಮಿತ್ ವೃತ್ತಿಯಲ್ಲಿ ಫಿಸಿಯೋಥೆರಪಿಸ್ಟ್ ಆಗಿದ್ದುದರಿಂದ ಯುವತಿ ಆತನನ್ನು ವರಿಸಲು ಮುಂದಾಗಿದ್ದಳು. ವಿರೋಧ ಮಧ್ಯೆಯೂ ಮದುವೆಯಾಗಿ ಜೊತೆಯಾಗಿದ್ದ ಜೋಡಿ, ಆದೊನಿ ಪಟ್ಟಣದಲ್ಲಿ ವಾಸಕ್ಕೆ ತೊಡಗಿದ್ದರು. ಆದರೆ, ಯುವತಿ ಮನೆಯವರು ಯುವಕನ ವಿರುದ್ಧ ಕತ್ತಿ ಮಸೆಯುತ್ತಲೇ ಇದ್ದರು. ಎರಡು ದಿನಗಳ ಹಿಂದೆ ಬೈಕಿನಲ್ಲಿ ಬರುತ್ತಿದ್ದ ಸ್ಮಿತ್ ನನ್ನು ಅಡ್ಡಹಾಕಿದ್ದ ದುಷ್ಕರ್ಮಿಗಳು ರಾಡ್ ನಲ್ಲಿ ಹೊಡೆದು ಕಲ್ಲು ಎತ್ತಿ ಹಾಕಿ ಕೊಂದಿದ್ದಾರೆ. ಕೊಲೆಗೆ ತಮ್ಮ ಮನೆಯವರೇ ಕಾರಣ ಎಂದು ಪತ್ನಿ ಮಹೇಶ್ವರಿ ದೂರಿದ್ದಾಳೆ. ಇದರಂತೆ, ಪೊಲೀಸರು ತನಿಖೆ ಆರಂಭಿಸಿದ್ದು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
A 30-year-old man was done to death, allegedly by his in-laws at Adoni on Thursday. The deceased has been identified as Adam Smith (30), a resident of the RTC colony in Adoni.
25-05-26 09:38 pm
HK News Staffer
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
25-05-26 08:18 pm
HK News Staffer
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
ರಾಜ್ಯಸಭೆ ಚುನಾವಣೆ ; ಮಲ್ಲಿಕಾರ್ಜುನ ಖರ್ಗೆ, ದೇವೇಗೌ...
23-05-26 08:47 pm
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
25-05-26 09:57 pm
HK News Staffer
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
25-05-26 11:00 pm
Mangalore Correspondent
ಭಟ್ಕಳದಲ್ಲಿ ಮುರಿದ ಕೋಮು ಸಾಮರಸ್ಯದ ಕಟ್ಟೆ; ರಸ್ತೆ ನ...
25-05-26 09:40 pm
ಮುಸ್ಲಿಂ ಲೀಗ್ ಶಾಸಕನ ಬಗ್ಗೆ ವಾಟ್ಸಾಪ್ ಗ್ರೂಪಿನಲ್ಲಿ...
25-05-26 04:26 pm
ಭಟ್ಕಳದಲ್ಲಿ ದೇವರಕಟ್ಟೆ ನಿರ್ಮಾಣ ವಿಚಾರಕ್ಕೆ ಎರಡು ಗ...
25-05-26 02:23 pm
ಭಟ್ಕಳ ದುರಂತ ; ಮೃತರ ಸಂಖ್ಯೆ 10ಕ್ಕೆ ಏರಿಕೆ, ತಲಾ 5...
25-05-26 09:27 am