ಬ್ರೇಕಿಂಗ್ ನ್ಯೂಸ್
18-01-21 06:56 pm Mangalore Correspondent ಕ್ರೈಂ
ಉಳ್ಳಾಲ, ಜ.18: ಹದಿನೈದು ವರ್ಷದ ಹಿಂದೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಬ್ರಾಹ್ಮಣ ಹೆಣ್ಮಗಳನ್ನು ಗಂಡನಿಂದ ದೂರವಾದ ಬಳಿಕ ಉಳ್ಳಾಲ ಎಸ್ ಡಿಪಿಐ ಮುಖಂಡನೊಬ್ಬ ಆಕೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಲ್ಲದೆ ಇಬ್ಬರು ಸಣ್ಣ ಮಕ್ಕಳಿಗೂ ಲೈಂಗಿಕ ಕಿರುಕುಳ ಕೊಟ್ಟಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಎಸ್ ಡಿಪಿಐ ಉಳ್ಳಾಲ ಸಮಿತಿ ಕ್ಷೇತ್ರಾಧ್ಯಕ್ಷ ಸಿದ್ದೀಕ್ ಉಳ್ಳಾಲ್ ಕಾಮುಕ ಕೃತ್ಯ ನಡೆಸಿರುವ ಆರೋಪಿಯಾಗಿದ್ದು ಕೇಸು ದಾಖಲಾಗುತ್ತಲೇ ಪರಾರಿಯಾಗಿದ್ದಾನೆ. ಜನವರಿ 16 ರಂದು ಈತನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದ್ದು ಪೊಲೀಸರು ಗಂಭೀರ ಪ್ರಕರಣವನ್ನು ಹೊರಗೆ ಬಾರದಂತೆ ಮುಚ್ಚಿಟ್ಟಿದ್ದಾರೆಂಬ ಆರೋಪ ಕೇಳಿಬಂದಿದೆ.
ಕೊಣಾಜೆ ನಡುಪದವಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಬ್ರಾಹ್ಮಣ ಯುವತಿಯನ್ನು ಕೇರಳ ಮೂಲದ ಮುಸ್ಲಿಂ ಯುವಕ 15 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಆಕೆಯನ್ನ ಮುಸ್ಲಿಂ ಆಗು ಮತಾಂತರಗೊಳಿಸಿದ್ದ. ಮತಾಂತರ ನಂತರ ಯುವತಿ ಆಕೆಯ ಹೆಸರನ್ನು ಹಿಬಾ ಫಾತಿಮಾ ಎಂದು ಬದಲಿಸಿಕೊಂಡಿದ್ದಳು. ಯುವತಿಯನ್ನು ಪ್ರೀತಿಸಿ ಮದುವೆಯಾದ ಕೇರಳದ ಯುವಕ ಆಕೆಗೆ ಎರಡು ಹೆಣ್ಮಕ್ಕಳನ್ನು ಕರುಣಿಸಿದ ಬಳಿಕ ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದಾನೆ.
ಫಾತಿಮಾ ತನ್ನ 9 ವರ್ಷ ಮತ್ತು 6 ವರ್ಷದ ಎರಡು ಮಕ್ಕಳೊಂದಿಗೆ ಉಳ್ಳಾಲದ ಒಂಭತ್ತುಕೆರೆಯಲ್ಲಿ ವಾಸವಾಗಿದ್ದಳು. ಈ ಸಮಯದಲ್ಲಿ ಉಳ್ಳಾಲದ SDPI ಅಧ್ಯಕ್ಷ ಸಿದ್ದೀಕ್ ಉಳ್ಳಾಲ, ಆಕೆಗೆ ಸಹಾಯ ಮಾಡುವ ನೆಪದಲ್ಲಿ ಪರಿಚಿತನಾಗಿದ್ದ. ಅಲ್ಲದೆ, ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡು ಅಕ್ರಮ ಸಂಬಂಧಕ್ಕೆ ಮುಂದಾಗಿದ್ದ. ಆದರೆ, ಈ ನಡುವೆ ಆತ ಮಹಿಳೆಯ ಇಬ್ಬರು ಮಕ್ಕಳ ಮೇಲೆ ಕಣ್ಣು ಹಾಕಿದ್ದ. ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದ. ಇದರಿಂದ ಎಚ್ಚೆತ್ತ ಮಹಿಳೆ ಕಳೆದ ಜನವರಿ 16 ರಂದು ಉಳ್ಳಾಲ ಠಾಣೆಗೆ ದೂರು ನೀಡಿದ್ದಾಳೆ.
ಮಹಿಳೆಯ ಎರಡು ಹೆಣ್ಮಕ್ಕಳ ಮುಂದೆ ಸಿದ್ದೀಕ್ ಬೆತ್ತಲಾಗಿ ನಿಲ್ಲುತ್ತಿದ್ದನಂತೆ. ಎಚ್ಚೆತ್ತ ಮಹಿಳೆ ಪ್ರತಿಭಟಿಸಿ ದೂರು ಕೊಡುವುದಾಗಿ ಹೇಳಿದ್ದಳು. ಕಳೆದ ಡಿಸೆಂಬರ್ ತಿಂಗಳಲ್ಲೇ ಈ ಬೆಳವಣಿಗೆ ನಡೆದಿದ್ದು ಮಹಿಳೆಗೆ SDPI ಮುಖಂಡರು ಸೇರಿ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾಳೆ. ಇದರಿಂದ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದ ಮಹಿಳೆ, ಇದೀಗ ಮತ್ತೆ ಸಿದ್ದೀಕನ ಕಾಮದಾಟ ಜಾಸ್ತಿ ಯಾಗುತ್ತಿಲೇ ಉಳ್ಳಾಲ ಠಾಣೆಗೆ ದೂರು ನೀಡಿದ್ದು ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ಸಿದ್ದೀಕ್ ಪರಾರಿಯಾಗಿದ್ದಾನೆ.
ಕಳೆದ ಶನಿವಾರ ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಇಂತಹ ಗಂಭೀರ ಪ್ರಕರಣದ ಬಗ್ಗೆ ಹಿರಿಯ ಪೊಲೀಸರು ಮಾತ್ರ ಟಿಕ್ ಪಿಟಿಕ್ ಎನ್ನುತ್ತಿಲ್ಲ. ಆರೋಪಿಯ ಬಂಧನಕ್ಕೂ ಮುಂದಾಗಿಲ್ಲ.
Love jihad and sexual assault to girl child Ullal police registered pocso act against SDPI leader
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 03:26 pm
Bangalore Correspondent
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm