ಬ್ರೇಕಿಂಗ್ ನ್ಯೂಸ್
25-01-21 05:05 pm Headline Karnataka News Network ಕ್ರೈಂ
ಹೈದರಾಬಾದ್, ಜ.25 : ಮೂಢ ನಂಬಿಕೆಗೆ ಬಲಿ ಬಿದ್ದು ಹೆತ್ತವರೇ ತಮ್ಮ ಕೈಯಾರೆ ಬೆಳೆದು ನಿಂತ ಇಬ್ಬರು ಹೆಣ್ಮಕ್ಕಳನ್ನು ಕೊಂದು ಹಾಕಿದ ಘಟನೆ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಪದ್ಮಜಾ ಮತ್ತು ಪುರುಷೋತ್ತಮ ನಾಯ್ಡು ಎಂಬ ದಂಪತಿ, ತಮ್ಮ ಮಕ್ಕಳಾದ ಅಲೇಖ್ಯಾ (27) ಮತ್ತು ಸಾಯಿ ದಿವ್ಯಾ(22) ಅವರನ್ನು ಕೊಲೆಗೈದಿರುವ ಘಟನೆ ಚಿತ್ತೂರು ಜಿಲ್ಲೆಯ ಮದನಪಲ್ಲಿ ಎಂಬಲ್ಲಿ ನಡೆದಿದೆ. ಭಾನುವಾರ ರಾತ್ರಿ ಘಟನೆ ನಡೆದಿದ್ದು ಕಲಿಯುಗ ಇಲ್ಲಿಗೆ ಮುಗಿದಿದ್ದು ಸೋಮವಾರದಿಂದ ಸತ್ಯಯುಗ ಶುರುವಾಗಲಿದೆ. ಸತ್ಯಯುಗದಲ್ಲಿ ತಮ್ಮ ಇಬ್ಬರು ಮಕ್ಕಳು ಮತ್ತೆ ಬದುಕಿ ಬರಲಿದ್ದಾರೆಂದು ದಂಪತಿ ನಂಬಿದ್ದರು. ರಾತ್ರಿ ವೇಳೆ ಮನೆಯಿಂದ ಚೀರಾಟ ಕೇಳಿದ್ದರಿಂದ ನೆರೆಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಪೊಲೀಸರು ಬಂದಾಗ, ದಂಪತಿ ಮನೆಯ ಒಳಗೆ ಬಾರದಂತೆ ತಡೆದಿದ್ದರು. ಬಳಿಕ ಬಲವಂತದಿಂದ ಮನೆಯ ಒಳ ಹೊಕ್ಕು ನೋಡಿದಾಗ ಪೂಜಾ ಕೊಠಡಿ ಮತ್ತೊಂದು ರೂಮಿನಲ್ಲಿ ಯುವತಿಯರ ಶವ ಪತ್ತೆಯಾಗಿದೆ. ಶವಕ್ಕೆ ಕೆಂಪು ಬಟ್ಟೆ ಸುತ್ತಿಟ್ಟಿದ್ದನ್ನು ನೋಡಿ, ಪ್ರಶ್ನಿಸಿದಾಗ ಅವರಿಬ್ಬರು ಮತ್ತೆ ಎದ್ದು ಬರುತ್ತಾರೆ. ನೀವು ಮುಟ್ಟಬೇಡಿ ಎಂದರಂತೆ.
ವಿಶೇಷ ಅಂದ್ರೆ, ಹೆತ್ತವರಿಬ್ಬರೂ ವಿದ್ಯಾವಂತರು. ಪದ್ಮಜಾ ಉಪ ಪ್ರಾಂಶುಪಾಲರಾಗಿದ್ದರೆ, ಪುರುಷೋತ್ತಮ ನಾಯ್ಡು ಬೇರೊಂದು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅದಲ್ಲದೆ, ಹಿರಿ ಮಗಳು ಅಲೇಖ್ಯಾ ಭೋಪಾಲ್ ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾಳೆ. ಇನ್ನೊಬ್ಬ ಮಗಳು ಸಾಯಿ ದಿವ್ಯಾ ಬಿಬಿಎ ಮಾಡಿದ್ದು ಮುಂಬೈನಲ್ಲಿ ಎ.ಆರ್.ರೆಹ್ಮಾನ್ ಮ್ಯೂಸಿಕ್ ಸ್ಕೂಲ್ ನಲ್ಲಿ ವಿದ್ಯಾರ್ಥಿಯಾಗಿದ್ದಳು. ಕಳೆದ ಲಾಕ್ಡೌನ್ ಸಂದರ್ಭದಲ್ಲಿ ದಿವ್ಯಾ ಮನೆಗೆ ಮರಳಿದ್ದಳು.
ಲಾಕ್ಡೌನ್ ವೇಳೆ ಮನೆಯಲ್ಲಿ ದಂಪತಿ ವಿಚಿತ್ರವಾಗಿ ವರ್ತಿಸುತ್ತಿದ್ದರು. ಅದರಲ್ಲೂ ಪ್ರತಿ ಭಾನುವಾರ ರಾತ್ರಿ ವರ್ತನೆ ವಿಚಿತ್ರವಾಗಿರುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಯುವತಿಯರ ಚೀರಾಟ, ಅಳು ಜೋರಾಗಿ ಕೇಳಿದ್ದರಿಂದ ಪೊಲೀಸರಿಗೆ ತಿಳಿಸಿದ್ದರು. ಹೆತ್ತವರೇ ಈ ಕೃತ್ಯವನ್ನು ನಡೆಸಿದ್ದಾರೆಯೇ ಘಟನೆಯಲ್ಲಿ ಇನ್ನಾರದ್ದಾದ್ರೂ ಕೈವಾಡ ಇದೆಯೇ ಎನ್ನುವ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಮೇಲ್ನೋಟಕ್ಕೆ ಡಂಬಲ್ಸ್ ಮಾದರಿಯ ದೊಣ್ಣೆಯಿಂದ ಮಕ್ಕಳನ್ನು ತಾಯಿಯೇ ಹೊಡೆದು ಕೊಂದಿದ್ದಾಳೆ ಎನ್ನಲಾಗಿದೆ. ಪೊಲೀಸರು ಇಬ್ಬರ ಶವವನ್ನು ಪೋಸ್ಟ್ ಮಾರ್ಟಂ ಕಳಿಸಿದ್ದು ದಂಪತಿಯನ್ನು ಬಂಧಿಸಿದ್ದಾರೆ.
In a shocking case of human sacrifice, a mother clubbed her two daughters to death on Sunday night in Madanapalle town of Chittoor district in Andhra Pradesh.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
16-05-25 02:47 pm
Mangalore Correspondent
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm