ಬ್ರೇಕಿಂಗ್ ನ್ಯೂಸ್
01-02-21 03:00 pm Mangalore Correspondent ಕ್ರೈಂ
ಮಂಗಳೂರು, ಫೆ.1: ಒಂದೂವರೆ ವರ್ಷಗಳಿಂದ ಪ್ರೀತಿಸಿ ಕೈಕೊಟ್ಟಿದ್ದ ಯುವತಿಯನ್ನು ಚೂರಿ ಇರಿದು ಹತ್ಯೆಗೈಯಲು ಮುಂದಾದ ಪಾಗಲ್ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನಲ್ಲಿ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಜೊತೆ ಬೋಳೂರಿನ ತ್ರಿಶೂಲ್ ಸಾಲ್ಯಾನ್ (21) ಎಂಬಾತ ಸಂಪರ್ಕದಲ್ಲಿದ್ದು ಇತ್ತೀಚೆಗೆ ಇವರ ಸಂಬಂಧ ಹಳಸಿತ್ತು. ಹಾಗಾಗಿ, 18 ವರ್ಷದ ಯುವತಿ ನಿನ್ನ ಜೊತೆ ಸಂಬಂಧವೇ ಬೇಡ ಎಂದಿದ್ದಳು. ಅಲ್ಲದೆ, ನೀನು ಕೊಟ್ಟಿದ್ದ ರಿಂಗ್ ಸೇರಿ ಎಲ್ಲ ಗಿಫ್ಟ್ ಗಳನ್ನೂ ಹಿಂತಿರುಗಿಸುತ್ತೇನೆ ಎಂದು ಮೊನ್ನೆ ಜ.30ರಂದು ಬಂಟ್ಸ್ ಹಾಸ್ಟೆಲಿಗೆ ಬಂದಿದ್ದಳು. ಇದರಿಂದ ಕಂಗೆಟ್ಟಿದ್ದ ಯುವಕ ತ್ರಿಶೂಲ್, ಅಲ್ಲಿಯೇ ಹಲ್ಲೆ ಮಾಡಲು ಮುಂದಾಗಿದ್ದ.
ಅದೇ ದಿನ ಸಂಜೆ ಯುವತಿ ತನ್ನ ಸ್ನೇಹಿತೆಯ ಹುಟ್ಟುಹಬ್ಬಕ್ಕೆಂದು ಬೆಂದೂರ್ ವೆಲ್ ನಲ್ಲಿರುವ ಕುಮಾರ್ ಇಂಡರ್ನ್ಯಾಶನಲ್ ಹೊಟೇಲಿಗೆ ತೆರಳಿದ್ದಳು. ಅಲ್ಲಿ ಇತರು ಯುವತಿಯರು ಮತ್ತು ಯುವಕರ ಜೊತೆ ಪಾರ್ಟಿ ನಡೆಸುತ್ತಿರುವ ವಿಚಾರ ತಿಳಿದ ತ್ರಿಶೂಲ್, ತನ್ನ ಇತರ ಸಂಗಡಿಗರನ್ನು ಕರೆದೊಯ್ದು ಅಲ್ಲಿ ಆಕೆಯನ್ನು ಕೊಲ್ಲಲು ಮುಂದಾಗಿದ್ದಾನೆ. ಚೂರಿಯಿಂದ ಇರಿಯಲು ಮುಂದಾಗಿದ್ದು, ಹುಡುಗಿ ಅಲ್ಲಿ ತಪ್ಪಿಸಿಕೊಂಡಿದ್ದಾಳೆ. ಅಡ್ಡ ಬಂದಿದ್ದ ಯುವಕ ಪ್ರತೀಕ್ಷ್ ಎಂಬಾತನಿಗೆ ನಾಲ್ಕು ಕಡೆ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ.
ತ್ರಿಶೂಲ್ ಮತ್ತು ಇತರ ಇಬ್ಬರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಚಹರೆ ಆಧರಿಸಿ ಮೂವರನ್ನು ಬಂಧಿಸಿದ್ದಾರೆ. ಕೋಡಿಕಲ್ ನಿವಾಸಿ ಸಂತೋಷ್ ಪೂಜಾರಿ(19) ಮತ್ತು ಅಶೋಕ ನಗರ ನಿವಾಸಿ ಡ್ಯಾನಿಶ್ (18) ಇತರ ಇಬ್ಬರು ಬಂಧಿತರು. ಯುವತಿಯ ಹೆತ್ತವರು ಕೆನಡಾದಲ್ಲಿದ್ದು, ಪುತ್ತೂರಿನ ಅಜ್ಜಿ ಮನೆಯಲ್ಲಿದ್ದುಕೊಂಡು ಮಂಗಳೂರಿನಲ್ಲಿ ಕಲಿಯುತ್ತಿದ್ದಳು. ಈಕೆಗೆ ಇನ್ ಸ್ಟಾ ಗ್ರಾಮಿನಲ್ಲಿ ತ್ರಿಶೂಲ್ ಪರಿಚಯ ಆಗಿತ್ತು ಎಂದು ಪ್ರಕರಣದ ಬಗ್ಗೆ ವಿವರ ನೀಡಿದ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ತ್ರಿಶೂಲ್ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಬಂದರು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಉರ್ವಾ ಠಾಣೆಯಲ್ಲೂ ಕೇಸು ಇದೆ. ಪ್ರತೀಕ್ಷ್ ಕೂಡ, ಯುವತಿಗೆ ಇನ್ ಸ್ಟಾ ಗ್ರಾಮಿನಲ್ಲಿ ಪರಿಚಯ ಆಗಿದ್ದ. ಇನ್ನೊಬ್ಬ ಸ್ನೇಹಿತೆಯೂ ಇನ್ ಸ್ಟಾ ಗ್ರಾಮಿನಲ್ಲಿ ಪರಿಚಯ ಆಗಿದ್ದು ಹುಟ್ಟುಹಬ್ಬಕ್ಕೆ ಕರೆದಿದ್ದಳು. ಪಾರ್ಟಿ ನಡೆಸುತ್ತಿದ್ದಾಗಲೇ ಆರೋಪಿ ತ್ರಿಶೂಲ್ ತಂಡ ಕಟ್ಟಿಕೊಂಡು ಬಂದು ಕೃತ್ಯ ನಡೆಸಿದ್ದಾನೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read: ಮಾಜಿ ಪ್ರೇಯಸಿ ಜೊತೆಗಿದ್ದ ಯುವಕನಿಗೆ ರೌಡಿಯಿಂದ ಹಲ್ಲೆ ; ಹೊಟೇಲ್ ನುಗ್ಗಿ ಕೃತ್ಯ ಸಿಸಿಟಿವಿಯಲ್ಲಿ ಸೆರೆ !
Video:
Boy stabs Ex-girlfriend with his friends and also attacks her friends who were in a party at a local restaurant in Mangalore. The police have arrested three youths in connection to this case.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
22-04-25 07:13 pm
HK News Desk
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 03:26 pm
Bangalore Correspondent
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm