ಬ್ರೇಕಿಂಗ್ ನ್ಯೂಸ್
08-02-21 04:58 pm Headline Karnataka News Network ಕ್ರೈಂ
ಪಾಲಕ್ಕಾಡ್, ಫೆ.8: ಅಲ್ಲಾನನ್ನು ಮೆಚ್ಚಿಸಲು ಗರ್ಭಿಣಿ ಮಹಿಳೆಯೊಬ್ಬರು ತನ್ನ ಆರು ವರ್ಷದ ಮಗುವನ್ನು ಕತ್ತು ಸೀಳಿ ಹತ್ಯೆಗೈದ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ.
30 ವರ್ಷದ ಮದರಸಾ ಶಿಕ್ಷಕಿ ಶಾಹಿದಾ ಈ ಕೃತ್ಯ ಎಸಗಿದ್ದಾರೆ. ತನ್ನ ಮಗನನ್ನು ಅಲ್ಲಾನಿಗೆ ಅರ್ಪಿಸಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.
ಗಲ್ಫ್ ನಿಂದ ಹಿಂತಿರುಗಿದ್ದ ಪತಿ ಮತ್ತೊಂದು ಕೋಣೆಯಲ್ಲಿ ಇಬ್ಬರು ಮಕ್ಕಳೊಂದಿಗೆ ಮಲಗಿದ್ದರು. ಮುಂಜಾನೆ ನಾಲ್ಕು ಗಂಟೆ ವೇಳೆಗೆ ಸಣ್ಣ ಮಗುವನ್ನು ಟಾಯ್ಲೆಟ್ ಗೆ ಕರೆದೊಯ್ದು ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ಮಹಿಳೆಗೆ ಮೂರು ಗಂಡು ಮಕ್ಕಳಿದ್ದು, ಸಣ್ಣ ಮಗು ಆರು ವರ್ಷದವನಿದ್ದ. ಕೊಲೆಗೈದ ಬಳಿಕ ಜ್ಞಾನೋದಯ ಆಯ್ತೋ ಏನೋ. ಕೂಡಲೇ ಪಾಲಕ್ಕಾಡ್ ಕಂಟ್ರೋಲ್ ರೂಮ್ ನಂಬರಿಗೆ ಫೋನ್ ಮಾಡಿ, ಕೃತ್ಯದ ವಿಚಾರವನ್ನು ಹೇಳಿಕೊಂಡಿದ್ದಾಳೆ.

ನಸುಕಿನ 3ರಿಂದ ನಾಲ್ಕು ಗಂಟೆ ಸುಮಾರಿಗೆ ಘಟನೆ ನಡೆದಿತ್ತು. ಇಷ್ಟಾದರೂ, ಪಕ್ಕದ ಕೋಣೆಯಲ್ಲಿ ಮಲಗಿದ್ದ ಪತಿ ಮತ್ತು ಮತ್ತಿಬ್ಬರು ಮಕ್ಕಳಿಗೆ ಈ ವಿಷಯ ತಿಳಿಯಲಿಲ್ಲ. ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ, ಬಾತ್ ರೂಮಿನಲ್ಲಿ ಮಗುವಿನ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿತ್ತು. ಕೈಕಾಲು ಕಟ್ಟಿ ಕತ್ತು ಸೀಳಿದ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿತ್ತು.
ಮಹಿಳೆಯನ್ನು ಬಂಧಿಸಿದ್ದು, ಅಲ್ಲಾಹನಿಗೆ ತ್ಯಾಗ ಮಾಡಲು ಈ ಕೃತ್ಯ ಎಸಗಿದ್ದಾಳೋ ಬೇರಾವುದೋ ಕಾರಣ ಇದೆಯೋ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
13-03-26 09:44 am
HK News Staffer
ಮಗಳಿಗೆ ಮದುವೆಯಾಗದ ಚಿಂತೆಯಲ್ಲಿ ಆಟೋ ಚಾಲಕ ಆತ್ಮಹತ್ಯ...
12-03-26 02:48 pm
13 ವರ್ಷಗಳಿಂದ ಜೀವನ್ಮರಣ ಹೋರಾಟ ; ಕೋಮಾದಲ್ಲಿದ್ದ ಯು...
11-03-26 07:16 pm
ಪರಿಷತ್ ಚುನಾವಣೆಗೆ ಸಿಗದ ಟಿಕೆಟ್ ; ಬಿಜೆಪಿ ರಾಜ್ಯ ಶ...
11-03-26 06:14 pm
ಲಕ್ಕುಂಡಿಯಲ್ಲಿ ಸಿಕ್ಕ ನಿಧಿ 500 ರಿಂದ 600 ವರ್ಷ ಹಳ...
11-03-26 12:57 pm
13-03-26 11:24 am
HK News Staffer
ಅಮೆರಿಕದ ಪಶ್ಚಿಮ ಕರಾವಳಿಗೆ ಇರಾನ್ ದಾಳಿ ಸಾಧ್ಯತೆ ;...
12-03-26 09:03 pm
ನಷ್ಟ ಪರಿಹಾರ ಕೇಳಿದ ಇರಾನ್ ; ಯುದ್ಧ ನಿಲ್ಲಿಸಲು ಮೂರ...
12-03-26 09:01 pm
ಗಲ್ಫ್ ಯುದ್ಧ ; ವಿಷಯುಕ್ತ ಬಿಳಿ ರಂಜಕ ಬಾಂಬ್ ಬಳಕೆ,...
10-03-26 09:46 pm
ಹರ್ಮುಜ್ ಜಲಸಂಧಿಯಲ್ಲಿ ತೈಲ ಹಡಗು ಬಂಧಿ ; ಜಗತ್ತಿಗೆ...
10-03-26 04:30 pm
13-03-26 11:46 am
HK News Staffer
ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯ...
12-03-26 10:47 pm
ಸೈಬರ್ ಜಾಲದ ಮ್ಯೂಲ್ ಅಕೌಂಟ್ ವಂಚನೆ ; ಚೀನಾ ಲಿಂಕ್ ಹ...
12-03-26 02:44 pm
Cyber Fraud Awareness, Mangalore: ಸೈಬರ್ ವಂಚನೆ...
12-03-26 08:33 am
Gas News, Mangalore: ಗಲ್ಫ್ ಯುದ್ಧಕ್ಕೆ ಗ್ಯಾಸ್ ಟ...
11-03-26 09:15 pm
12-03-26 11:20 pm
mangalore
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am
ಕೇರಳ ಚುನಾವಣೆ ಹಿನ್ನೆಲೆ ; ರೈಲಿನಲ್ಲಿ ತಪಾಸಣೆ ಬಿಗಿ...
10-03-26 08:32 pm