ಬ್ರೇಕಿಂಗ್ ನ್ಯೂಸ್
10-02-21 01:39 pm Headline Karnataka News Network ಕ್ರೈಂ
ಲಕ್ನೋ, ಫೆ.10: ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ರೌಡಿಯೊಬ್ಬ ಪೊಲೀಸರ ಮೇಲೆ ದಾಳಿ ನಡೆಸಿ, ಒಬ್ಬ ಪೇದೆಯನ್ನು ಹತ್ಯೆ ಮಾಡಿದ ಘಟನೆ ನಡೆದಿದೆ. ದಾಳಿಯಲ್ಲಿ ಸಬ್ ಇನ್ಸ್ಪೆಕ್ಟರ್ ಒಬ್ಬರು ತೀವ್ರ ಗಾಯಗೊಂಡಿದ್ದಾರೆ.
ಅನಧಿಕೃತ ಸಾರಾಯಿ ಫ್ಯಾಕ್ಟರಿ ಮೇಲೆ ಪೊಲೀಸರು ದಾಳಿ ನಡೆಸಿದ್ದು ಪೇದೆ ದೇವೇಂದ್ರ ಹಾಗೂ ಪಿಎಸ್ಐ ಅಶೋಕ್ ಮೇಲೆ ರೌಡಿಗಳು ಹಲ್ಲೆ ನಡೆಸಿದ್ದಾರೆ. ಇಬ್ಬರು ಪೊಲೀಸರನ್ನು ಸೆರೆ ಹಿಡಿದು, ಬಟ್ಟೆ ಬಿಚ್ಚಿಸಿ ದೊಣ್ಣೆಯಿಂದ ರೌಡಿಗಳು ಹಲ್ಲೆ ನಡೆಸಿದ್ದಾರೆ.
ದಾಳಿಯಿಂದ ತಪ್ಪಿಸಿಕೊಂಡ ಪೊಲೀಸ್ ಪೇದೆಯೊಬ್ಬ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದು ಬಳಿಕ ಹೆಚ್ಚಿನ ಸಂಖ್ಯೆಯ ಪೊಲೀಸರು ಧಾವಿಸಿ ಬಂದಿದ್ದಾರೆ. ಅಷ್ಟರಲ್ಲಿ ರೌಡಿಗಳ ತಂಡ ಓಡಿ ತಪ್ಪಿಸಿಕೊಂಡಿದೆ. ಶೋಧ ನಡೆಸಿದಾಗ, ಎಸ್ಐ ಸೇರಿದಂತೆ ಇಬ್ಬರು ಪೊಲೀಸರು ಹೊಲದ ನಡುವೆ ಬಿದ್ದಿರುವುದು ಪತ್ತೆಯಾಯಿತು. ತೀವ್ರ ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದು ದೇವೇಂದ್ರ ಮೃತಪಟ್ಟರೆ, ಪಿಎಸ್ಐ ಅಶೋಕ್ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಿಕ್ಕರ್ ಕಿಂಗ್ ಪಿನ್ ಸೋದರ ಎನ್ಕೌಂಟರ್ !
ಮಂಗಳವಾರ ರಾತ್ರಿಯಿಂದಲೇ ಘಟನೆ ನಡೆದಿರುವ ನಾಗ್ಲಾ ಧೀಮರ್ ಗ್ರಾಮದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಇಂದು ಬೆಳಗ್ಗೆ ರೌಡಿ ಒಬ್ಬನನ್ನು ಎನ್ಕೌಂಟರ್ ನಡೆಸಿದ್ದಾರೆ. ಕಾಳಿ ನದಿಯ ಬಳಿ ಪೊಲೀಸರು ಮತ್ತು ರೌಡಿಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು ಈ ವೇಳೆ ಮದ್ಯ ಮಾಫಿಯಾದ ಕಿಂಗ್ ಪಿನ್ ಆಗಿರುವ ಮೋತಿ ಧೀಮರ್ ನ ಸೋದರ ಎಲ್ಕಾರ್ ಪೊಲೀಸ್ ಗುಂಡಿಗೆ ಬಲಿಯಾಗಿದ್ದಾನೆ. ಎಲ್ಕಾರ್ ಸಹಚರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ಮಂಗಳವಾರ ಸಂಜೆ ಲಿಕ್ಕರ್ ಮಾಫಿಯಾ ಕಿಂಗ್ ಪಿನ್ ಮೋತಿ ಧೀಮರ್ ಬಂಧನಕ್ಕಾಗಿ ಪೊಲೀಸರು ತೆರಳಿದ್ದರು. ಆದರೆ, ಅಲ್ಲಿದ್ದ ಆತನ ಸಹಚರರು ಪೊಲೀಸರಿಗೇ ಥಳಿಸಿದ್ದರು.
ಘಟನೆ ಹಿನ್ನೆಲೆಯಲ್ಲಿ ಅಪರಾಧಿಗಳನ್ನು ಸಹಿಸುವುದಿಲ್ಲ. ತಪ್ಪಿತಸ್ಥರನ್ನು ಕಠಿಣವಾಗಿ ಶಿಕ್ಷಿಸಲಾಗುವುದು ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ. ಕಳೆದ ಜುಲೈನಲ್ಲಿ ಕುಖ್ಯಾತ ರೌಡಿ ವಿಕಾಸ್ ದುಬೆ ಬಂಧನಕ್ಕೆ ತೆರಳಿದ್ದ ಎಂಟು ಪೊಲೀಸರನ್ನು ರೌಡಿ ಕಡೆಯವರು ಹತ್ಯೆ ಮಾಡಿದ್ದ ಘಟನೆ ನಡೆದಿತ್ತು.
A police constable was killed and a sub-inspector badly wounded after they were attacked by gangsters in Uttar Pradesh's Kasganj district on Tuesday night.
21-05-24 02:43 pm
Bangalore Correspondent
H D Kumaraswamy, congress phone tapping, Praj...
20-05-24 07:03 pm
Zip line accident at Jungle Trailz Bangalore:...
20-05-24 05:53 pm
Bangalore rave party raid, drugs, actors: ಇಲೆ...
20-05-24 01:44 pm
Charmadi Ghat, Blocked: ಚಾರ್ಮಾಡಿ ಘಾಟಿಯಲ್ಲಿ ಕೆ...
20-05-24 12:38 pm
21-05-24 01:33 pm
HK News Desk
Pune porsche accident; ಕುಡಿದ ಮತ್ತಿನಲ್ಲಿ ಪೋರ್ಶ...
20-05-24 08:15 pm
Ebrahim Raisi dead in helicopter crash: ಹೆಲಿಕ...
20-05-24 11:35 am
ಬ್ಯಾಂಕ್ ಖಾತೆಗೆ ಬರೋಬ್ಬರಿ 9900 ಕೋಟಿ ಹಣ ಜಮೆ ; ಮ...
19-05-24 04:30 pm
Priyanka Gandhi, Rahul Gandhi: ರಾಹುಲ್ ಗೆ ದೇಶದ...
18-05-24 10:18 pm
21-05-24 11:56 am
Mangalore Correspondent
Harish Poonaja, Controversy, Mangalore: ಬಿಜೆಪ...
20-05-24 10:43 pm
Mangalore Rain News: ಮಂಗಳೂರಿನಲ್ಲಿ ದಿಢೀರ್ ಬಿರು...
20-05-24 10:34 pm
Mangalore crime, CCB Police, Talapady: ಗಡಿಭಾಗ...
20-05-24 10:17 pm
Mangalore News, Rain, Harekala girl death: ಹ...
20-05-24 09:56 pm
21-05-24 01:28 pm
HK News Desk
Vijayapura crime, truck attack: ವಿಜಯಪುರ ; ಕ್ಯ...
18-05-24 04:05 pm
ಹೊಸದುರ್ಗ ; ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ನಸುಕಿನ...
17-05-24 09:52 pm
Kalaburagi police bus, crime: ಕುಡಿದ ನಶೆಯಲ್ಲಿ...
17-05-24 07:23 pm
7-8 ಬಾರಿ ಎದೆ, ಹೊಟ್ಟೆಗೆ ತಿವಿದಿದ್ದಾನೆ, ನೆಲಕ್ಕೆ...
17-05-24 05:38 pm