ಪುತ್ತೂರು ; ಕುಖ್ಯಾತ ಕಳ್ಳತನ ಆರೋಪಿ ಅಶ್ರಫ್ ತಾರಿಗುಡ್ಡೆ ಅಂದರ್

10-02-21 10:46 pm       Mangaluru Correspondent   ಕ್ರೈಂ

ಪುತ್ತೂರು ನಗರ, ಗ್ರಾಮಾಂತರ, ಉಪ್ಪಿನಂಗಡಿ, ಸುಳ್ಯ, ಬೆಳ್ಳಾರೆ, ಬಂಟ್ವಾಳ, ವಿಟ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹಲವು ಕಳವು ಪ್ರಕರಣದ ಆರೋಪಿ ಅಶ್ರಫ್ ತಾರಿಗುಡ್ಡೆಯನ್ನು ಸಂಪ್ಯ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.

ಪುತ್ತೂರು, ಫೆ.10: ಪುತ್ತೂರು ನಗರ, ಗ್ರಾಮಾಂತರ, ಉಪ್ಪಿನಂಗಡಿ, ಸುಳ್ಯ, ಬೆಳ್ಳಾರೆ, ಬಂಟ್ವಾಳ, ವಿಟ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹಲವು ಕಳವು ಪ್ರಕರಣದ ಆರೋಪಿ ಅಶ್ರಫ್ ತಾರಿಗುಡ್ಡೆಯನ್ನು ಸಂಪ್ಯ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.

ಅಶ್ರಫ್ ತಾರಿಗುಡ್ಡೆ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ 3, ಗ್ರಾಮಾಂತರ ಠಾಣೆಯಲ್ಲಿ 5, ಉಪ್ಪಿನಂಗಡಿ ಠಾಣೆಯಲ್ಲಿ 1, ಸುಳ್ಯ ಠಾಣೆಯಲ್ಲಿ 3, ಬೆಳ್ಳಾರೆ ಠಾಣೆಯಲ್ಲಿ 1, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1, ವಿಟ್ಲ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದ್ದು, ಆರೋಪಿ ಮೇಲೆ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು.

ಗ್ರಾಮಾಂತರ ಠಾಣಾ ಪೊಲೀಸ್ ಎಸ್​​ಐ ಉದಯರವಿ, ಎಎಸ್​​​ಐ ಎಂ.ವೈ. ರಾಮಚಂದ್ರ, ಹೆಡ್ ಕಾನ್​ಸ್ಟೇಬಲ್​ ಧರ್ಮಪಾಲ್, ಕಾನ್​ಸ್ಟೇಬಲ್ ಹರ್ಷಿತ್ ಹಾಗೂ ಹಕೀಮ್ ಅವರ ತಂಡ ಕಾರ್ಯಾಚರಣೆ ನಡೆಸಿ ಕೇರಳದ ಮಲಪುರಂ ಜಿಲ್ಲೆಯಲ್ಲಿ ಆರೋಪಿ ಅಶ್ರಫ್ ತಾರಿಗುಡ್ಡೆಯನ್ನು ಬಂಧಿಸಿದ್ದಾರೆ.

Most wanted thief Ashraf arrested by Sampya Police in Kerala. He was most wanted in many criminal activities.